ಮೋದಿ ಮಾಧ್ಯಮಗಳಿಗೆ ಸಿಕ್ಕಿದ್ದಾರೆಯೇ? ಅವರನ್ನು ಯಾವಾಗ ಪ್ರಶ್ನೆ ಮಾಡುವಿರಿ: ಸಚಿವ ಗುಂಡೂರಾವ್
Has Modi been caught by the media? When will you question him: Minister Gundu Rao
ಮೋದಿ ಮಾಧ್ಯಮಗಳಿಗೆ ಸಿಕ್ಕಿದ್ದಾರೆಯೇ? ಅವರನ್ನು ಯಾವಾಗ ಪ್ರಶ್ನೆ ಮಾಡುವಿರಿ: ಸಚಿವ ಗುಂಡೂರಾವ್
ಕಾರವಾರ 30: ಪ್ರಧಾನಿ ಮೋದಿ ಮಾಧ್ಯಮಗಳಿಗೆ ಸಿಕ್ಕಿದ್ದಾರೆಯೇ ? ಅವರನ್ನು ಯಾವಾಗ ಪ್ರಶ್ನೆ ಮಾಡುವಿರಿ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾಧ್ಯಮಗಳಿಗೆ ಪ್ರಶ್ನಿಸಿದ ಪ್ರಸಂಗ ಕಾರವಾರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಯಿತು.ಸಚಿವರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಆರೋಗ್ಯ ಇಲಾಖೆಯ ಬೇಡಿಕೆಗಳ ಬಗ್ಗೆ ನಾಗರಿಕರಿಂಎ ಅಹವಾಲು ಕೇಳಿದ ನಂತರ ಮಾಧ್ಯಮಗಳ ಜೊತೆ ಮಾತನಾಡಿದರು.ಮೋದಿ ಒಮ್ಮೆಯೂ ಮಾಧ್ಯಮಗಳನ್ನು ಎದುರು ಗೊಂಡಿಲ್ಲ. ಬರೀ ಭಾಷಣ ಹೊಡೆಯುವುದು ,ಮನ್ ಕಿ ಬಾತ್ ಹೇಳಿ ಹೋಗ್ತಾರೆ. ಒಮ್ಮೆಯೂ ಮಾಧ್ಯಮಗಳಿಗೆ ಸಿಗದಿರುವುದು ಸರ್ವಾಧಿಕಾರಿ ಧೋರಣೆಯಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಟೀಕಿಸಿದರು.ಪುಲ್ವಾಮಾ ದಾಳಿಯ ಬಗ್ಗೆ,ಅದು ಯಾಕಾಗಿ ಆಯಿತು ಎಂದು ಯಾವುದೇ ಉತ್ತರ ನೀಡಿಲ್ಲವೆಂದು ಸಚಿವರು ಆರೋಪಿಸಿದರು.
ಪುಲ್ವಾಮಾ ಭಯೋತ್ಪಾದಕ ದಾಳಿಯಲ್ಲಿನಮ್ಮ 40 ಸೈನಿಕರು ಹುತಾತ್ಮರಾದ ಘಟನೆಗೆ ಸಂಬಂಧಿಸಿದಂತೆ ಯಾವುದೇ ಸ್ಪಷ್ಟನೆ ನೀಡಿಲ್ಲ.ಪಹಲ್ಗಾಮ್ ದಾಳಿಯಲ್ಲೂ ಉತ್ತರ ಸಿಗಲಿಲ್ಲ. ಪಾಕಿಸ್ತಾನವು ಭಾರತದ ಐದು ಯುದ್ಧವಿಮಾನಗಳನ್ನು ಹೊಡೆದು ಹಾಕಿದೆ ಎಂದು ಹೇಳಿತು. ಆದರೆ ಬಿಜೆಪಿ ಸರ್ಕಾರ ಇದುವರೆಗೆ ಸತ್ಯಾಂಶ ಬಹಿರಂಗಪಡಿಸಿಲ್ಲ ಎಂದರು.ಮೋದಿ ವಿಶ್ವಗುರು ಎಂದು ಹೇಳುತ್ತಾರೆ. ಆದರೆ ಅಕ್ಕಪಕ್ಕದ ದೇಶಗಳೂ ನಮ್ಮ ಪರ ನಿಲ್ಲುತ್ತಿಲ್ಲ, ಪಾಕ್ ಪ್ರಧಾನಿ ಅಮೆರಿಕಾ ಅಧ್ಯಕ್ಷರೊಂದಿಗೆ ಕಾಣಿಸಿಕೊಂಡಿದ್ದಾರೆ.ಹಾಗಿದ್ದರೆ ವಿಶ್ವಗುರು ಎಂದರೇನು? ಎಂದು ಪ್ರಶ್ನಿಸಿದರು.ಮೈಸೂರು ಮುಡಾ ಪ್ರಕರಣದಲ್ಲಿ ಈಡಿಗೆ ಸುಪ್ರೀಂ ಕೋರ್ಟ್ ಛೀಮಾರಿ ಹಾಕಿರುವುದನ್ನು ಉಲ್ಲೇಖಿಸಿದ ಸಚಿವ ಗುಂಡೂರಾವ್, ಈಡಿ, ಐಟಿ, ಎಲೆಕ್ಷನ್ ಕಮಿಷನ್ ಎಲ್ಲವನ್ನೂ ಕೇಂದ್ರ ಸರ್ಕಾರ ದುರುಪಯೋಗಪಡಿಸಿಕೊಂಡು ನಾಶ ಮಾಡುತ್ತಿದೆ ಆರೋಪಿಸಿದರು.ಬರಗಾಲ ಪರಿಹಾರ ಪಡೆಯಲು ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ಗೆ ಹೋಗಬೇಕಾದ ಪರಿಸ್ಥಿತಿ ಉಂಟಾಯಿತು .ನಮ್ಮ ಪಾಲಿನ ಹಣ ಪಡೆಯಲು ಸುಪ್ರಿಂಕೋರ್ಟನಿಂದ ಕೇಂದ್ರ ಸರ್ಕಾರಕ್ಕೆ ಹೇಳಿಸಬೇಕಾಯಿತು. ಆ ಸನ್ನಿವೇಶದಲ್ಲಿ ರಾಜ್ಯದಿಂದ ಆರಿಸಿ ಹೋದ ಬಿಜೆಪಿ ಸಂಸದರು ತಮ್ಮ ಪಾಲಿನ ಹೊಣೆಗಾರಿಕೆ ನಿರ್ವಹಿಸಿದರೆ ? ಸಂಸದ ಕಾಗೇರಿ, ಸಚಿವ ಪ್ರಹ್ಲಾದ್ ಜೋಶಿ ದೆಹಲಿಯಲ್ಲಿ ಏನು ಮಾಡುತ್ತಿದ್ದಾರೆ? ಎಂದು ಸಚಿವ ದಿನೇಶ್ ಗುಂಡೂರಾವ್ ಪ್ರಶ್ನಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 