ನೂಲು ಹುಣ್ಣಿಮೆ ಅಂಗವಾಗಿ ಗುಗ್ಗಳೋತ್ಸವ ಕಾರ್ಯಕ್ರಮ
Guggalotsava program as part of Noolu Full Moon
ನೂಲು ಹುಣ್ಣಿಮೆ ಅಂಗವಾಗಿ ಗುಗ್ಗಳೋತ್ಸವ ಕಾರ್ಯಕ್ರಮ
ಗದಗ 11: ಬೆಟಗೇರಿಯ ಶ್ರೀ ವೀರಭದ್ರೇಶ್ವರ ಸದ್ಭಕ್ತ ಮಂಡಳಿ ವತಿಯಿಂದ ನೂಲು ಹುಣ್ಣಿಮೆ ಅಂಗವಾಗಿ ಗುಗ್ಗಳೋತ್ಸವ ಜರುಗಿತು. ಕಳೆದ 13 ವರ್ಷಗಳಿಂದ ಪ್ರತಿ ವರ್ಷ ನೂಲು ಹುಣ್ಣಿಮೆಯಿಂದ ಸಾಮೂಹಿಕ ಗುಗ್ಗಳೋತ್ಸವ ಕಾರ್ಯಕ್ರಮ ನೆರವೇರಿಸುತ್ತ ಬಂದಿದು,್ದ ಪ್ರಸಕ್ತ ವರ್ಷ 5 ಜೊತೆ ಗುಗ್ಗಳ ಕಾರ್ಯಕ್ರಮವು ಅತ್ಯಂತ ವಿಜೃಂಭಣೆಯಿಂದ ಭಯ ಭಕ್ತಿಯಿಂದಲೂ ನೆರವೇರಿತು. ನೂರಾರು ಭಕ್ತಾದಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀ ವೀರಭದ್ರೇಶ್ವರನ ಕ್ರಪೆಗೆ ಪಾತ್ರರಾದರು. ವೀರಭದ್ರೇಶ್ವರ ಸದ್ಭಕ್ತ ಮಂಡಳಿಯ ಎಲ್ಲ ಭಕ್ತಾದಿಗಳು ಈ ಸೇವೆಯಲ್ಲಿ ಪಾಲ್ಗೊಂಡು ಸೇವೆ ಸಲ್ಲಿಸಿದರು. ಮಕ್ಕಳು, ಪುರವಂತರು ವೀರಗಾಸೆ ಧರಿಸಿ ವೀರಭದ್ರೇಶ್ವರನ ಒಡಪುಗಳನ್ನು ಹೇಳುತ್ತಾ ವೀರಗಾಸೆ ನೃತ್ಯ ಮಾಡುತ್ತ ಗುಗ್ಗುಳೋತ್ಸವದಲ್ಲಿ ಸೇವೆ ಸಲ್ಲಿಸಿದ್ದು ಕಣ್ಮನ ಸೆಳೆಯುವಂತಿತ್ತು. ಗುಗ್ಗುಳೋತ್ಸವದ ನಂತರ ಮಹಾಪ್ರಸಾದ ಜರುಗಿತು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 