ಸಾರಿಗೆ ಬಸ್ ಬೈಕ್ ನಡುವೆ ಭೀಕರ ಅಪಘಾತ ಬೆಂಕಿ ಹತ್ತಿ ಬೈಕ್ ಸಹಿತ ಯುವಕ, ಬಸ್ ಸುಟ್ಟು ಕರಕಲು
Horrific accident between transport bus and bike, young man with bike caught fire, bus burnt to ash
ಲೋಕದರ್ಶನ ವರದಿ
ಸಿಂದಗಿ 01: ರಾಷ್ಟ್ರೀಯ ಹೆದ್ದಾರಿ 50ರಲ್ಲಿರುವ ತಾಲೂಕಿನ ಕನ್ನೋಳ್ಳಿ ಟೋಲ್ಗೇಟ್ ಸಮೀಪ ಸಾರಿಗೆ ಬಸ್ ಹಾಗೂ ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿ ಬೈಕ್ ಸವಾರ ಸುಟ್ಟು ಕರಕಲಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಅಲ್ಲದೆ ಬಸ್ಸು ಕೂಡಾ ಸುಟ್ಟು ಹೋಗಿದೆ. ನಗರದ ಅಭಿಷೇಕ್ ಸಾಯಬಗೌಡ ನಾಗರಾಳ (ಅಲ್ಲಾಪುರ) ಮೃತ ದುರ್ದೈವಿ ಯುವಕ ಎಂದು ಗುರುತಿಸಲಾಗಿದೆ.
ವಿಜಯಪುರ ಬಸ್ ಡಿಪೋಗೆ ಸಂಬಂಧಿಸಿದ ಕೆ.ಎ 28 ಎಫ್2095 ನಂಬರಿನ ಬಸ್ಸು ಇದಾಗಿದ್ದು, ಕೆಎ28 ಎಚ್ ಕೆ 2551 ನಂಬರಿನ ಪಲ್ಸರ್ ಎನ್ಎಸ್ ಬೈಕ್ ಮಧ್ಯ ಸುಮಾರು 12.20 ಗಂಟೆಯ ಸಮಯದಲ್ಲಿ ನಡೆದಿದೆ. ಅಪಘಾತದ ತೀವ್ರತೆಗೆ ಬಸ್ ಬೈಕ್ ಯುವಕ ಸಹ ಸುಟ್ಟು ಹೋಗಿದ್ದಾನೆ ಘಟನಾ ಸ್ಥಳಕ್ಕೆ ನಗರದ ಪೊಲೀಸ್ ಠಾಣೆಯ ಪಿಎಸೈ ಕಾಂಬಳೆ ಹಾಗೂ ಸಿಬ್ಬಂದಿ ಭೆೇಟಿ ನೀಡಿ, ಸಿಂದಗಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಸುಟ್ಟು ಹೋಗುತ್ತಿರುವ ಬಸ್ಸ್ನ್ನು ನಂದಿಸಲು ಅಗ್ನಿಶಾಮಕ ದಳದ ಸಿಬ್ಬಂದಿ ಹರ ಸಾಹಸ ಪಟ್ಟರು ಕೂಡಾ ಬೆಂಕಿಯ ತೀವ್ರತೆಗೆ ಸಂಪೂರ್ಣ ಸುಟ್ಟು ಹೋಯಿತು. ಮಗನನ್ನು ಕಳೆದುಕೊಂಡ ತಾಯಿ ರಾಜೇಶ್ವರಿ ನಾಗರಾಳ ಹಾಗೂ ಕುಟುಂಬಸ್ಥರ ಅಕ್ರಂದನ ಮುಗಿಲು ಮುಟ್ಟಿದೆ.
ಪ್ರಕರಣಕ್ಕೂ ಮುನ್ನ; ನಾನು ಪ್ರೇಮಿಸಿದ ಸಂಜುಳನ್ನು ಬಿಟ್ಟು ನಾನು ಬದುಕುಲಾರೆ ನನ್ನಿಂದ ಅವಳನ್ನು ದೂರ ಮಾಡಿದ ಸಂಜುಳ ಅಣ್ಣ ವಿರೇಶ ನಂದೂರ, ಅವಳ ತಾಯಿ ಚೈತ್ರಾ ನಂದೂರ, ಕೂಡಲಸಂಗಮದ ನವೀನಕುಮಾರ ಪಾಟೀಲರ 31 ಮಾರ್ಚ 26 ಇಂದು ಇನ್ಸಾ-್ಟಗ್ರಾಮ್ನಲ್ಲಿ 2 ಪೋಟೋಗಳನ್ನು ರವಾನೆ ಮಾಡಿದ್ದು ಇವರೇ ನನ್ನ ಸಾವಿಗೆ ಕಾರಣರು ಎಂದು ಪೋಸ್ಟ ಮಾಡಿ ಬೈಕ್ ಮೇಲೆ ಕುಳಿತು ತೀವ್ರವಾಗಿ ವಾಹನ್ ಚಲಾಯಿಸಿದ್ದು ವಿಜಯಪುರ ಕಡೆಯಿಂದ ಬರುತ್ತಿರುವ ಬಸ್ಸು ಮುಂದೆ ಬರುವ ಬೇರೆ ವಾಹನವನ್ನು ಲೆಕ್ಕಿಸದೆ ಓವರ್ ಟೆಕ್ ಮಾಡಲು ಹೋಗಿ ಬೈಕ್ ಸವಾರನು ಪ್ರೇಮಿಯ ಅಮಲಿನಲ್ಲಿ ಹೊರಟು ಅಂಧ ಪ್ರೇಮಿ ಬಸ್ಸಿಗೆ ನೇರವಾಗಿ ಡಿಕ್ಕಿ ಹೊಡೆದ ಪರಿಣಾಮ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 