ರಾಜ್ಯೋತ್ಸವದ ಮೆರವಣಿಗೆಯ ಭದ್ರತೆಗೆ ಪೋಲಿಸ್ ಆಯುಕ್ತರಿಗೆ ಕರವೇ ಮನವಿ

ರಾಜ್ಯೋತ್ಸವದ ಮೆರವಣಿಗೆಯ ಭದ್ರತೆಗೆ ಪೋಲಿಸ್ ಆಯುಕ್ತರಿಗೆ ಕರವೇ ಮನವಿ Karave appeals to the Police Commissioner for security during the Rajyotsava procession

ರಾಜ್ಯೋತ್ಸವದ ಮೆರವಣಿಗೆಯ ಭದ್ರತೆಗೆ ಪೋಲಿಸ್ ಆಯುಕ್ತರಿಗೆ ಕರವೇ ಮನವಿ 

ಬೆಳಗಾವಿ 28: ಕರ್ನಾಟಕ ರಕ್ಷಣಾ ವೇದಿಕೆಯು ಈ ಬಾರಿ ಕನ್ನಡ ರಾಜ್ಯೋತ್ಸವವನ್ನು ವಿಶೇಷವಾಗಿ, ಆಚರಿಸಲು ನಿರ್ಧರಿಸಿದೆ. ರಾಜ್ಯೋತ್ಸವದ ದಿನದಂದು ಬೆಳಗಾವಿಯ ಶಿವಾಜಿ ಮಹಾರಾಜರ ಉಧ್ಯಾನವನದಲ್ಲಿ ಛತ್ರಪತಿ ಶಿವಾಜಿಮಹಾರಾಜರ ಮೂರ್ತಿಗೆ ಪುಷ್ಫಗೌರವ ಸಮರ​‍್ಿಸಿ ಅಲ್ಲಿಂದ ಮೆರವಣಿಗೆ ಹೊರಟು, ಶನಿಮಂದಿರ, ನ್ಯುಕ್ಲಿಯಸ್ ಮಾಲ್ ಮಾರ್ಗವಾಗಿ ಚನ್ನಮ್ಮ ವೃತ್ತ ಸೇರುತ್ತದೆ. ಈ ಮೆರವಣಿಗೆ ಹೊರಡಿಸಲು ಕರ್ನಾಟಕ ರಕ್ಷಣಾ ವೇದಿಕೆ ಭದ್ರತಾ ವ್ಯವಸ್ಥೆಯನ್ನು ಕಲ್ಪಿಸಲು ಪೊಲೀಸ್ ಆಯುಕ್ತರು ಮಹಾನಗರ ಇವರಿಗೆ ಮನವಿ ಮಾಡಿದ್ದಾರೆ