ಸಂಪನ್ಮೂಲ ಶಿಕ್ಷಕರಿಂದ ಉಪನ್ಯಾಸ ಕಾರ್ಯಕ್ರಮ

ಸಂಪನ್ಮೂಲ ಶಿಕ್ಷಕರಿಂದ ಉಪನ್ಯಾಸ ಕಾರ್ಯಕ್ರಮ  Lecture program by resource teacher


ತಾಳಿಕೋಟಿ 11:  ಭೋಗೇಶ್ವರ ಪ್ರೌಢಶಾಲೆಯ ಹಿಂದಿ ವಿಷಯ ಶಿಕ್ಷಕರಾದ   ಡಿ.ಡಿ.ಲಮಾಣಿಯವರು ಬುಧವಾರ   ಸಂಗಮೇಶ್ವರ ಪ್ರೌಢಶಾಲೆಯಲ್ಲಿ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಹಿಂದಿ ವಿಷಯ ಕುರಿತು ಪರೀಕ್ಷಾ ತಯಾರಿ ಹಾಗೂ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಪಡೆದುಕೊಳ್ಳವುದರ ಕುರಿತು ಉಪನ್ಯಾಸ ನೀಡಿದರು. ಈ ಸಮಯದಲ್ಲಿ ಪ್ರಾಚಾರ್ಯ ಎಸ್ ಬಿ ಮಂಗ್ಯಾಳ, ಮುಖ್ಯ ಗುರುಗಳಾದ ಅಶೋಕ ಕಟ್ಟಿ, ಹಿಂದಿ ಶಿಕ್ಷಕ ಬಿ ಐ ಹಿರೇಹೊಳಿ, ದೈಹಿಕ ಶಿಕ್ಷಕ ಎಂ.ಎಸ್‌.ರಾಯಗೊಂಡ, ಫಾರೂಕ ಸರ್ ಮತ್ತಿತರರು ಇದ್ದರು.