ಶಾಂತಕುಮಾರ್ ದೊಡ್ಡಮನಿಗೆ ಕರ್ನಾಟಕ ವಿಕಾಸ ರತ್ನ ರಾಜ್ಯ ಪ್ರಶಸ್ತಿ ಪ್ರಧಾನ
ಕೊಪ್ಪಳ 11: ಇಲ್ಲಿನ ಬಸವೇಶ್ವರ ನಗರದ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಮಾಜ ಸೇವಕ ಶಾಂತಕುಮಾರ್ ದೊಡ್ಡಮನಿ ಅವರಿಗೆ ಕರ್ನಾಟಕ ವಿಕಾಸರತ್ನ ರಾಜ್ಯ ಪ್ರಶಸ್ತಿಯನ್ನು ಪ್ರಧಾನ ಮಾಡಲಾಗಿದೆ.ಇತ್ತೀಚೆಗೆ (ಮಾರ್ಚ್ 8 ರಂದು) ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದ ನಯನ ಸಭಾ ಭವನದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ನಡೆದ 72ನೇ ರಾಷ್ಟ್ರೀಯ ಮಟ್ಟದ ಕಲಾ ಪ್ರತಿಭೋತ್ಸವ ಸಮಾರಂಭದಲ್ಲಿ ಪ್ರಶಸ್ತಿ ಲಭಿಸಿತು.
ಕಾರ್ಯಕ್ರಮ ಅಧ್ಯಕ್ಷತೆಯನ್ನು ಮಾಜಿ ಸಚಿವರಾದ ಡಾ.ಲೀಲಾದೇವಿ ಆರ್ ಪ್ರಸಾದ್ ಅವರು ವಹಿಸಿದ್ದರು.ಈ ಸಂದರ್ಭದಲ್ಲಿ ಸುರ್ವೇ ಕಲ್ಚರಲ್ ಅಕಾಡೆಮಿ ಅಧ್ಯಕ್ಷರಾದ ರಮೇಶ್ ಸರ್ವೇ, ಚುಟುಕು ಸಾಹಿತ್ಯ ಪರಿಷತ್ ರಾಜ್ಯ ಅಧ್ಯಕ್ಷರಾದ ಎಮ್.ಜಿ.ಆರ್ ಅರಸು, ಚಲನಚಿತ್ರ ನಟರಾದ ಶಂಕರ್ ಭಟ್, ಮೀನಾ, ರಾಜ್ಯ ಚಲನಚಿತ್ರ ನಿರ್ದೇಶಕ ಎನ್.ಆರ್.ಕೆ ವಿಶ್ವನಾಥ್, ಡಾ.ಕಲ್ಲೇಶ್ವರ ಮಹಾಸ್ವಾಮಿಗಳು ಹಿರೇಮಠ ಸೇರಿದಂತೆ ಮತ್ತಿತರರಿದ್ದರು.
ಅಭಿನಂದನೆ: ಶಾಂತಕುಮಾರ ದೊಡ್ಡಮನಿ ಅವರ ಸಾಮಾಜಿಕ ಉತ್ತಮ ಸೇವೆಯನ್ನು ಪರಿಗಣಿಸಿ ಕರ್ನಾಟಕ ರಾಜ್ಯ ವಿಕಾಸರತ್ನ ಪ್ರಶಸ್ತಿ ಲಭಿಸಿರೋದಕ್ಕೆ ಇಲ್ಲಿನ ಹಲವು ಸಂಘ ಸಂಸ್ಥೆಗಳು ಗಣ್ಯರು, ಸ್ನೇಹ ಬಳಗದ ಶಿವಕುಮಾರ್ ಕಟ್ಟಿಮನಿ, ನಾಗರಾಜ್ ಗಾಯಕವಾಡ, ಪ್ರಕಾಶ್ ಕುಕನೂರ್, ಚೆನ್ನಪ್ಪ ಕೋಟ್ಯಾಳ, ಗವಿ ಜಂತಕಲ್, ಅರುಣ್ ಅಪ್ಪು ಶೆಟ್ಟಿ, ವಿಜಯ್ ಶೆಟ್ಟಿ, ಗುರುಬಸಪ್ಪ ಹೋಳಗುಂದಿ, ಅಮರೇಶ್ ಮಡಿವಾಳರ, ರಾಮಪ್ಪ ಬಂಗಾರಿ, ಬಾಳಪ್ಪ ಭಜಂತ್ರಿ, ಯಮನೂರಸಾಬ್, ಅಜಯ್ ದೊಡ್ಡಮನಿ, ರವಿ ಹಡಪದ್, ಯಲ್ಲಪ್ಪ ಬಳಗಾನೂರ, ನಾಗರಾಜ್ ಕಂದಾರಿ, ಪರಶುರಾಮ್ ಕಿಡದಾಳ, ಶ್ರವಣಕುಮಾರ್ ಶರ್ಮಾ, ಹನುಮಂತ ಟಾಂಗದ, ರಾಘವೇಂದ್ರ ಬಡಿಗೇರ, ರಾಘು ಕಲಾಲ್, ಗೌಸ್, ಮೈನುದ್ದಿನ್ ಬೆಪಾರಿ, ಬಾಬು ಅಳ್ಳಳ್ಳಿ, ಮಹೇಶ್ ಕಂದಾರಿ, ಶಿವು ಕಂದಾರಿ, ಪ್ರವೀಣ್ ದಿಂದೂರ್, ಪವನ ಮೆದರ್, ಅಮಿತ್ ಬಿ., ನಿಂಗಪ್ಪ ಮೂಗಿನ, ವಿವೇಕಾನಂದ ಕಟ್ಟಿಮನಿ, ಶ್ರೀನಿವಾಸ್ ಬಾವಿಮನಿ, ವೀರೇಶ್ ಆರಿ್ಟ., ರಮೇಶ್ ಯಲಬುರ್ಗಾ ಹಾಗೂ ಮತ್ತಿತರರು ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.