ಸಮುದಾಯ ಆರೋಗ್ಯ ಕೇಂದ್ರದ ( ಮಾನಸಧಾರ) ಉದ್ಘಾಟನೆ

ಸಮುದಾಯ ಆರೋಗ್ಯ ಕೇಂದ್ರದ ( ಮಾನಸಧಾರ) ಉದ್ಘಾಟನೆ Inauguration of Community Health Center (Manasadhara)

ಗದಗ  23: :ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ: ಎಸ್‌.ಎಸ್‌.ನೀಲಗುಂದ  ಮತ್ತು  ಜಿಲ್ಲಾ ಅಸಾಂಕ್ರಾಮಿಕ ರೋಗಿಗಳ ನಿಯಂತ್ರಣ ಹಾಗೂ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅನುಷ್ಠಾನ ಅಧಿಕಾರಿ  ಡಾ: ರಾಜೇಂದ್ರ ಚ ಬಸರಿಗಿಡದ ಇವರು ನಗರದ  ಮುಳಗುಂದ ನಾಕಾ ಹತ್ತಿರ ಅಚ್ಚುತ್ ಆಶ್ರಮ ಹಿಂದುಗಡೆ ಮಾನ್ವಿ ಲೇಓಟ್ ಗದಗದಲ್ಲಿ  ಸಮೂದಾಯ ಆರೋಗ್ಯ ಕೇಂದ್ರದ (ಮಾನಸಧಾರ) ಉದ್ಘಾಟನೆ ಮಾಡಿದರು.  

ಕಾರ್ಯಕ್ರಮದಲ್ಲಿ ಜಿಲ್ಲಾ ಜಾರಿ ಅಧಿಕಾರಿ ಡಾ. ವಾಯ್, ಕೆ ಭಜಂತ್ರಿ, ತಾಲೂಕಾ ಆರೋಗ್ಯಾಧಿಕಾರಿ     ಡಾ. ಪ್ರೀತ ಖೊನಾ ಆಗಮಿಸಿದ್ದರು.  ಸಾರಥಿ ಸಂಸ್ಥೆ ಅಧ್ಯಕ್ಷರಾದ ಎಮ್‌.ಬಿ. ಜಕ್ಕನಗೌಡ್ರ, ಉಪಾಧ್ಯಕ್ಷರಾದ ಎಚ್‌.ಎಂ. ಹಿರೇಮಠ, ಸಾರಥಿ ಸಂಸ್ಥೆ ನಿರ್ದೇಶಕ  ಆರ್‌.ಎಚ್‌.ಪಾಟೀಲ್, ಸಾರಥಿ ಸಂಸ್ಥೆ ಕಾರ್ಯದರ್ಶಿಗಳು ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಿಬ್ಬಂದಿ ಕೇಶವ ಲಮಾಣಿ ಹಾಗೂ ಸಮೂದಾಯ ಆರೋಗ್ಯ ಕೇಂದ್ರದ ಸಿಬ್ಬಂದಿಗಳು ಹಾಜರಿದ್ದರು.