25 ರಂದು ಹೊಳಲಮ್ಮದೇವಿಗೆ ಪ್ರಾಣಪ್ರತಿಷ್ಠಾಪನೆ
Holalammadevi to be dedicated on the 25th
ಶಿರಹಟ್ಟಿ 22 : ಶಿರಹಟ್ಟಿ ತಾಲೂಕಿನ ಶ್ರೀಮಂತಗಡದ ಹೊಳಲಮ್ಮದೇವಿಯ ದೇವಸ್ಥಾನನ ಅಭಿವೃದ್ದಿ ಕಾರ್ಯಕ್ರಮಗಳು ಜರುಗುತ್ತಿವೆ. ಕಳೆದ ಒಂದು ವರ್ಷದಿಂದ ಹೊಳಲಮ್ಮದೇವಿಯ ಮೂರ್ತಿದರ್ಶನ ಇಲ್ಲದೇ ಭಕ್ತರೆಲ್ಲ ದೇವಿಯ ಮೂರ್ತಿಯ ದರ್ಶನಕ್ಕಾಗಿ ಕಾತುರದಿಂದ ಕಾಯುತ್ತಿದ್ದು ಭಕ್ತರಿಗೆ ದರ್ಶನ ಭಾಗ್ಯ ಪ್ರಾರಂಭವಾಗಲಿದೆ. ಹೊಳಲಮ್ಮದೇವಿಯ ಪ್ರಾಣ ಪ್ರತಿಷ್ಠಪನಾ ಕಾರ್ಯಕ್ರಮವು ದಿ. 23 ಶುಕ್ರವಾರ ರಂದು ಸಾಯಂಕಾಲ ಗೋಧೋಳಿಸಮಯದಿಂದ ಪೂಜಾ ಕಾರ್ಯಕ್ರಮ ಆರಂಭವಾಗುತ್ತದೆ. ಸಾಯಂಕಾಲ 5-30ಕ್ಕೆ ಗೋಮಾತಾ ಪೂಜೆ, ಮುತ್ತೈದರಿಂದ ಕುಂಭ ಪೂಜಾ ಪ್ರವೇಶ ಕಾರ್ಯಕ್ರಮ ನೆರವೇರುವುದು. ದಿ. 24 ರಂದು ಶನಿವಾರ ದೇವತಾಶಾಂತಿ ಪೂಜಾ ಕಾರ್ಯಕ್ರಮ ಜರಗುವುದು.
ದಿ. 25 ರಂದು ರವಿವಾರ ಬ್ರಹ್ಮಿ ಮೊಹೋರ್ತದಲ್ಲಿ ಹೊಳಲಮ್ಮ ತಾಯಿಯ ಮೂರ್ತಿ ಪ್ರಣ ಪ್ರತಿಷ್ಠಾಪನೆಹಾಗೂ ದೇವತಾ ಶಾಂತಿಹೋಮ, ಗೋಹೋಮ, ಪೂರ್ಣಾಹುತಿ ಪೂಜಾ ಕಾರ್ಯಕ್ರಮ ಸಮಸ್ರ ಭಕ್ತರ ಸಮ್ಮುಖದಲ್ಲಿ ನೆರವೇರುವುದು. ಈ ಎಲ್ಲಾ ಕಾರ್ಯಕ್ರಮಗಳ ದಿವ್ಯ ಸಾನಿಧ್ಯವನ್ನು ಷ.ಬ್ರ.ಶ್ರೀಸುಜ್ಞಾನ ದೇವ ಶಿವಾಚಾರ್ಯ ಮಹಾಸ್ವಾಮಿಜಿಗಳು ಬನ್ನಿಕೊಪ್ಪ ಮತ್ತು ಶ್ರೀಮ.ನಿ.ಪ ಶ್ರೀ ಬಸವರಾಜ ಮಹಾಸ್ವಾಮಿಜಿಗಳು ರಾಮಲಿಂಗೇಶ್ವರ ದಾಸೋಹಮಠ ಬೆಳ್ಳಟ್ಟಿ ಇವರ ಅಮೃತ ಹಸ್ತದಿಂದ ನೆರವೇರುವುದು. ವೀರಯ್ಯಶಾಸ್ತ್ರೀ ಹಿರೇಮಠ, ಬನ್ನಿಕೊಪ್ಪ, ಮತ್ತು ಸದಾನಂದಯ್ಯ ಶಾಸ್ತ್ರೀ ಮರಡೂರಮಠ ರಣತೂರ ಪೌರೋಹಿತ್ಯದಲ್ಲಿ ಜರುವುದು ಹೊಳಲಮ್ಮದೇವಿಯ ದರ್ಶನ ಆರ್ಶಿವಾದ ಪಡೆದು ಪುನಿತರಾಗಬೇಕೆಂದು ಎಂದು ಹೊಳಲಮ್ಮದೇವಿಯ ದೇವಸ್ಥಾನದ ಕಮೀಟಿಯ ಟ್ರಸ್ಟ ಅಧ್ಯಕ್ಷ ಖೇಮಣ್ಣ ಪವಾರ ಹಾಗೂ ದಾಮೋಜಿ ತೆಗ್ಗಿಹಳ್ಳಿ ಹಾಗೂ ಸದಸ್ಯರು ತಿಳಿಸಿದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 