ಕಬ್ಬು ಬೆಳೆಗಾರ ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿದ ಶಾಸಕ ರಾಜು ಕಾಗೆ

ಕಬ್ಬು ಬೆಳೆಗಾರ  ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿದ ಶಾಸಕ ರಾಜು ಕಾಗೆ MLA Raju Kage expressed support for the struggle of sugarcane farmers

ಕಬ್ಬು ಬೆಳೆಗಾರ  ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿದ ಶಾಸಕ ರಾಜು ಕಾಗೆ 

 ಕಾಗವಾಡ 31: ಸಕ್ಕರೆ ಕರ್ಖಾನೆಗಳು ಕಬ್ಬಿಗೆ ಸೂಕ್ತ ಬೆಲೆ ನೀಡಬೇಕೆಂದು ಆಗ್ರಹಿಸಿ, ಮೂಡಲಗಿ ತಾಲೂಕಿನ ಗರ್ಲಾಪೂರ ಕ್ರಾಸ್ ಬಳಿ ನಡೆಸುತ್ತಿರುವ ಕಬ್ಬು ಬೆಳಗಾರ ರೈತರ ಪ್ರತಿಭಟನೆಗೆ ಕಾಗವಾಡ ಶಾಸಕ ರಾಜು ಕಾಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಶುಕ್ರವಾರ ದಿ. 31 ರಂದು ಉಗಾರ ಖರ್ದ ಪಟ್ಟಣದ ಶಾಸಕರ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಬ್ಬು ಬೆಳೆಗಾರ ರೈತರ ಬೇಡಿಕೆ ನ್ಯಾಯಯುತವಾಗಿದೆ. ಕಳೆದ ಅನೇಕ ರ್ಷಗಳಿಂದ ಮಾರುಕಟ್ಟೆಯಲ್ಲಿ ಬೀಜ, ರಸಗೊಬ್ಬರ, ಕೂಲಿ ಕರ್ಮಿಕರ ವೇತನ ಹೆಚ್ಚಾಗಿದೆ. ಇದಲ್ಲದೇ ಕಳೆದ ಐದಾರು ರ್ಷಗಳಿಂದ ಸಕ್ಕರೆ ಬೆಲೆ ಜಾಸ್ತಿಯಾದರೂ ಕರ್ಖಾನೆಗಳು ರೈತರು ಬೆಳೆದ ಕಬ್ಬಿಗೆ ಸೂಕ್ತ ಬೆಲೆ ನೀಡುತ್ತಿಲ್ಲ. ರೈತರು ಕಳೆದ ಒಂದು ವಾರದಿಂದ ಜಿಲ್ಲೆಯ ವಿವಿಧೆಡೆ ಪ್ರತಿಭಟನೆ ಮಾಡಿ, ಪ್ರಸಕ್ತ ಕಬ್ಬು ನುರಿಸುವ ಹಂಗಾಮಿನಲ್ಲಿ ಸಕ್ಕರೆ ಕರ್ಖಾನೆಗಳು ಪ್ರತಿ ಟನ್ಗೆ ರೂ. 3500 ರಂತೆ ದರ ನೀಡಬೇಕೆಂದು ಒತ್ತಾಯಿಸುತ್ತಿವೆ. ರೈತರ ಬೇಡಿಕೆ ಸೂಕ್ತವಾಗಿದ್ದು, ಜಿಲ್ಲೆಯ ಕರ್ಖಾನೆಗಳು ರೈತರ ಕಬ್ಬಿಗೆ ರೂ. 3500 ಬೆಲೆ ನೀಡಿ. ರೈತರ ಹಿತ ಕಾಪಾಡುವ ಕೆಲಸ ಮಾಡಬೇಕು. ರೈತರ ಹೋರಾಟಕ್ಕೆ ನನ್ನ ಸಂಪರ್ಣ ಬೆಂಬಲವಿದೆ ಎಂದು ತಿಳಿಸಿದ್ದಾರೆ.ಈ ಸಮಯದಲ್ಲಿ ಕಾಗವಾಡ ಮತಕ್ಷೇತ್ರದ ಅನೇಕ ಮುಖಂಡರು ಉಪಸ್ಥಿತರಿದ್ದರು.