ನೀರಾವರಿ ಯೋಜನೆಗಳಿಗೆ ಹೆಚ್ಚಿನ ಒತ್ತು ನೀಡಲಾಗಿದೆ : ಶಾಸಕ ಡಿ.ಎಮ್.ಐಹೊಳೆ
Greater emphasis has been given to irrigation projects: MLA D.M. Aihole
ರಾಯಬಾಗ 12 : ಮತಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದ್ದು, ನೀರಾವರಿ ಯೋಜನೆಗಳಿಗೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದು ಶಾಸಕ ಡಿ.ಎಮ್.ಐಹೊಳೆ ಹೇಳಿದರು.ಸೋಮವಾರ ಜಿ.ಪಂ.ಇಲಾಖೆಯಡಿ ಮಂಜೂರಾದ ಪಟ್ಟಣದ ಪಶು ಆಸ್ಪತ್ರೆಯ ಮೊದಲ ಅಂತಸ್ತಿನಲ್ಲಿ 10 ಲಕ್ಷ ರೂ. ವೆಚ್ಚದಲ್ಲಿ ದಾಸ್ತಾನು ಕೊಠಡಿ ನಿರ್ಮಾಣ ಹಾಗೂ 6 ಲಕ್ಷ ರೂ. ವೆಚ್ಚದಲ್ಲಿ ದೇವರಾಜ ಅರಸು ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯಕ್ಕೆ ಕಂಪೌಂಡ್ (ತಡೆ ಗೋಡೆ) ನಿರ್ಮಾಣ ಕಾಮಗಾರಿ ಮತ್ತು ತಾಲೂಕಿನ ಬಾವಚಿ ಗ್ರಾಮದ ಪ.ಜಾತಿ ಕಾಲೊನಿಯಲ್ಲಿ 5 ಲಕ್ಷ ರೂ.ವೆಚ್ಚದಲ್ಲಿ ಸ್ಮಶಾನ ನಿರ್ಮಾಣ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ಅನುದಾನ ನೀಡದೇ ಇರುವುದರಿಂದ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳಿಗೆ ಹಿನ್ನಡೆಯಾಗುತ್ತಿದೆ ಎಂದರು.
ಪಶು ಆಸ್ಪತ್ರೆ ವೈದ್ಯಾಧಿಕಾರಿ ಡಾ. ಎಂ.ಬಿ ಪಾಟೀಲ, ಹಿಂ.ವ.ಕ.ಇಲಾಖೆ ಅಧಿಕಾರಿ ಕಲ್ಪನಾ ಕಾಂಬಳೆ, ಜಿ.ಪಂ.ಎಇಇ ವಿಠ್ಠಲ ಭಜಂತ್ರಿ, ಎಇ ಎಸ್.ಎಸ್. ಹೊಸಮನಿ, ಸುರೇಶ ಮಲಾಜಿ, ಅನೀಲ ಬೊಮ್ಮನವರ, ಮುಖಂಡರಾದ ಅಣ್ಣಾಸಾಹೇಬ ಖೇಮಲಾಪುರೆ, ಮಹೇಶ ಕರಮಡಿ, ಸದಾನಂದ ಹಳಿಂಗಳಿ, ದತ್ತ ಜಾಧವ, ಸುರೇಶ ಮಾಳಿ, ಜಿಯಾವುಲ್ಲಾ ಮುಲ್ಲಾ, ಸದಾಶಿವ ನಾಯಿಕ, ನಾಗಪ್ಪ ಪುಂಡಿಪಲ್ಲೆ, ಮಹಾದೇವ ನಾಯಿಕ, ಸತ್ಯಪ್ಪ ಪೂಜೇರಿ, ಅವಗೌಡ ಪಾಟೀಲ, ಅಜ್ಜಪ್ಪ ಜಲಾಲಪುರೆ, ವಸಂತ ನಾಯಿಕ, ಹನುಮಂತ ಪಾಟೀಲ, ಮಹೇಶ್ ಕುಲಗೂಡೆ, ಗೋಪಾಲ ಕೊಚೆರಿ, ಭಾರತಿ ಲೋಹಾರ, ಪ್ರೇಮ ಸಾನೆ, ರಿತೇಶ ಅವಳೆ, ರಾಕೇಶ ಅವಳೆ ಸೇರಿ ಅನೇಕರು ಇದ್ದರು.
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು
ಚುಚ್ಚುಮದ್ದು ನೀಡಿ ಪತಿ ಹತ್ಯೆ ಮಾಡಿದ್ದ ಪತ್ನಿ, ಪ್ರೀಯಕರ: ಸಮಾಧಿಯಿಂದ ಮಾಜಿ ಸೈನಿಕನ ಶವ ಹೊರಕ್ಕೆ, ತನಿಖೆ ಚುರುಕು
ತಿಲಾರಿ ಘಾಟ್ ಅರಣ್ಯದಲ್ಲಿ ಬೆಳಗಾವಿ ಮಹಿಳೆಯ ಹತ್ಯೆ: ಮಹಾ ಪೊಲೀಸರಿಂದ 3 ಬಂಧನ, ಅನಾಥ ಶವ ಪ್ರಕರಣಕ್ಕೆ ರೋಚಕ ತಿರುವು
ಕುಟುಂಬ ಸಮೇತ ಯಲ್ಲಮ್ಮನ ದರ್ಶನ ಪಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಪೊಲೀಸರ ವಾಹನ ಮೇಲೆ ಮುಗುಚಿಬಿದ್ದ ಲಾರಿ: ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು ಓರ್ವನಿಗೆ ಗಾಯ 