ಮೂಲವ್ಯಾಧಿ ಸಮಸ್ಯೆ: ವಿಶೇಷ ಉಪನ್ಯಾಸ, ಜಾಗೃತಿ

ಮೂಲವ್ಯಾಧಿ ಸಮಸ್ಯೆ: ವಿಶೇಷ ಉಪನ್ಯಾಸ, ಜಾಗೃತಿ  Hemorrhoid Problem: Special Lecture, Awareness

             ಬೆಳಗಾವಿ 18: ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ವಿಭಾಗ, ಮಹಿಳಾ ಸಬಲೀಕರಣ ಕೋಶ ಮತ್ತು ಸಂಗೊಳ್ಳಿ ರಾಯಣ್ಣ ಅಧ್ಯಯನ ಪೀಠದ ವತಿಯಿಂದ ದಿ. 18ರಂದು ಬೆಳಿಗ್ಗೆ 10.30 ಗಂಟೆಗೆ ಮೂಲವ್ಯಾಧಿ ಸಮಸ್ಯೆ ಕುರಿತು ವಿಶೇಷ ಉಪನ್ಯಾಸ ಮತ್ತು ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.   

           ಸಂಪನ್ಮೂಲ ವ್ಯಕ್ತಿಯಾದ ರಾಚವಿವಿ ಆರೋಗ್ಯಾಧಿಕಾರಿ ಡಾ. ಯೋಗಿತಾ ಸಿ. ಪೊದ್ದಾರ್, ಅವರು ಮಾತನಾಡಿ ಮೂಲವ್ಯಾಧಿ ಸಮಸ್ಯೆ, ಅದರ ಲಕ್ಷಣಗಳು ನಿವಾರಣೋಪಾಯಗಳ ಬಗ್ಗೆ ವಿವರಿಸಿದರು. ಈ ಸಮಸ್ಯೆ ಉಂಟಾದಲ್ಲಿ ಆಹಾರ ಕ್ರಮಗಳ ಕುರಿತು ಮಾಹಿತಿ ನೀಡಿದರು.  

    ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ, ಸಹ ಪ್ರಾಧ್ಯಾಪಕರಾದ ಡಾ. ರವಿ ಎಸ್‌. ದಳವಾಯಿ, ಇವರು  ಆರೋಗ್ಯ ಸಮಸ್ಯೆಯ ಕುರಿತು ಜಾಗೃತಿ ಮೂಡಿಸುವುದು ಅವಶ್ಯಕವೆಂದು ತಿಳಿಸಿದರು. ಡಾ. ಮಂಜುಳಾ ಜಿ.ಕೆ. ಅತಿಥಿಗಳನ್ನು ಪರಿಚಯಿಸಿದರು. ಡಾ. ಸುಮಂತ್ ಎಸ್‌. ಹೀರೆಮಠ, ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.