ಹೊಳಗುಂದಿ ಸಿದ್ದೇಶ್ವರ ಸ್ವಾಮಿ ರಥೋತ್ಸವ
ಹೂವಿನಹಡಗಲಿ 17: ತಾಲ್ಲೂಕಿನ ಹೊಳಗುಂದಿ ಗ್ರಾಮದ ಸಿದ್ದೇಶ್ವರ ಸ್ವಾಮಿಯ ರಥೋತ್ಸವ ಶುಕ್ರವಾರ ಸಂಜೆ ಸಂಭ್ರಮದಿಂದ ನೆರವೇರಿತು ದೇವಾಲಯ ದಿಂದ ಪಲಕ್ಕಿಯ ಭವ್ಯ ಮೆರವಣಿಗೆಯಲ್ಲಿ ಸ್ವಾಮಿಯ ಉತ್ಸವ ಮೂರ್ತಿ ತಂದು ರಥಕ್ಕೆ ಪ್ರದಕ್ಷಿಣೆ ಹಾಕಲಾಯಿತು. ನಾನಾ ಬಗೆಯ ಹೂಮಾಲೆ, ತಳಿರು ತೋರಣಗಳಿಂದ ಅಲಂಕರಿಸಿದ್ದ ಗಡ್ಡಿ ತೇರಿಗೆ ಸಾಂಪ್ರದಾಯಿಕ ವಿಧಿ ವಿಧಾನಗಳಿಂದ ಪೂಜೆ, ಮಹಾಮಂಗಳಾರತಿ ನೆರವೇರಿಸಿದರು.ಸಿದ್ದೇಶ್ವರ ಸ್ವಾಮಿ ಜಯಘೋಷ ಹರ್ಷೋದ್ಗಾರ ನಡುವೆ ರಥೋತ್ಸವ ವನ್ನು ಎಳೆಯಲಾಯಿತು. ಭಕ್ತರು ಬಾಳೆಹಣ್ಣು. ಉತ್ತತ್ತಿ ಎಸೆದು ಭಕ್ತಿ ಮೆರೆದರು.ಸಮಾಳ.ನಂದಿಕೋಲು.ಮಂಗಳವಾದ್ಯಗಳು ರಥೋತ್ಸವಕ್ಕೆ ಮೆರುಗು ತಂದವು. ಹೂವಿನಹಡಗಲಿ. ಉತ್ತಂಗಿ. ಇಟ್ಟಿಗಿ.ಮೋರಗೇರಿ. ನಂದಿಹಳ್ಳಿ.ಸೋಗಿ.ಬನ್ನಿಕಲ್ಲು ಸೇರಿದಂತೆ ಭಕ್ತರು ಭಾಗಿಯಾಗಿದ್ದರು. ಇದಕ್ಕೂ ಮುನ್ನ ಸ್ವಾಮಿಯ ನಿಶಾನೆ ನಿವ್ರತ್ತ ಪ್ರಾಚಾರ್ಯ ಎಂ.ಎಂ.ಗುರುಬಸವರಾಜ ಅವರಿಗೆ 210.101 ರೂ. ಪಡೆದರು.ಜಾತ್ರೆಯ ನಿಮಿತ್ತ ಸ್ಥಳೀಯ ಕಲಾವಿದರಿಂದ ಎರಡು ನಾಟಕಗಳು ಪ್ರದರ್ಶನಗೊಂಡವು.