ಕರಾವಳಿ ಉತ್ಸವ ಆರನೇ ದಿನ: ಮಿಂಚಿದ ಗಾಯಕ ಮಹಮ್ಮದ್ ದಾನಿಷ್
Karavali Utsav Day 6: Singer Mohammed Danish shines
ಕಾರವಾರ 28: ಕರಾವಳಿ ಉತ್ಸವ ಆರನೇ ದಿನ ಪ್ರಸಿದ್ದ ಗಾಯಕ ಮಹಮ್ಮದ್ ದಾನಿಷ್ ಸೂಫಿ ಹಾಡು ಹಾಗೂ ಕವ್ವಾಲಿ ಮಾದರಿಯ ಹಾಡುಗಳನ್ನು ಹಾಡಿ ಮಿಂಚಿದರು. ಅಪ್ಪಟ ಹಿಂದೂಸ್ತಾನಿ ಪ್ರತಿಭೆಯಾದ ದಾನಿಷ್ ಹಿಂದೂಸ್ತಾನಿ ಸಂಗೀತದ ಮಹತ್ವವನ್ನು ಹಾಡುಗಳ ಮೂಲಕ ಸಾರಿದರು. ಮೊಘಲ್ ಮತ್ತು ಸುಲ್ತಾನರ ಕಾಲದ ಹಿಂದೂಸ್ತಾನಿ ಸಂಗೀತದ ಸುಧೆಗೆ ಅವರು ಪ್ರೇಕ್ಷಕರನ್ನು ಕರೆದೊಯ್ದರು. ಕರಾವಳಿ ಉತ್ಸವದಲ್ಲಿ ಎಲ್ಲಾ ದಿನಗಳ ಸಂಗೀತ ಕಾರ್ಯಕ್ರಮಕ್ಕಿಂತ ಐದನೇ ದಿನ ಯುವಕ ಯುವತಿಯರ ಉತ್ಸಾಹ ನೂರ್ಮಡಿಸಿತ್ತು. ಸಾಗರದಂತಿದ್ದ ಜನ ಸಮೂಹ ಕಂಡು ಗಾಯಕ ದಾನಿಷ್ ಅತ್ಯುತ್ಸಾಹದಲ್ಲಿ ಹಾಡುಗಳನ್ನು ಹಾಡಿದರು. ಹಾಡಿನ ಜೊತೆಗೆ ಅವರ ನೃತ್ಯ ಹಾಗೂ ಭಾವಾಭಿನಯ ಯುವತಿಯರ ಮನ ಕದಿಯಿತು. ಲಗನ್ ಲಗೀ, ಆಖೀರ್ ತಬ್ ಅಪ್ನೆ, ಅಪ್ನೆ ತೋ ಅಪ್ನೆ ಹೋತಾ ಹೈ , ದಿಲ್ ಜೋ ಮಿಲೇ ಮಿಲೇಯಿ ರಹೇ, ಆಕೀರ್ ಫಿರ್ ಆನಾ ಹೈ, ಹೋಜಾಯಿಗಾ ಬಲ್ಲೆ ಬಲ್ಲೆ.. ಹಾಡುಗಳನ್ನು ಹಾಡಿ ರಂಜಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 