ಸದುಪಯೋಗವಾದಾಗ ತರಬೇತಿಯ ಪಡೆದದ್ದು ಸಾರ್ಥಕ: ಅಸುಂಡಿ

ಬೆಳಗಾವಿ 28: ತಾವೆಲ್ಲ 6 ದಿನಗಳ ತರಬೇತಿಯನ್ನು ಪಡೆದಿದ್ದಿರಿ, ತರಬೇತಿಯ ಅವಧಿಯಲ್ಲಿ ತಾವುಗಳು ಹಲವಾರು ವಿಷಯಗಳನ್ನು ತಿಳಿದುಕೊಂಡಿರುವಿರಿ. ಆದರೆ ಕೇವಲ ತರಬೇತಿಯನ್ನು ಮಾತ್ರ ಪಡೆದರೆ ಸಾಲದು, ತರಬೇತಿಯಲ್ಲಿ ತಿಳಿಸಿದ ಎಲ್ಲ ವಿಷಯಗಳನ್ನು ನಿಮ್ಮ ನಿಮ್ಮ ಕೆಲಸಕಾರ್ಯಗಳಲ್ಲಿ ಬಳಸಿಕೊಂಡು ತರಬೇತಿಯ ಸದುಪಯೋಗ ಪಡೆಸಿಕೊಳ್ಳಬೇಕೆಂದು ಸಿಂಟಿಕೇಟ ಬ್ಯಾಂಕ ಬೆಳಗಾವಿ ಕ್ಷೇತ್ರಿಯ ಕಾರ್ಯಲಯ ಕೃಷಿ ಅಭಿವೃದ್ಧಿ ಅಧಿಕಾರಿ ವಿಜಯ ಅಸುಂಡಿ ಹೇಳಿದರು.

ಸಿಂಡ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ ಬೆಳಗಾವಿ ಮತ್ತು ಕೇಂದ್ರ ಸಕರ್ಾರದ ಗ್ರಾಮೀಣ ಅಭಿವೃಧ್ದಿ ಸಚಿವಾಲಯ  ಇವರ ಸಂಯುಕ್ತಾಶ್ರಯದಲ್ಲಿ ದಿ. 27ರಂದು ಹಮ್ಮಿಕೊಂಡಿದ್ದ ಬೆಳಗಾವಿ ಜಿಲ್ಲೆಯ ಸ್ವ ಉದ್ಯೋಗ ಆಸಕ್ತ ಮಹಿಳೆಯರಿಗೆ 6 ದಿನಗಳ ಉಚಿತ ಉದ್ಯಮಶೀಲತಾ ಅಭಿವೃದ್ಧಿ ತರಬೇತಿ ಸಮಾರೋಪ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಅವರು ಮಾತನಾಡುತ್ತಿದ್ದರು.    

ಧೆೈರ್ಯದಿಂದ ಕಾರ್ಯ ನಿರ್ವಹಿಸಿ, ಸ್ವಾವಲಂಬಿಗಳಾಗಿ ಬದುಕಿ, ಹಾಗೂ ವಿನಾಕಾರಣ ದುಂದುವೆಚ್ಚ ಮಾಡದೇ, ನಿವೂ ಉಳಿತಾಯ ಮಾಡುವ ಮನೊಭಾವನೆಯನ್ನು ಬೆಳೆಸಿಕೊಳ್ಳಿ. ಹಾಗೂ ಮುಂದಿನ ದಿನಗಳಲ್ಲಿ  ಸಂಸ್ಥೆಯೊಂದಿಗೆ ಸಂರ್ಪಕದಲ್ಲಿರಿ, ಕೇವಲ ನೀವಷ್ಟೆ ಕೆಲಸ ಮಾಡದೇ ಇತರರಿಗೂ ಕೆಲಸ ನೀಡಿ ಎಂದು ತಿಳಿಸಿದರು. ಆದ ಕಾರಣ ಇಲ್ಲಿ ಕಲಿಸಿದ ಎಲ್ಲಾ ವಿಷಯಗಳನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡು ಉತ್ತಮ ಅಭಿವೃದ್ಧಿಶೀಲ ವ್ಯಕ್ತಿಯಾಗಿ ಎಂದು ಶುಭಹಾರೈಸಿದರು. 

ಗೋಕಾಕ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಕೃಷಿ ಅಧಿಕಾರಿ ಸುಭಾಶ ಕಾಂಬಳೆ ಅವರು ಮಾತನಾಡುತ್ತಾ, ತಾವೆಲ್ಲರೂ ಸಿಂಡ್ ಸಂಸ್ಥೆಯ ವತಿಯಿಂದ ತರಬೇತಿಯನ್ನು ಪಡೆದಿರುವಿರಿ, ಶ್ರಮವಹಿಸಿ ಶ್ರದ್ಧೆಯಿಂದ ಕೆಲಸಮಾಡಿ, ಕೌಶಲ್ಯ ಅರಿತಂತಹ ವ್ಯಕ್ತಿ ಸ್ವ ಉದ್ಯೋಗ ಮಾಡಬಹುದು ಎಂದು ತಿಳಿಸಿದರು. ನಿಮ್ಮೊಂದಿಗೆ ಯಾವಾಗಲೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಸದಾಕಾಲ ನೆರವಿಗೆ ಇದ್ದೇ ಇರುತ್ತೆ. ಆದ ಕಾರಣ ತರಬೇತಿಯ ಸಂಪೂರ್ಣ ಉಪಯೋಗವನ್ನು ಪಡೆದುಕೊಂಡು ದೊಡ್ಡ ಮಟ್ಟದ ಉದ್ಯಮಿಗಳಾಗಿ ಬೆಳೆಯಿರಿ ಎಂದು ತಿಳಿಸಿದರು.     

 ತರಬೇತಿಯಲ್ಲಿ ಪಾಲ್ಗೊಂಡ ಶಿಬಿರರ್ಾಥಿಗಳು ಉತ್ಸಾಹದಿಂದ ಕಲಿಕೆಯ ಅನುಭವ ಮತ್ತು ಅನಿಸಿಕೆಗಳನ್ನು ಹಂಚಿಕೊಂಡರು,  ನಂತರ ಮುಖ್ಯ ಅತಿಥಿಗಳಿಂದ ಶಿಬಿರಾಥರ್ಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು, ಸಂಸ್ಥೆಯ ಉಪನ್ಯಾಸಕಿ ರಾಜೇಶ್ವರಿ ದೇವಲಾಪೂರ ನಿರೂಪಿಸಿ ವಂದಿಸಿದರು. ಸಂಸ್ಥೆಯ ಸಿಬ್ಬಂದಿ ಬಸವರಾಜ ಕುಬಸದ, ಅಬ್ಬುಲ್ ರಜಾಕ ಉಪಸ್ಥಿತರಿದ್ದರು.