ಕೂಡಿ ಬಾಳುವುದರಲ್ಲಿ ಸ್ವರ್ಗ ಸುಖ: ಬಿದರಿ
ಧಾರವಾಡ 18: ಹಿಂದಿನ ಕಾಲದಲ್ಲಿ ಜನ ಸತ್ಯ-ಧರ್ಮದಿಂದ ಬದುಕನ್ನು ಸಾಗಿಸುತ್ತಿದ್ದರು. ಇಡೀ ಊರೇ ಒಂದು ಕುಟುಂಬದಂತೆ ಎಲ್ಲರೂ ಕೂಡಿ ಬಾಳುತ್ತಿದ್ದರು. ಆದರೆ ಈಗಿನ ಪೀಳಿಗೆಯವರು ಅವಿಭಕ್ತ ಕುಟುಂಬ ಆಯ್ಕೆ ಮಾಡಿಕೊಂಡಿದ್ದಾರೆ. ಕೂಡಿ ಬಾಳುವುದನ್ನು ಮರೆತು, ಜಾತಿ ವೈಷಮ್ಯಗಳ ನೆಪದಿಂದ ದ್ವೇಷ ಸಾರುತ್ತಿದ್ದಾರೆ. ಇಲ್ಲಿ ಎಲ್ಲರೂ ನಮ್ಮವರೇ. ಕೂಡಿ ಬಾಳುವುದರಲ್ಲಿ ಸ್ವರ್ಗ ಸುಖವಿದೆ ಎಂದು ಖ್ಯಾತ ಆಶುಕವಿ ಸಿದ್ಧಪ್ಪ ಬಿದರಿ ಹೇಳಿದರು.
ಜನಪದ ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಕ್ಕೆ ನಗರದ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರ್ಸ್ ಸಭಾಂಗಣದಲ್ಲಿ ಮಾಸಿಕ ಕೌಟುಂಬಿಕ ಸಭೆಯಲ್ಲಿ ಪ್ರಿಮಿಯರ್ ಸಿಟಿಜನ್ಸ್ ಕ್ಲಬ್ ನೀಡಿದ ಗೌರವ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಮನುಷ್ಯ ಪ್ರಾಯ, ಅಧಿಕಾರ ಹಾಗೂ ಹಣವಿದ್ದಾಗ ಯಾರ ಮಾತನ್ನು ಕೇಳುವುದಿಲ್ಲ. ಹಾಗಾಗಿ ಅಹಂಕಾರದ ಜೀವನ ನಿಷ್ಪ್ರಯೋಜಕ. ಈ ಜಗವೇ ಒಂದು ನಾಟಕವಿದ್ದಂತೆ. ಇಲ್ಲಿ ನಾವೆಲ್ಲ ಪಾತ್ರಧಾರಿಗಳು. ದೇವರೇ ಇದಕ್ಕೆಲ್ಲ ಸೂತ್ರಧಾರಿ. ದೇವರು ಕಷ್ಟ ಕೊಟ್ಟಾಗ ಮರುಗದೆ, ಮುಂದೆ ಸುಖ ಕೊಟ್ಟೆ ಕೊಡುತ್ತಾನೆ ಎಂಬ ಆಶಾಭಾವನೆ ಬೆಳೆಸಿಕೊಳ್ಳಬೇಕು. ಅಂದಾಗ ಜೀವನದೊಳಗೆ ಸ್ಫೂತರ್ಿ ಬರಲು ಸಾಧ್ಯ ಎಂದು ಬಿದರಿ ಹೇಳಿದರು.
ಈ ಸಂದರ್ಭದಲ್ಲಿ ಕ್ಲಬ್ನ ಉಪಾಧ್ಯಕ್ಷ ಗುರುನಾಥ ಇನಾಮದಾರ, ಕಾರ್ಯದಶರ್ಿ ಸುಧೀಂದ್ರ ಜಾಲಿಹಾಳ ಹಾಗೂ ಕ್ಲಬ್ನ ಸದಸ್ಯರು ಹಾಜರಿದ್ದರು.
ಶವ ವಾಹನದಲ್ಲಿ ಹಾಳಾದ ಸ್ಟ್ರೆಚರ್ : ಶವ ಸಾಗಿಸಲು ನಾಗರಿಕರ ಪರದಾಟ : ಸ್ಟ್ರೆಚರ್ ಖರೀದಿಗೆ ಪುರಸಭೆಯಲ್ಲಿ ದುಡ್ಡು ಇಲ್ಲವಾ?
ನೀಲಣ್ಣವರ ಪರ ಮಹಾರಾಷ್ಟ್ರದ ಹೂಡಿಕೆದಾರನ ಬ್ಯಾಟಿಂಗ್: ಪೊಲೀಸರ ವಿರುದ್ದ ಆಕ್ರೋಶದ ಅಡಿಯೊ ವೈರಲ್
ಒಳಚರಂಡಿಗೆ ನುಗ್ಗುತ್ತಿದೆ ಮಳೆಯ ನೀರು : ಗಲ್ಲಿಯಲ್ಲಾ ಗಬ್ಬು ವಾಸನೆ, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜನರ ಹಿಡಿಶಾಪ
ಭಾರಿ ಮಳೆ, ಗಾಳಿಯಿಂದ ಹಾರಿಹೋದ ಸರ್ಕಾರಿ ಶಾಲೆಗಳ ಮೇಲ್ಚಾವಣಿ : ಮರ ಕಂಬಗಳು ಧರೆಗೆ
ಅಗಲಿದ ಅನಾಥನಿಗೆ ಅಗ್ನಿಸ್ಪರ್ಶ ಮಾಡಿ ಆಪತ್ಭಾಂದವನಾದ ವಿಜಯ ಮೋರೆ: ಅಂತ್ಯಕ್ರಿಯೆಗೆ ಮಾರ್ಕೆಟ್ ಪೊಲೀಸರ ಸಾಥ್
ದ್ವಿಚಕ್ರವಾಹನ ಕಳ್ಳರ ಬಂಧನ : 6.10 ಲಕ್ಷ ಮೌಲ್ಯದ 14 ವಾಹನಗಳ ವಶಕ್ಕೆ ಎಸ್ ಪಿ ರಾಮರಾಜನ್ 