ಮಕ್ಕಳಿಗೆ ಬೈಸಿಕಲ್ ಕೊಡುವ ಯೋಜನೆಯನ್ನು ಪ್ರಾರಂಭಿಸಲಿ: ಶಾಸಕ ಐಹೊಳೆ

ಮಕ್ಕಳಿಗೆ ಬೈಸಿಕಲ್ ಕೊಡುವ ಯೋಜನೆಯನ್ನು ಪ್ರಾರಂಭಿಸಲಿ: ಶಾಸಕ ಐಹೊಳೆ Let's start a scheme to provide bicycles to children: MLA Aihole

 

ರಾಯಬಾಗ 06: ಬಿಜೆಪಿ ಸರ್ಕಾರದ ಆಡಳಿತ ಇದ್ದಾಗ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಬೈಸಿಕಲ್ ವಿತರಿಸುವ ಯೋಜನೆ ಜಾರಿಯಲ್ಲಿತ್ತು. ಈಗ ಕಾಂಗ್ರೆಸ್ ಸರ್ಕಾರ ಯೋಜನೆಯನ್ನು ಕೈ ಬಿಟ್ಟಿರುವುದು ಸರಿಯಲ್ಲ. ದೂರದ ತೋಟಗಳಿಂದ ಹಾಗೂ ಬೇರೆ ಊರುಗಳಿಂದ ಬರುವ ವಿದ್ಯಾರ್ಥಿಗಳಿಗೆ ತುಂಬಾ ತೊಂದರೆಯಾಗುತ್ತಿದೆ. ಮಕ್ಕಳಿಗೆ ಬೈಸಿಕಲ್ ಕೊಡುವುದನ್ನು ಪ್ರಾರಂಭಿಸಬೇಕು ಎಂದು ಶಾಸಕ ದುರ್ಯೋಧನ ಐಹೊಳೆ ಹೇಳಿದರು.     

 ತಾಲೂಕಿನ ಜಲಾಲಪುರ ಗ್ರಾಮದ ಡಿ ಜೆ ಹೆರವಾಡೆ ಪ್ರೌಢ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಶೂ ಮತ್ತು ಸಾಕ್ಸ್‌ ವಿತರಿಸಿ ಮಾತನಾಡಿದ ಅವರು ಇಂದಿನ ಮಕ್ಕಳೇ ನಾಳಿನ ನಾಡಿನ ನಾಗರಿಕರು. ಸರ್ಕಾರಗಳು ಯಾವುದೇ ಬರಲಿ ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗದ ರೀತಿಯಲ್ಲಿ ಅವರಿಗೆ ಅನುಕೂಲ ಮಾಡಿಕೊಡುಬೇಕು. ವಿದ್ಯಾರ್ಥಿಗಳು ಯಾವುದೇ ಸೌಲಭ್ಯಗಳಿಂದ ವಂಚಿತರಾಗದಂತೆ ನೋಡಿಕೊಳ್ಳುವುದು ಸರ್ಕಾರದ ಜವಾಬ್ದಾರಿ ಎಂದರು.        

ಗ್ರಾಮ ಪಂಚಾಯತ ಅಧ್ಯಕ್ಷ ವಿನಾಯಕ ಪವಾರ, ನಾಮದೇವ ಕಾಂಬಳೆ, ಬಸವರಾಜ ಅವನ್ನವರ, ವಸಂತ ಕಾಂಬಳೆ, ರಾಜು ಜಾದವ ಸದಾಶಿವ ಜಗದಾಳೆ, ಬಸ್ಸು ಚೌಗಲೆ, ಬಸಗೌಡ  ಪಾಟೀಲ, ಕಿರಣ ಕನದಾಳೆ, ದೀಲೀಪ ಪವಾರ, ನಾನಾ ಸೋನಾರ, ರಾಜು ಶೇಲಾರ, ದೀಲೀಪ ಹವಾಲ್ದಾರ, ಸಾವಂತ ಪಾಟೀಲ, ದತ್ತಾ ಸಾವಂತ,ವಿ .ಬಿ . ಬನಶಂಕರಿ, ಮುಖ್ಯ್ಯೊಪಾಧ್ಯಾಯರು, ಶಿಕ್ಷಕರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.