ನಾಗಾಸಾಧುಗಳಿಂದ ಆಶೀರ್ವಾದ ಪಡೆದ ಎಚ್‌.ಕೆ.ಪಿ

ನಾಗಾಸಾಧುಗಳಿಂದ ಆಶೀರ್ವಾದ ಪಡೆದ ಎಚ್‌.ಕೆ.ಪಿ HKP receives blessings from Naga Sadhus

ಗದಗ 18 ;  ನಗರದಲ್ಲಿ ಅತಿರುದ್ರ ಮಹಾಯಾಗ ಸೇವಾ ಸಮಿತಿ ವತಿಯಿಂದ ​‍್ರ​‍್ರಥಮ ಬಾರಿಗೆ ನಡೆಯುತ್ತಿರುವ 9 ಅಗ್ನಿಕುಂಡದ ಅತಿರುದ್ರ ಮಹಾಯಜ್ಞ ಕಿರಿಯ ಕುಂಭಮೇಳದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್‌.ಕೆ.ಪಾಟೀಲ ಅವರು ಭೇಟಿ ನೀಡಿ ನಾಗಾಸಾಧು ಪೂಜ್ಯಶ್ರೀ ಸಹದೇವಾನಂದ ಗುರೂಜಿ ಅವರಿಂದ ಆಶೀರ್ವಾದ ಪಡೆದರು. ಈ ಸಂದಭದಲ್ಲಿ ಸಮಿತಿಯ ಅಧ್ಯಕ್ಷ ಕಿರಣ ಭೂಮಾ, ಗೌರಾವಾಧ್ಯಕ್ಷ ಎಸ್‌. ಶಿವನಗೌಡರ, ಉಮೇಶ ಪಾಟೀಲ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.