ದೇವಸ್ಥಾನ ಪ್ರಮುಖ ಧಾರ್ಮಿಕ ಕೇಂದ್ರವಾಗಲಿ: ಅನೀಲ ಕವಿಶೆಟ್ಟಿ ಕರೆ
Let the temple become a major religious center: Aneela Kavishetty calls
ಬೆಳಗಾವಿ 11 : ದೇವಸ್ಥಾನದ ಅಭಿವೃದ್ಧಿಗಾಗಿ ಸರ್ಕಾರ ಹಾಗೂ ಸಮಾಜದಿಂದ ಸಾಕಷ್ಟು ಸಹಾಯವಾಗಿದ್ದು ಮುಂದಿನ ದಿನಗಳಲ್ಲಿ ಸರ್ಕಾರದಿಂದ ಇನಷ್ಟು ಅನುದಾನ ಪಡೆದುಕೊಂಡು ದೇವಸ್ಥಾನವನ್ನು ಪ್ರಮುಖ ಧಾರ್ಮಿಕ ಕೇಂದ್ರವಾಗಲು ಶ್ರಮಿಸುವದಾಗಿ ಎಂದು ನವಿಲೇ ಶ್ರೀ ಜಡೇಶಂಕರಲಿಂಗ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ.ಹುಬ್ಬಳ್ಳಿಯ ಬಣಗಾರ ಸಮಾಜದ ಅಧ್ಯಕ್ಷ ಅನೀಲ ಕವಿಶೆಟ್ಟಿ ಹೇಳಿದರು.
ಅವರು ಲಿಂಗಸಗೂರ ತಾಲೂಕಿನ ನವಲಿ ಸುಕ್ಷೇತ್ರಶ್ರೀ ಜಡೆಶಂಕರಲಿಂಗನ ಸಾನಿಧ್ಯದಲ್ಲಿ ರಬಕವಿ ಹಾಗೂ ನಿಪ್ಪಾಣಿಯ ಗುಣಕೀ ಪರಿವಾರದಿಂದ ನಡೆದ 11 ಜನ ಗುಗ್ಗಳ ಕಾರ್ಯಕ್ರಮದಲ್ಲಿ ಮಾತನಾಡಿದರು.
ನವಲಿ ಸುಕ್ಷೇತ್ರದಲ್ಲಿ ಪದೇ ಪದೇ ಜರಗಲಿ ಎಲ್ಲರೂ ತಮ್ಮ ಮಕ್ಕಳ ಹುಟ್ಟುಹಬ್ಬವನ್ನು ಮತ್ತು ಜವಳ ಕಾರ್ಯಕ್ರಮವನ್ನು ಹಾಗೂ ಗುಗ್ಗುಲ ಕಾರ್ಯಕ್ರಮವನ್ನು ಮದುವೆಯನ್ನು ಇತರೆ ಕಾರ್ಯಕ್ರಮಗಳನ್ನು ನಮ್ಮ ಕುಲದೇವರ ಸಾನಿಧ್ಯದಲ್ಲಿ ನಡೆಸಲು ವಿನಂತಿಸಿಕೊಳ್ಳುತ್ತೇನೆ ಎಂದರು.
ರಬಕವಿಯ ಗುಣಕಿ ಪರಿವಾರದ ಮುಖ್ಯಸ್ಥ ಸೋಮಶೇಖರ ಗುಣಕಿ ಮಾತನಾಡಿ ನವಲೇ ದೇವಸ್ಥಾನದ ಜಿರ್ಣೋದಾರ ಸಮಿತಿಯ ಸರ್ವ ಸದಸ್ಯರಿಂದ ದೇವಸ್ಥಾನ ಅಭಿವೃದ್ಧಿಯಾಗಿದ್ದು ದೇವಸ್ಥಾನ ಆವರಣ ಸಭಾ ಭವನದಲ್ಲಿ ಜವಳ.ನಿಶ್ಚಿಯ ಮದುವೆಯಂತ ಕಾರ್ಯಕ್ರಮಗಳು ಬಹಳ ಅದ್ದೂರಿಯಾಗಿ ಮಾಡಬಹುದಾಗಿದೆ ಹೀಗಾಗಿ ಜಿರ್ಣೋದ್ದಾರ ಅಧ್ಯಕ್ಷ ಕಾರ್ಯಧರ್ಶಿಗಳ ಕಾರ್ಯ ಶ್ಲಾಘನೀಯ ಎಂದರು.
ಈ ಸಮಯದಲ್ಲಿ ಸಂತೋಷ ಹತಪಾಕಿ. ಹುಬ್ಬಳ್ಳಿ ಇಲಕಲ್ಲ ಮಸ್ಕಿ.ರಬಕವಿ. ಸಿಂಧೂನೂರು.ಗೋಕಾಕ.ನಿಪ್ಪಾನಿ.ಬನಹಟ್ಟಿ ಬಣಗಾರ ಬಾಂಧವರು ಉಪಸ್ಥಿತರಿದ್ದರು. ಅತ್ಯಂತ ಯಶಸ್ವಿಯಾಗಿ ಸುಂದರವಾಗಿ ನೆರವೇರಿತು ಸುಮಾರು ಎರಡು ನೂರಕ್ಕೂ ಹೆಚ್ಚು ಜನ ಬಾಗಿಯಾಗಿದ್ದು ಅವರೆಲ್ಲರಿಗೆ ಪ್ರಸಾದ ವ್ಯವಸ್ಥೆಯನ್ನು ಮಾಡಲಾಗಿತ್ತು .
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 