ದೇವಾಲಯ ಕಟ್ಟಡ ನಿರ್ಮಾಣಕ್ಕೆ ಎಚ್‌.ಡಿ.ಕುಮಾರಸ್ವಾಮಿ ದೇಣಿಗೆ

ದೇವಾಲಯ ಕಟ್ಟಡ ನಿರ್ಮಾಣಕ್ಕೆ ಎಚ್‌.ಡಿ.ಕುಮಾರಸ್ವಾಮಿ  ದೇಣಿಗೆ HD Kumaraswamy donation for construction of temple building


ಗದಗ 09 :  ಜಿಲ್ಲೆಯ  ಶಿರಹಟ್ಟಿ ತಾಲೂಕಿನ ಅಂಕಲಿಯಲ್ಲಿ ಆರಾಧ್ಯ ದೇವತೆ ಮರಿಯಮ್ಮ ದೇವಿಯ ನೂತನ ದೇವಾಲಯ ಕಟ್ಟಡ ನಿರ್ಮಾಣಕ್ಕೆ ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವ ಎಚ್‌.ಡಿ.ಕುಮಾರಸ್ವಾಮಿ  ಒಂದು ಲಕ್ಷ ರೂಪಾಯಿ ದೇಣಿಗೆ ನೀಡಿದ್ದಾರೆ. ಮರಿಯಮ್ಮ ದೇವಸ್ಥಾನ ಟ್ರಸ್ಟ್‌ ನಿಯೋಗ ಬೆಂಗಳೂರಿನಲ್ಲಿ ಕೇಂದ್ರ ಸಚಿವ ಎಚ್‌.ಡಿ.ಕುಮಾರ ಸ್ವಾಮಿ ಅವರನ್ನು ಭೇಟಿಮಾಡಿ ದೇವಸ್ಥಾನ ನಿರ್ಮಾಣಕ್ಕೆ ಧನ ಸಹಾಯ ಮಾಡುವಂತೆ ಮನವಿ ಸಲ್ಲಿಸಿತು. ನಿಯೋಗದ ಮನವಿಗೆ ತಕ್ಷಣ ಸ್ಪಂದಿಸಿದ   ಎಚ್‌.ಡಿ.ಕುಮಾರಸ್ವಾಮಿ ತಮ್ಮ  ಆಪ್ತ ಸಹಾಯಕ ಗಂಗಾಧರ್ ಹೊಂಬಾಳೆಮಠ ಮುಖಾಂತರ ದೇವಸ್ಥಾನ ನಿರ್ಮಾಣಕ್ಕೆ ಒಂದು ಲಕ್ಷ ರೂಪಾಯಿಯನ್ನು ಚೆಕ್ಕ್‌ ಮೂಲಕ ದೇಣಿಯಾಗಿ ನೀಡಿದ್ದಾರೆ.ಈ ಸಂದರ್ಭದಲ್ಲಿ ಅಂಕಲಿ ಗ್ರಾಮದ ಹಿರಿಯರಾದ ಫಕ್ಕಿರೆಡ್ಡಿ ಗೋಡಪಟ್ಟಿ ಬಾಬುರೆಡ್ಡಿ ದೋನ್ನೂರು ಹಾಲೇಶ ಪ್ರಚಾರ ಶಂಭು ಹಿರೇಮಠ ನಿಂಗಪ್ಪ ಹಿರಿಜನ ಸುರೇಶ ಮೇಲ್ಮನಿ ಉಪಸ್ಥಿತರಿದ್ದರು.