ರೇಕೈ ಶರತ್ ಆಚಾರಿ ಕೊಲೆ ಆರೋಪಿಗಳಿಗೆ ಜೀವಾವಧಿ ಶಿಕ್ಷೆ
Life imprisonment for Rekai Sharath Achari murder accused
ರೇಕೈ ಶರತ್ ಆಚಾರಿ ಕೊಲೆ ಆರೋಪಿಗಳಿಗೆ ಜೀವಾವಧಿ ಶಿಕ್ಷೆ
ಕಾರವಾರ, 11 : ಸಿದ್ದಾಪುರದ ಹಿರೇಕೈ ಗ್ರಾಮದ ಶರತ್ ಆಚಾರಿ ಕೊಲೆ ಅಪರಾಧಿಗಳಿಗರ ಶಿರಸಿ ಜಿಲ್ಲಾ ಪ್ರಧಾನ ಹೆಚ್ಚುವರಿ ನ್ಯಾಯಾಲಯದ ನ್ಯಾಯಾಧೀಶರು ಸೋಮವಾರ ಜೀವಾವಧಿ ಶಿಕ್ಷೆ ಪ್ರಕಟಸಿದರು. ಅಗಸ್ಟ 2016 ರಲ್ಲಿ ಸಿದ್ದಾಪುರ ತಾಲುಕಿನ ಹಿರೇಕೈಯಲ್ಲಿ ಶರತ್ ಗಣೇಶ್ ಅಚಾರಿ ಕೊಲೆ ನಡೆದಿತ್ತು.ಅಪರಾಧಿಗಳಾದ ದಿಲರಾಜ ದ್ಯಾನಿ, ಭರತ್ ಸಿಂಗ್ ತ್ರಿಲೋಕ ಸಿಂಗಗೆ ಜೀವಾವಧಿ ಶಿಕ್ಷೆ ಹಾಗೂ ಹತ್ತು ಸಾವಿರ ರೂ. ದಂಡವನ್ನು ನ್ಯಾಯಾಧೀಶರಾದ ಕಿರಣ್ ಕಿಣಿ ಪ್ರಕಟಿಸಿದರು.ಕಾನಸೂರು ನಿಂದ ಶರತ್ ಬೈಕ್ ನಲ್ಲಿ ಸಂಜೆ ಹಿರೇಕೈಗೆ ಹೊರಟಿದ್ದ. ಡ್ರಾಪ್ ಕೇಳಿದ ದಿಲರಾಜ್ ಧ್ಯಾನಿ ಮತ್ತು ಭರತ್ ಸಿಂಗ್ ತ್ರಿಲೋಕ ಸಿಂಗ್ ದಾರಿ ಮಧ್ಯ ಬೈಕ್ ನಿಂದ ದಾರಿ ಪಕ್ಕದ ಕಾಲುವೆಗೆ ತಳ್ಳಿ, ಕಲ್ಲು ಎತ್ತಿ ಹಾಕಿದ್ದರು. ಅಲ್ಲದೆ ಕತ್ತಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದರು. ದಿಲರಾಜ್ ಪೊಲೀಸರ ಕೈಗೆ ಸಿಕ್ಕಿದ್ದ. ಕೊಲೆಯಾದ ದಿನದಿಂದ ಭರತ ಸಿಂಗ್ ತಲೆ ಮರೆಸಿಕೊಂಡಿದ್ದ. ನಂತರ ಆತನನ್ನು ಹಿಡಿದ ಸಿದ್ದಾಪುರ ಪೊಲೀಸರು ಪ್ರತ್ಯೇಕ ಚಾರ್ಜಶೀಟ್ ಸಲ್ಲಿಸಿದ್ದರು.
ಪ್ರಕರಣದಲ್ಲಿ ಸರ್ಕಾರಿ ವಕೀಲರಾದ ರಾಜೇಶ್ ಮಳಗೀಕರ ಸಮರ್ಥವಾಗಿ ವಾದ ಮಂಡಿಸಿ, ಆರೋಪಿಗಳ ಅಪರಾಧವನ್ನು ಸಾಬೀತು ಮಾಡಿದ್ದರು. ವೈಜ್ಞಾನಿಕ ಸಾಕ್ಷಾಧಾರದಿಂದ ಆರೋಪ ಸಾಬೀತಾಗಿತ್ತು.ನ್ಯಾಯಾಧೀಶರು ಎಲ್ಲಾ ಅಂಶ ಗಮನಿಸಿ ಅಪರಾಧಿಗಳ ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ದಿಲರಾಜ್ ದ್ಯಾನಿ ಮತ್ತು ಭರತ್ ತ್ರಿಕೋಕ ಸಿಂಗ್ ಇಬ್ಬರಿಗೂ ಜೀವಾವಧಿ ಶಿಕ್ಷೆ ಪ್ರಕಟಿಸಿದರು. ಶರತ್ ಆಚಾರಿ ಕುಟುಂಬಕ್ಕೆ ಒಂದು ಲಕ್ಷ ರೂ. ಪರಿಹಾರ ನೀಡಬೇಕೆಂದು ಆದೇಶಿಸಿದ್ದಾರೆ.....
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 