ಸೂಕ್ಷ್ಮತೆ ಇದ್ದರೆ ನಿಮ್ಮ ಬದುಕೇ ಸಾಹಿತ್ಯ ಗಂಗೋತ್ರಿ: ಪ್ರೊ.ಮೋಹನ ಹಬ್ಬು

ಸೂಕ್ಷ್ಮತೆ ಇದ್ದರೆ ನಿಮ್ಮ ಬದುಕೇ ಸಾಹಿತ್ಯ ಗಂಗೋತ್ರಿ: ಪ್ರೊ.ಮೋಹನ ಹಬ್ಬು

ಕಾರವಾರ : ಸೂಕ್ಷ್ಮತೆ ಇದ್ದರೆ ನಿಮ್ಮ ಬದುಕೇ ಸಾಹಿತ್ಯ ಗಂಗೋತ್ರಿ ಎಂದು ಹಿರಿಯ ಸಾಹಿತಿ ಹಾಗೂ ಕವಿ ಪ್ರೊ.ಮೋಹನ ಹಬ್ಬು ಅಭಿಪ್ರಾಯಪಟ್ಟಿದ್ದಾರೆ.

ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಶಿವಾಜಿ ಶಿಕ್ಷಣ ಮಹಾ ವಿದ್ಯಾಲಯ ಇವರ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಐಕ್ಯತೆ ಸಪ್ತಾಹ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಕವಿಗೋಷ್ಠಿ ಮತ್ತು ಸಾಧಕರೊಂದಿಗೆ ಸಂವಾದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು, ಜನರ ಬದುಕೇ ಸಾಹಿತ್ಯ ಗಂಗೋತ್ರಿ, ಆದರೆ ಅದನ್ನು ಸೂಕ್ಷ್ಮ ದೃಷ್ಟಿಯಿಂದ ನೋಡಬೇಕು ಎಂದು ಹೇಳಿದರು.

ನಿರಂತರ ಅಧ್ಯಯನ, ಸೂಕ್ಷ್ಮ ಗ್ರಹಿಕೆ ಹಾಗೂ ನಿಬರ್ಿಡೆ ಬರಹ ನಿಮ್ಮ ಬದುಕನ್ನು ಬದಲಿಸಬಹುದು. ಅದು ನೀವು ಸಾಹಿತಿ ಮತ್ತು ಕವಿಯಾಗಲು ಪ್ರೇರಣೆ ನೀಡುತ್ತದೆ ಎಂದು ಅವರು ಹೇಳಿದರು.

ನಿಮಗೆ ಅನಿಸಿದ್ದನ್ನು ಸ್ಪಷ್ಟವಾಗಿ ದಾಖಲಿಸಬೇಕು, ಅಭಿವ್ಯಕ್ತಿಗೊಳಿಸಬೇಕು. ಬರವಣಿಗೆ ಜನಪರವಾಗಿರಬೇಕು. ಆಧುನಿಕ ಸೌಲಭ್ಯಗಳೇ ಬದುಕಾಗಬಾರದು, ಅದರ ಹೊರತಾದ ಅನುಭವಗಳೂ ಬದುಕನ್ನು ಕಟ್ಟಿಕೊಡುತ್ತವೆ ಎಂದು ಪ್ರತಿಪಾದಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಅಪರ ಜಿಲ್ಲಾಧಿಕಾರಿ ನಾಗರಾಜ್ ಸಿಂಗ್ರೇರ್ ಮಾತನಾಡಿ, ದೇಶದ ಏಕ್ಯತೆಗೆ ಯುವ ಸಮುದಾಯದ ಸನ್ನಡತೆ ಬಹುಮುಖ್ಯವಾಗಿದೆ. ಇದಕ್ಕೆ ಹೆಚ್ಚು ಅಧ್ಯಯತೆ, ಚಚರ್ೆಗಳ, ಬರವಣಿಗೆಗಳು ಸ್ಫೂತರ್ಿ ನೀಡುತ್ತವೆ ಎಂದರು.

ಯುವ ಸಮುದಾಯದಲ್ಲಿ ಕ್ರಿಯಾಶೀಲತೆ ಇಲ್ಲವಾದರೆ ಒಂದೇ ಸಿದ್ಧಾಂತದ ಕಡೆ ವಾಲುವ ಅಪಾಯ ಎದುರಾಗುತ್ತದೆ. ಅದು ಇಂತಹ ಕವಿಗೋಷ್ಠಿ, ವಿಚಾರಗೋಷ್ಠಿಗಳು ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಹೆಚ್ಚು ಸಾಧನೆ ಮಾಡಿದವರೊಂದಿಗೆ ನಾವು ಮಾಡುವ ಚಚರ್ೆಯಿಂದ ಸಮತೋಲನ ಮನಸ್ಥಿತಿ ಹೊಂದಿಗೆ ದೇಶದಲ್ಲಿ ಐಕ್ಯತಾ ಮನೋಭಾವವನ್ನು ಹೊಂದಲು ಅನುಕೂಲವಿದೆ ಎಂದರು.

ಮುಖ್ಯ ಅತಿಥಿಯಾಗಿದ್ದ ಶಿವಾಜಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಶಿವಾನಂದ ವಿ. ನಾಯಕ ಮಾತನಾಡಿ, ವಿವಿಧತೆಯಲ್ಲಿ ಏಕತೆಯನ್ನು ಸಾರುವ ಜಗತ್ತಿನ ಏಕೈಕ ರಾಷ್ಟ್ರ ಭಾರತ ಎಂದಿಗೂ ಅಂತಾರಾಷ್ಟ್ರೀಯ ಮಟ್ಟದ ಬ್ರಾತೃತ್ವವನ್ನು ಕಾಯ್ದುಕೊಂಡಿದೆ ಎಂದರು.

ಭೌಗೋಳಿಕವಾಗಿ ಪ್ರತಿ 30 ಕಿಲೋ ಮೀಟರ್ಗೆ ನಮ್ಮ ಭಾಷೆ, ಸಂಸ್ಕೃತಿ, ಪದ್ಧತಿಗಳು ಬದಲಾಗುವ ಮತ್ತು ಭಿನ್ನ ಸಂಸ್ಕೃತಿ, ವೈರುದ್ಯಗಳನ್ನು ಹೊಂದಿದ್ದರೂ ನಾವೆಲ್ಲರೂ ಭಾರತೀಯರೆಂಬ ಬ್ರಾತೃತ್ವವನ್ನು ಸಾರುತ್ತೇವೆ. ಇದಕ್ಕೆ ಕಾರಣ ನಮ್ಮ ಸಾಹಿತ್ಯದಲ್ಲಿನ ಗಟ್ಟಿತನ ಮತ್ತು ಸಂಸ್ಕೃತಿಯಲ್ಲಿನ ಗುಣಾತ್ಮಕತೆ. ಈ ಹಿನ್ನೆಲೆಯಲ್ಲಿ ಯುವ ಸಮುದಾಯ ದೇಶದ ಕೊಡುಗೆಯಾಗಿ ಬೆಳೆಯಬೇಕು ಎಂದರು.

ಉದಯೋನ್ಮುಖ ಕವಿಗಳಾದ ಆಶಾ ಎಚ್., ಕವಿತಾ ನಾಯ್ಕ್, ಪ್ರಿಯಾಂಕಾ ಕೋಲ್ವೇಕರ್, ನಮ್ರಾತಾ ಬಾಂದೇಕರ್, ರವಿರಾಜ್ ದೊಡ್ಡಮನಿ, ವೈಭವ ಹೆಗಡೆ, ಲಕ್ಷ್ಮೀ ಎಂ.ಎನ್, ಪೂಜಾ ನಾಯ್ಕ್ ಅವರು ಕವಿಗೋಷ್ಠಿಯಲ್ಲಿ ಭಾಗವಹಿಸಿ ತಮ್ಮ ಕವಿತೆಗಳನ್ನು ವಾಚಿಸಿದರು.

ಹೆಣ್ಣು ಭ್ರೂಣ ಹತ್ಯೆ, ಲಿಂಗ ತಾರತಮ್ಯ ಹಾಗೂ ಹೆಣ್ಣಿನ ಶೋಷಣೆ ಬಗೆಗೆ ವಾಚಸಿದ ಕವಿತೆಗಳು ಮನವೀಯ ಮುಖದ ಕನ್ನಡಿಯಾಗಿದ್ದವು.

ಅಲ್ಲದೆ, ಸುಚಿತ್ರಾ ಅಂಬಿಗಾ, ಪೂಜಾಗೌಡ, ಸ್ಫೂತರ್ಿ ಶೆಟ್ಟಿ, ತೇಜಸ್ವಿ ನಯ್ಕ್, ನಾಗವೇಣಿ ಅಣ್ವೇಕರ್ ಪೂಜಾ ನಾಯ್ಕ್ ಸೇರಿದಂತೆ ಹಲವರು ಹಿರಿಯ ಸಾಹಿತಿ ಹಾಗೂ ಕವಿ ಪ್ರೊ.ಮೋಹನ್ ಹಬ್ಬು ಅವರಿಗೆ ವರ್ತಮಾನದ ಘಟನೆಗಳನ್ನಾಧರಿಸಿ ಪ್ರಶ್ನೆಗಳನ್ನು ಕೇಳುವ ಮೂಲಕ ಸಂವಾದ ನಡೆಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿದರ್ೇಶಕ ಹಿಮಂತರಾಜು ಜಿ. ಪ್ರಾಸ್ತಾವಿಕ ಮಾತನಾಡಿದರು. ಶಿವಾಜಿ ಶಿಕ್ಷಣ ಮಹಾ ವಿದ್ಯಾಲಯದ ವಿದ್ಯಾಥರ್ಿ ಸಂಘದ ಉಪಾಧ್ಯಕ ಡಾ.ಶಿವಕುಮಾರ್ ನಾಯಕ ಸ್ವಾಗತಿಸಿದರು. ಪ್ರಶಿಕ್ಷಣಾಥರ್ಿ ಪ್ರಿಯಾ ನಾಯಕ ನಿರೂಪಿಸಿ ವಂದಿಸಿದರು.