ಇರಾನ್ನ ನಾಯಕ ಯಾರೇ ಆದರೂ ಹತ್ಯೆ: ಇಸ್ರೇಲ್ ಬೆದರಿಕೆ
Israel threatens to assassinate Iran's leader, no matter who he is
ದುಬೈ: ಇರಾನ್ ದೇಶದ ಮುಂದಿನ ಸರ್ವೋಚ್ಚ ನಾಯಕನನ್ನಾಗಿ ಯಾರನ್ನೇ ಆಯ್ಕೆ ಮಾಡಿದರೂ ಅವರನ್ನು ನಾವು ನಿರ್ಮೂಲನೆ ಮಾಡುತ್ತೇವೆ ಎಂದು ಬುಧವಾರ ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್
ಬೆದರಿಕೆ ಹಾಕಿದ್ದಾರೆ.
ಇಸ್ರೇಲ್ ಕಾಟ್ಜ್
ಘಿನಲ್ಲಿ ಹೇಳಿಕೆ ನೀಡಿದ್ದು, 'ಇಸ್ರೇಲ್ ಅನ್ನು ನಾಶಮಾಡಲು ಪ್ರಯತ್ನಿಸುವುದು, ಅಮೆರಿಕ ಮತ್ತು ಇತರ ದೇಶಗಳಿಗೆ ಬೆದರಿಕೆ ಒಡ್ಡುವ ಅಥವಾ ಇರಾನಿನ ಜನರನ್ನು ದಮನಿಸುವ ಕಾರ್ಯವನ್ನು ಮುಂದುವರಿಸುವ ಇರಾನ್ನ ಭಯೋತ್ಪಾದಕ ಸರ್ಕಾರವು ಯಾರನ್ನೇ ತನ್ನ ಮುಂದಿನ ಸರ್ವೋಚ್ಛ ನಾಯಕನನ್ನಾಗಿ ನೇ"ುಸಿದರೂ, ಅವರು ನಿರ್ಮೂಲನೆಗೆ ಗುರಿಯಾಗುತ್ತಾರೆ' ಎಂದು ಅವರು ಬರೆದಿದ್ದಾರೆ.
'ಅವನ ಹೆಸರು ಏನೇ ಇರಲಿ ಅಥವಾ ಅವನು ಎಲ್ಲಿಯೇ ಅಡಗಿರಲಿ, ಅವನನ್ನು ಹೊಡೆದು ಉರುಳಿಸುತ್ತೇವೆ' ಎಂದಿದ್ದಾರೆ. "ಲಯನ್ಸ್ ರೋರ್' ಎಂಬ "ುಲಿಟರಿ ಕಾರ್ಯಾಚರಣೆಯ ಭಾಗವಾಗಿ ಯಾವುದೇ ಅಗತ್ಯ "ಧಾನಗಳನ್ನು ಬಳಸಿಕೊಂಡು ಕ್ರಮ ಕೈಗೊಳ್ಳಲು ಎಲ್ಲ ರೀತಿಂದಲೂ ಸಿದ್ಧತೆ ಮತ್ತು ಕಾರ್ಯನಿರ್ವ"ಸುವಂತೆ ಪ್ರಧಾನ ಮಂತ್ರಿ ಮತ್ತು ನಾನು ಐಡಿಎಫ್ಗೆ (ಇಸ್ರೇಲ್ ರಕ್ಷಣಾ ಪಡೆಗಳು) ಸೂಚನೆ ನೀಡಿದ್ದೇವೆ' ಎಂದಿದ್ದಾರೆ.
ಮುಂದುವರಿದು, ಇರಾನ್ ಸರ್ಕಾರದ "ುಲಿಟರಿ ಮತ್ತು ಕಾರ್ಯತಂತ್ರದ ಸಾಮರ್ಥ್ಯಗಳನ್ನು ದುರ್ಬಲಗೊಳಿಸುವುದು ಅಥವಾ ನಾಶಮಾಡಲು, ಇರಾನಿನ ಜನರು ತಮ್ಮ ಸದ್ಯದ ಸರ್ಕಾರವನ್ನು ಉರುಳಿಸಲು ಮತ್ತು ಅದನ್ನು ಬದಲಾುಸಲು ಅನುವು ಮಾಡಿಕೊಡುವ ಪರಿಸ್ಥಿತಿಗಳನ್ನು ಸ್ಟೃಸಲು ನಾವು ಅಮೆರಿಕನ್ ಪಾಲುದಾರರೊಂದಿಗೆ ಪೂರ್ಣ ಬಲದಿಂದ ಕಾರ್ಯನಿರ್ವ"ಸುವುದನ್ನು ಮುಂದುವರಿಸುತ್ತೇವೆ' ಎಂದು ತಿಳಿಸಿದ್ದಾರೆ.
ಇರಾನ್ನ ಹೊಸ ಸರ್ವೋಚ್ಛ ನಾಯಕನನ್ನು ಆಯ್ಕೆ ಮಾಡುವ ಸಲುವಾಗಿ ಸಭೆ ಸೇರಿದ್ದ ಕಟ್ಟಡವನ್ನು ಮಂಗಳವಾರ ಇಸ್ರೇಲ್ ಗುರಿಯಾಗಿಸಿಕೊಂಡು ದಾಳಿ ನಡೆಸಿದೆ. ಈ ಸಭೆಯಲ್ಲಿ 88 "ರಿಯ ಧಾ"ುರ್ಕ ಮುಖಂಡರು ಇದ್ದರು ಎನ್ನಲಾಗಿದೆ. ಕಳೆದ ಶನಿವಾರ ಇಸ್ರೇಲ್ ಮತ್ತು ಅಮೆರಿಕ ನಡೆಸಿದ ಜಂಟಿ ದಾಳಿಯಲ್ಲಿ ಇರಾನ್ನ ಸರ್ವೋಚ್ಛ ನಾಯಕರಾಗಿದ್ದ 86 ವರ್ಷದ ಅಯತೊಲ್ಲಾ ಅಲಿ ಖಮೇನಿ ಅವರನ್ನು ಹತ್ಯೆ ಮಾಡಲಾಗಿತ್ತು. ಇದರ ನಂತರ ಪ್ರತೀಕಾರವಾಗಿ ಇರಾನ್ ಕೂಡ ದಾಳಿ ನಡೆಸುತ್ತಿದೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 