ನೀರಾವರಿ ಯೋಜನೆಗಳಿಗೆ ಹೆಚ್ಚಿನ ಒತ್ತು ನೀಡಲಾಗಿದೆ : ಶಾಸಕ ಡಿ.ಎಮ್.ಐಹೊಳೆ
Greater emphasis has been given to irrigation projects: MLA D.M. Aihole
ರಾಯಬಾಗ 12 : ಮತಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದ್ದು, ನೀರಾವರಿ ಯೋಜನೆಗಳಿಗೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದು ಶಾಸಕ ಡಿ.ಎಮ್.ಐಹೊಳೆ ಹೇಳಿದರು.ಸೋಮವಾರ ಜಿ.ಪಂ.ಇಲಾಖೆಯಡಿ ಮಂಜೂರಾದ ಪಟ್ಟಣದ ಪಶು ಆಸ್ಪತ್ರೆಯ ಮೊದಲ ಅಂತಸ್ತಿನಲ್ಲಿ 10 ಲಕ್ಷ ರೂ. ವೆಚ್ಚದಲ್ಲಿ ದಾಸ್ತಾನು ಕೊಠಡಿ ನಿರ್ಮಾಣ ಹಾಗೂ 6 ಲಕ್ಷ ರೂ. ವೆಚ್ಚದಲ್ಲಿ ದೇವರಾಜ ಅರಸು ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯಕ್ಕೆ ಕಂಪೌಂಡ್ (ತಡೆ ಗೋಡೆ) ನಿರ್ಮಾಣ ಕಾಮಗಾರಿ ಮತ್ತು ತಾಲೂಕಿನ ಬಾವಚಿ ಗ್ರಾಮದ ಪ.ಜಾತಿ ಕಾಲೊನಿಯಲ್ಲಿ 5 ಲಕ್ಷ ರೂ.ವೆಚ್ಚದಲ್ಲಿ ಸ್ಮಶಾನ ನಿರ್ಮಾಣ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ಅನುದಾನ ನೀಡದೇ ಇರುವುದರಿಂದ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳಿಗೆ ಹಿನ್ನಡೆಯಾಗುತ್ತಿದೆ ಎಂದರು.
ಪಶು ಆಸ್ಪತ್ರೆ ವೈದ್ಯಾಧಿಕಾರಿ ಡಾ. ಎಂ.ಬಿ ಪಾಟೀಲ, ಹಿಂ.ವ.ಕ.ಇಲಾಖೆ ಅಧಿಕಾರಿ ಕಲ್ಪನಾ ಕಾಂಬಳೆ, ಜಿ.ಪಂ.ಎಇಇ ವಿಠ್ಠಲ ಭಜಂತ್ರಿ, ಎಇ ಎಸ್.ಎಸ್. ಹೊಸಮನಿ, ಸುರೇಶ ಮಲಾಜಿ, ಅನೀಲ ಬೊಮ್ಮನವರ, ಮುಖಂಡರಾದ ಅಣ್ಣಾಸಾಹೇಬ ಖೇಮಲಾಪುರೆ, ಮಹೇಶ ಕರಮಡಿ, ಸದಾನಂದ ಹಳಿಂಗಳಿ, ದತ್ತ ಜಾಧವ, ಸುರೇಶ ಮಾಳಿ, ಜಿಯಾವುಲ್ಲಾ ಮುಲ್ಲಾ, ಸದಾಶಿವ ನಾಯಿಕ, ನಾಗಪ್ಪ ಪುಂಡಿಪಲ್ಲೆ, ಮಹಾದೇವ ನಾಯಿಕ, ಸತ್ಯಪ್ಪ ಪೂಜೇರಿ, ಅವಗೌಡ ಪಾಟೀಲ, ಅಜ್ಜಪ್ಪ ಜಲಾಲಪುರೆ, ವಸಂತ ನಾಯಿಕ, ಹನುಮಂತ ಪಾಟೀಲ, ಮಹೇಶ್ ಕುಲಗೂಡೆ, ಗೋಪಾಲ ಕೊಚೆರಿ, ಭಾರತಿ ಲೋಹಾರ, ಪ್ರೇಮ ಸಾನೆ, ರಿತೇಶ ಅವಳೆ, ರಾಕೇಶ ಅವಳೆ ಸೇರಿ ಅನೇಕರು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 