ಸಿಬಿಐ ತನಿಖೆಯಿಂದ ಮಾತ್ರ ನ್ಯಾಯ ಸಾಧ್ಯ
Justice is possible only through a CBI investigation
ಬಳ್ಳಾರಿ: ಬ್ಯಾನರ್ ಗಲಾಟೆ ಪ್ರಕರಣ ಸಿಐಡಿಗೆ ವಹಿಸಿರುವುದು ಕಣ್ಣೊರೆಸುವ ತಂತ್ರವಷ್ಟೇ. ಪ್ರಾಮಾಣಿಕ ಅಧಿಕಾರಿಗಳಾಗಿದ್ದರೆ ಇಷ್ಟೊತ್ತಿಗಾಗಲೇ ಬಂಧಿಸಬೇಕಿತ್ತು. ಹತ್ತು ದಿನವಾದರೂ ಯಾವುದೇ ಬಂಧನವಾಗಿಲ್ಲ. ಸಿಐಡಿ ಮತ್ತು ನಮ್ಮ ಪೊಲೀಸರ ಮಧ್ಯೆ ಯಾವುದೇ ವ್ಯತ್ಯಾಸವಿಲ್ಲ. ಸಿಬಿಐಗೆ ತನಿಖೆ ವಹಿಸಿದರೆ ಮಾತ್ರ ನ್ಯಾಯ ಸಿಗಲಿದೆ ಎಂದು ಶಾಸಕ ಜನಾರ್ದನ ರೆಡ್ಡಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಬಿಐ ಅಥವಾ ನ್ಯಾಯಧೀಶರ ಮೂಲಕ ತನಿಖೆ ಮಾಡಬೇಕು. ಸಿದ್ದರಾಮಯ್ಯ ಪಾದಯಾತ್ರೆ ಮಾಡಿ ಸಿಬಿಐ ತನಿಖೆ ಕೇಳಿದ್ದರು. ನಮಗೂ ನೂರಾರು ಮಾರ್ಗಗಳಿವೆ, ನಾವು ಕೋರ್ಟ್ ಮೂಲಕ ಸಿಬಿಐಗೆ ವಹಿಸುವಂತೆ ಒತ್ತಾಯ ಮಾಡುತ್ತೇವೆ ಎಂದರು.
ಇದೇ ವೇಳೆ ರೆಡ್ಡಿ ಅವರು ವಿಡಿಯೋ ಸಾಕ್ಷಿಗಳನ್ನು ಬಹಿರಂಗ ಮಾಡಿದರು. ಗಲಾಟೆ ನಡೆಯುವ ಮೊದಲು ಇಲ್ಲಿಂದ ತೆರಳುವಂತೆ ಸತೀಶ್ ರೆಡ್ಡಿಗೆ ಶ್ರೀರಾಮುಲು ತಿಳಿಸಿದ್ದರು. ಆದರೆ ಸತೀಶ್ ರೆಡ್ಡಿ ಮೇಲೆ ಬಿದ್ದು ಹೊಡೆಯಲು ಮುಂದಾಗಿದ್ದಾರೆ. ಶ್ರೀರಾಮುಲು ವಿರುದ್ದ ಅವಾಚ್ಯ ಶಬ್ಧ ಪ್ರಯೋಗ ಮಾಡಿ ನಿಂದನೆ ಮಾಡಿದ್ದಾರೆ. ಕೆಟ್ಟ ಪದ ಬಳಕೆ ಮಾಡಿ ಶ್ರೀರಾಮುಲುರನ್ನು ಕೊಲ್ಲಿ ಹೊಡೆಯಿರಿ ಎಂದಿರುವ ವಿಡಿಯೋವಿದೆ ಎಂದರು.
ಶ್ರೀರಾಮುಲು ಜಾತಿ ಬಳಸಿ ಸತೀಶ್ ರೆಡ್ಡಿ ಕೆಟ್ಟ ಪದ ಬಳಕೆ ಮಾಡಿದ್ದಾರೆ. ಮೊದಲೇ ಯೋಜನೆ ಮಾಡಿ ಬಂದಿರುವುದಕ್ಕೆ ಈ ವಿಡಿಯೋ ಸಾಕ್ಷಿ. ಮಧ್ಯಾಹ್ನ ಬ್ಯಾನರ್ ತೆಗೆಸಿದ ಬಳಿಕ ರಾತ್ರಿ ಬ್ಯಾನರ್ ಹಾಕಲು ಹೋಗೋಣ ಆಗ ಜಗಳ ಮಾಡೋಣ ಎಂದು ಪ್ಲಾನ್ ಮಾಡಿ ಬಂದಿದ್ದಾರೆ. ಶ್ರೀರಾಮುಲು ಮೇಲೆ ಫೈರಿಂಗ್ ಮಾಡಲಾಗಿಲ್ಲ, ಆದರೆ ನಾನು ಬಂದಾಗ ಫೈರಿಂಗ್ ಮಾಡಿದ್ದಾರೆ ಎಂದು ರೆಡ್ಡಿ ಹೇಳಿದರು.
ಭಯ ಇಲ್ಲದೇ ಇದ್ದಾಗ ಶಾಸಕರು ಹೀಗೆ ಮಾಡುತ್ತಾರೆ. ಶ್ರೀರಾಮುಲು ಅಂತಹಾ ನಾಯಕರ ವಿರುದ್ಧ ಸತೀಶ್ ರೆಡ್ಡಿ ಮಾತನಾಡುತ್ತಾನೆಂದರೆ ವ್ಯವಸ್ಥೆ ಏನಾಗಿದೆ? ಘಟನೆ ನಡೆದು ಈಗಾಗಲೇ ಹತ್ತು ದಿನವಾಗಿದೆ. ಸಿಐಡಿಯವರು ಇನ್ನೂ ಹತ್ತು ದಿನ ಕಳೆಯುತ್ತಾರೆ. ಯಾರ ಬಂಧನವಾಗಿಲ್ಲ. ಜನವರಿ 17 ಬೃಹತ್ ಹೋರಾಟ ಮಾಡುತ್ತೇವೆ ಎಂದು ಜನಾರ್ದನ ರೆಡ್ಡಿ ಹೇಳಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 