ಅಂಗಾರಕ ಸಂಕಷ್ಟಿ ನಿಮಿತ್ಯ ಕೈಲಾಸ ವರಸಿದ್ದಿ ಗಣಪತಿ ದೇವಸ್ಥಾನದಲ್ಲಿ ಗಣಹೋಮ, ರಂಗ ಪೂಜೆ, ಪಲ್ಲಕ್ಕಿ ಸೇವೆ, ಸಾರ್ವಜನಿಕ ಅನ್ನಸಂತರೆ​‍್ಣ

ಅಂಗಾರಕ ಸಂಕಷ್ಟಿ ನಿಮಿತ್ಯ ಕೈಲಾಸ ವರಸಿದ್ದಿ ಗಣಪತಿ ದೇವಸ್ಥಾನದಲ್ಲಿ ಗಣಹೋಮ, ರಂಗ ಪೂಜೆ, ಪಲ್ಲಕ್ಕಿ ಸೇವೆ, ಸಾರ್ವಜನಿಕ ಅನ್ನಸಂತರೆ​‍್ಣ Ganahoma, Ranga Puja, Pallakshi Seva, Public Annasantara at Kailash Varasiddi Ganapati Temple on th

ಗದಗ 04 : ಹೊಸ ವರ್ಷದ ಮೊದಲ ಮಾಸದ ಮೊದಲ ವಾರ ಮಂಗಳವಾರ ದಿನಾಂಕ 06-01-2026 ರಂದು ಅಂಗಾರಕ ಸಂಕಷ್ಟಿ ಬಂದಿದ್ದರಿಂದ ಲೋಕಕಲ್ಯಾಣಾರ್ಥವಾಗಿ ಗದಗ ನಗರದ ಮಸಾರಿ ಭಾಗದಲ್ಲಿರುವ ಕೈಲಾಸ ವರಸಿದ್ಧಿ ಗಣಪತಿ ದೇವಸ್ಥಾನದಲ್ಲಿ ಬೆಳಿಗ್ಗೆಯಿಂದ ರಾತ್ರಿವರೆಗೆ ವಿಶೇಷ ಪೂಜಾ ಕೈಂಕರ್ಯಗಳನ್ನು ಹಮ್ಮಿಕೊಳ್ಳಲಾಗಿದೆ. 6-1-2026 ಮಂಗಳವಾರದಂದು ಕೈಲಾಸ ವರಸಿದ್ಧಿ ಗಣಪತಿ ದೇವಸ್ಥಾನದಲ್ಲಿ  ಬೆಳಿಗ್ಗೆ  7-00 ಗಂಟೆಗೆ ಫಲ ಪಂಚಾಮೃತ ಅಭಿಷೇಕ,  11-00 ಗಂಟೆಗೆ  ಗಣ ಹೋಮ, ಸಂಜೆ 7-30ಕ್ಕೆ  ಸಂಕಷ್ಟಿ ಪೂಜೆ,  ರಂಗ ಪೂಜೆ, ಪಲ್ಲಕ್ಕಿ ಸೇವೆಯ ನಂತರ ರಾತ್ರಿ 10-00 ಗಂಟೆಗೆ ಸಾರ್ವಜನಿಕ ಅನ್ನಸಂತರೆ​‍್ಣ ಜರುಗಲಿದೆ.ಅಂಗಾರಕ ಸಂಕಷ್ಟಿಯ ವಿಶೇಷ ಪೂಜಾ ಕಾರ್ಯಕ್ರಮಗಳಲ್ಲಿ ಭಕ್ತಾದಿಗಳು ಭಾಗವಹಿಸಿ ತನು, ಮನ, ಧನ ಸೇವೆಗೈದು  ಗಣಪತಿಯ ಕೃಪೆಗೆ ಪಾತ್ರರಾಗಬೇಕೆಂದು ಕೈಲಾಸ ವರಸಿದ್ದಿ ಗಣಪತಿ ದೇವಸ್ಥಾನದ ಟ್ರಸ್ಟ್‌ ಅಧ್ಯಕ್ಷರು, ಪದಾಧಿಕಾರಿಗಳು, ಸರ್ವ ಸದಸ್ಯರು ವಿನಂತಿಸಿದ್ದಾರೆ.