ಪತ್ರಕರ್ತ, ಸಾಹಿತಿ ಸಿ.ವೈ.ಮೆಣಸಿನಕಾಯಿಗೆ ‘ಕವಿ ಕಾವ್ಯ ವಿಭೂಷಣ ಪ್ರಶಸ್ತಿ 2026’

ಪತ್ರಕರ್ತ, ಸಾಹಿತಿ ಸಿ.ವೈ.ಮೆಣಸಿನಕಾಯಿಗೆ ‘ಕವಿ ಕಾವ್ಯ ವಿಭೂಷಣ ಪ್ರಶಸ್ತಿ 2026’ Journalist and writer C.Y. Menasinakay receives ‘Kavi Kavya Vibhushan Award 2026’


ಬೆಳಗಾವಿ 22 : ಕೇರಳ ರಾಜ್ಯದ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ವಾರ್ಷಿಕೋತ್ಸವದ ಅಂಗವಾಗಿ ದಿ. 22 ರಂದು ಕೇರಳ ರಾಜ್ಯದ ಕಾಸರಗೋಡಿನ ಕನ್ನಡ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪತ್ರಕರ್ತ, ಸಾಹಿತಿ, ಸಂಘಟಕ ಸಿ.ವೈ.ಮೆಣಸಿನಕಾಯಿ ಇವರಿಗೆ ‘ಕವಿ ಕಾವ್ಯ ವಿಭೂಷಣ ಪ್ರಶಸ್ತಿ 2026’ ನೀಡಿ ಗೌರವಿಸಲಾಯಿತು. ಸಿ.ವಾಯ್‌.ಮೆಣಸಿನಕಾಯಿ ಇವರು ಈಗಾಗಲೇ ಹಲವು ಲೇಖನ, ಕವನ ಬರೆದು ಪ್ರಕಟಿಸಿದ್ದಾರೆ. ಇವರು 13 ಪುಸ್ತಕ ಗಳನ್ನು ಬರೆದಿದ್ದಾರೆ.  ಕಾರ್ಯಕ್ರಮದಲ್ಲಿ ಶ್ರೀ ಮದಡೆನೀರು ಮಠಾಧೀಶ ಸಚ್ಚಿದಾನಂದ ಭಾರತೀ ಶ್ರೀಪಾದಂಗಳು, ಗೋನಾಳದ ರಮೇಶ ಸ್ವಾಮೀಜಿ,  ಸಮ್ಮೇಳನಾಧ್ಯಕ್ಷ ನಾಡೋಜ ಡಾ.ಕೃಷ್ಣಪ್ರಸಾಧ ಕೂಡ್ಲ,  ಚುಟುಕು ಸಾಹಿತ್ಯ ಪರಿಷತ್ತಿನ ಕೇಂದ್ರ ಸಮಿತಿ ಗೌರವಾಧ್ಯಕ್ಷ ಪ್ರದೀಪಕುಮಾರ ಕಲ್ಕೂರ, ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ಡಾ.ಕೆ.ಎನ್‌.ವೆಂಕಟರಮಣ ಹೊಳ್ಳ,  ಕನ್ನಡ ಹೋರಾಟಗಾರ ನಂ. ವಿಜಯಕುಮಾರ, ಕಾಸರಗೋಡು ಕನ್ನಡ ಭವನ ಸ್ಥಾಪಕ ಅಧ್ಯಕ್ಷ ಡಾ. ವಾಮನ್ ರಾವ್ ಬೇಕಲ್ ಹಾಗೂ ಕಾರ್ಯದರ್ಶಿ ವಸಂತ್ ಕೆರೆಮನೆ, ಸಂದ್ಯಾ ಬೆಕಲ್, ಪ್ರದೀಪಕುಮಾರ್  ಬೆಕಲ್, ಪಿ.ವಿ.ಪ್ರದೀಪಕುಮಾರ, ಶಾಂತಾ ಪುತ್ತೂರ, ಡಾ.ಸುರೇಶ ನೆಲಗುಳಿ, ಡಾ.ಗೋವಿಂದ ಕೊಳ್ಚಪೆ, ಡಾ.ತಮ್ಮನಗೌಡ್ರ,ಶಿಕ್ಷಕ ಸಂಘದ ಮುಖಂಡ ರಾಮಕೃಷ್ಣ ಶಿರೂರ,  ಗಣ್ಯರ ಸಮ್ಮುಖದಲ್ಲಿ ಇವರಿಗೆ "ಕವಿ ಕಾವ್ಯ ವಿಭೂಷಣ "ಪ್ರಶಸ್ತಿ ನೀಡಿ ಗೌರವಿಸಲಾಯಿತು.