ಉಚಿತ ಆರೋಗ್ಯ ತಪಾಷಣೆ ಶಿಬಿರ

ಉಚಿತ ಆರೋಗ್ಯ ತಪಾಷಣೆ ಶಿಬಿರ Free health check-up camp

ಉಚಿತ ಆರೋಗ್ಯ ತಪಾಷಣೆ ಶಿಬಿರ     

 ಕೊಪ್ಪಳ-21                ಜಿಲ್ಲೆಯ ಕುಕನೂರ ತಾಲೂಕಿನ ಮಂಗಳೂರು ಗ್ರಾಮದ ಮಂಗಳೇಶ್ವರ ಕಲ್ಯಾಣ ಮಂಟಪದಲ್ಲಿ ಇಂದು ಅಗಸ್ತ್ಯ ಆಯುರ್ವೇದಿಕ್ ಮೆಡಿಕಲ್ ಕಾಲೇಜ್ ಮತ್ತು ಹಾಸ್ಪಿಟಲ್ ಕೊಪ್ಪಳ ವಿಶ್ವ ಹಿಂದೂ ಪರಿಷತ್ ಕೊಪ್ಪಳ ಜಿಲ್ಲೆ ಏಕಲ್ ವಿದ್ಯಾಲಯ ಮತ್ತು ಗ್ರಾಮ ಪಂಚಾಯತ ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಮಾಡಲಾಯಿತು.           ನಂತರ ಡಾ. ಲೋಕೇಶ ಮಾತನಾಡಿ ಅಗಸ್ತ್ಯ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನ ನುರಿತ ವೈದ್ಯರಿಂದ ಹಾಗೂ ವಿದ್ಯಾರ್ಥಿಗಳಿಂದ ಮಂಗಳೂರು ಗ್ರಾಮದ ಜನರಿಗೆ ಉಚಿತವಾಗಿ ಕಣ್ಣಿನ ಚಿಕಿತ್ಸೆ, ಮೊಣಕಾಲು ನೋವಿನ ಚಿಕಿತ್ಸೆಯನ್ನು ನಮ್ಮ ವೈದ್ಯರು ತಪಾಸಣೆ ಮಾಡಿ ಸರಿಯಾದ ಚಿಕಿತ್ಸೆ ನೀಡಿದರು. ಕಣ್ಣಿನ ಪೊರೆ ಹಾಗೂ ಅನ್ಯ ಶಸ್ತ್ರ ಚಿಕಿತ್ಸೆಗಳಿಗೆ ಯಶಸ್ವಿನಿ ಕಾರ್ಡ್‌ ಸೌಲಭ್ಯವಿದೆ ಎಂದು ಹೇಳಿದರು.           ಈ ಸಂದರ್ಭದಲ್ಲಿ  ಡಾ. ಸುಧಾಕರ, ಡಾ. ಸಂಗಮೇಶ್ ಹಿರೇಮಠ,ಡಾ. ಎಮ್ ಆರ್ ಕುಲಕರ್ಣಿ,ಡಾ. ಪಾರ್ವತಿ, ಡಾ. ಸೃಜನ, ಡಾ. ಪ್ರಜ್ವಲಾ, ಸೌಂದರ್ಯ ಹೆಚ್‌ಆರ್, ವಿದ್ಯಾರ್ಥಿಗಳು, ಸಿಬ್ಬಂದಿಯವರು, ಗ್ರಾಮಸ್ಥರು ಹಾಜರಿದ್ದರು.