ಬಾಗಲಕೋಟೆ ಉಪಚುನಾವಣೆಗೆ ಉಸ್ತುವಾರಿಯಾಗಿ ಕೃಷ್ಣಗೌಡ ಎಚ್‌. ಪಾಟೀಲ

ಬಾಗಲಕೋಟೆ ಉಪಚುನಾವಣೆಗೆ ಉಸ್ತುವಾರಿಯಾಗಿ ಕೃಷ್ಣಗೌಡ ಎಚ್‌. ಪಾಟೀಲ  Krishnagowda H. Patil in charge of Bagalkot by-election


ಗದಗ 27 :  ರಾಜ್ಯದಲ್ಲಿ ಪ್ರಸ್ತುತ ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ವಿಧಾನಸಭೆ ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆಯುತ್ತಿದ್ದು, ಗದಗ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿರುವ ಕೃಷ್ಣಗೌಡ ಎಚ್‌. ಪಾಟೀಲ ಅವರನ್ನು ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಉಸ್ತುವಾರಿಯಾಗಿ ನೇಮಕವಾಗಿದ್ದಾರೆ. ಈ ಕುರಿತು ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿ ರಾಜ್ಯಾಧ್ಯಕ್ಷರಾಗಿರುವ ಮಂಜುನಾಥ ಎಚ್‌.ಎಸ್‌. ಅವರು ಆದೇಶ ಹೊರಡಿಸಿದ್ದಾರೆ.