ಮಹಿಳೆಯರು ಆರ್ಥಿಕ ವಾಗಿ ಸ್ವಾವಲಂಬಿಗಳಾಗಿ ವೃತ್ತಿ ಕೌಶಲ್ಯದ ಮೂಲಕ ಬದುಕು ರೂಪಿಸಿಕೊಳ್ಳಬೇಕು ಎಂದು ಶಾಸಕ ಕೃಷ್ಣನಾಯಕ

ಮಹಿಳೆಯರು ಆರ್ಥಿಕ ವಾಗಿ ಸ್ವಾವಲಂಬಿಗಳಾಗಿ ವೃತ್ತಿ ಕೌಶಲ್ಯದ ಮೂಲಕ ಬದುಕು ರೂಪಿಸಿಕೊಳ್ಳಬೇಕು ಎಂದು ಶಾಸಕ ಕೃಷ್ಣನಾಯಕ MLA Krishnanayaka says women should become financially independent and build their lives through pr


ಹೂವಿನಹಡಗಲಿ 20:  ಹೊಲಿಗೆ ಯಂತ್ರ ಮೂಲಕ ಗ್ರಾಮೀಣ ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು ಮತ್ತು ವೃತ್ತಿ ಕೌಶಲ್ಯದ ಮೂಲಕ ಬದುಕು ರೂಪಿಸಿಕೊಳ್ಳಬೇಕು ಎಂದು ಶಾಸಕ ಕೃಷ್ಣನಾಯಕ ಸಲಹೆ ನೀಡಿದರು. ಪಟ್ಟಣದ ತಾಲೂಕು ಪಂಚಾಯತಿ ಆವರಣದಲ್ಲಿ, ವಿಜಯನಗರ ಜಿಲ್ಲಾ ಪಂಚಾಯತ್ (ಕೈಗಾರಿಕಾ ವಿಭಾಗ) 2025-26ನೇ ಸಾಲಿನ ಯೋಜನೆಯಡಿ, ಕ್ಷೇತ್ರದ ಗ್ರಾಮೀಣ ಭಾಗದ ವೃತ್ತಿನಿರತ ಮಹಿಳಾ ಕುಶಲಕರ್ಮಿಗಳಿಗೆ ಸುಧಾರಿತ ’ವಿದ್ಯುತ್ ಚಾಲಿತ ಹೊಲಿಗೆ ಯಂತ್ರಗಳನ್ನು’ ವಿತರಿಸಿ ಮಾತನಾಡಿದರು. ತಹಶೀಲ್ದಾರರು ಗುರುಬಸವರಾಜ, ತಾ.ಪಂ.ಇಒ ಪರಮೇಶಪ್ಪ ಸೇರಿದಂತೆ, ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಕೈಗಾರಿಕಾ ಇಲಾಖೆಯ ಅಧಿಕಾರಿಗಳು ಇದ್ದರು.