ಕಾನಿಪ ಸಂಘದ ಚುನಾವಣೆ: ಕಲ್ಲಪ್ಪ ಶಿವಶರಣ ಆಯ್ಕೆ

ಕಾನಿಪ ಸಂಘದ ಚುನಾವಣೆ: ಕಲ್ಲಪ್ಪ ಶಿವಶರಣ ಆಯ್ಕೆ Kanip Sangha elections: Kallappa Shivasharan elected

ವಿಜಯಪುರ 10 : ಕರ್ನಾಟಕ ಕಾರ್ಯನಿರತ ಪತ್ರಕರ್ತ ಸಂಘದ ಕಾರ್ಯಕಾರಣಿ ಸಮಿತಿ ಸ್ಥಾನಕ್ಕೆ ಪತ್ರಕರ್ತ ಕಲ್ಲಪ್ಪ ಶಿವಶರಣ ಆಯ್ಕೆಯಾಗಿದ್ದಾರೆ. 2025-28ನೇ ಸಾಲಿನ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಚುನಾವಣೆಯಲ್ಲಿ ಕಾರ್ಯಕಾರಣಿ ಸಮಿತಿ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾದ ಕಲ್ಲಪ್ಪ ಶಿವಶರಣ ಅವರಿಗೆ ಚುನಾವಣಾಧಿಕಾರಿ ಹಾಗೂ ಹಿರಿಯ ಪತ್ರಕರ್ತರಾದ ಟಿ.ಕೆ. ಮಲಗೊಂಡ ಅವರು ಪ್ರಮಾಣ ಪತ್ರ ವಿತರಿಸಿದರು.