ಸ್ವಸ್ಥ ಸಮಾಜಕ್ಕಾಗಿ ಪಂಚ ಪರಿವರ್ತನೆಗಳ ಪಾಲನೆ ಅಗತ್ಯ : ಶ್ರೀ ವೀರೇಂದ್ರ ಪಾಟೀಲ

ಸ್ವಸ್ಥ  ಸಮಾಜಕ್ಕಾಗಿ ಪಂಚ ಪರಿವರ್ತನೆಗಳ  ಪಾಲನೆ  ಅಗತ್ಯ : ಶ್ರೀ ವೀರೇಂದ್ರ ಪಾಟೀಲ For a healthy society it is necessary to observe five transitions: Mr. Virender Patil

ಗದಗ  06: ಕೆ.ಎಲ್‌. ಇ. ಸಂಸ್ಥೆಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ ಭೀಮರಾವ್ ಅಂಬೇಡ್ಕರ್ ರವರ 70 ನೇ ಮಹಾಪರಿನಿರ್ವಾಣದ ಪ್ರಯುಕ್ತ ವಿದ್ಯಾರ್ಥಿಗಳಿಗೆ ಪಂಚ ಪರಿವರ್ತನೆ ಗಳ ಕುರಿತು ’ವ್ಯಕ್ತಿತ್ವ ವಿಕಸನ ಕಾರ್ಯಕ್ರಮ’ವನ್ನು ಹಮ್ಮಿಕೊಳ್ಳಲಾಗಿತ್ತು.  ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ರಾಷ್ಟ್ರೋತ್ಥಾನ ಪರಿಷತ್ ಬೆಂಗಳೂರು. ಪ್ರಶಿಕ್ಷಣ ಭಾರತಿ ಗದಗ ವಿಭಾಗದ ಸಂಯೋಜಕರಾದ ಶ್ರೀ ವೀರೇಂದ್ರ ಪಾಟೀಲರು ಮಾತನಾಡಿ ವಿದ್ಯಾರ್ಥಿಗಳು ಇಂದಿನ ಆಧುನಿಕ ಕಾಲಘಟ್ಟದಲ್ಲಿ ದೇಶದ ಪ್ರಗತಿಗಾಗಿ ಅಂಬೇಡ್ಕರ್ ರವರ ವಿಚಾರಗಳನ್ನು ಅಳವಡಿಸಿಕೊಳ್ಳುವುದರ ಜೊತೆಗೆ ಸ್ವಸ್ಥ ಸಮಾಜದ ನಿರ್ಮಾಣಕ್ಕಾಗಿ ಪಂಚ ಪರಿವರ್ತನೆಗಳಾದ  ನಮ್ಮ ಕುಟುಂಬ, ಪರಿಸರ, ಪ್ರಾರ್ಥನೆ, ಭೋಜನ ಮತ್ತು ಸಮಾಜ ಇವುಗಳಲ್ಲಿ ಉತ್ತಮವಾದ ಪಾಲನೆಗಳ ಜೊತೆಗೆ ಸೈದ್ಧಾಂತಿಕ ದೃಷ್ಟಿಕೋನಗಳನ್ನು ಬೆಳೆಸಿಕೊಳ್ಳಬೇಕೆಂದು ಕರೆ ನೀಡಿದರು.  

ಕಾರ್ಯಕ್ರಮದ  ಅಧ್ಯಕ್ಷತೆ ವಹಿಸಿದ ಡಾ. ವಿಠ್ಠಲ್ ಕೋಳಿ ಅವರು ಸದೃಢ ಸಮಾಜದ ನಿರ್ಮಾಣಕ್ಕೆ ಡಾ. ಅಂಬೇಡ್ಕರ್ ಅವರ ವಿಚಾರಗಳು ಮತ್ತು ಆಲೋಚನೆಗಳು ಸದಾ ಎಲ್ಲರಿಗೂ ಸ್ಪೂರ್ತಿದಾಯಕವಾದವುಗಳು ಎಂದು ಅಭಿಪ್ರಾಯಪಟ್ಟರು.  ಕಾರ್ಯಕ್ರಮದಲ್ಲಿ ಸಮಾಜಶಾಸ್ತ್ರದ ವಿಭಾಗದ ಮುಖ್ಯಸ್ಥರಾದ ಪ್ರೊ. ರಾಜು ಯಲಬುರ್ಗಿ ಸರ್ವರನ್ನು ಸ್ವಾಗತಿಸಿ ಸಂಪನ್ಮೂಲ ವ್ಯಕ್ತಿಗಳ ಪರಿಚಯವನ್ನು ಮಾಡಿದರು. ಗ್ರಂಥಪಾಲಕಾರದ ಡಾ. ಗುಂಡಪ್ಪ ನಾಯಕ ವಂದಿಸಿದರು. ಕುಮಾರಿ. ಸವಿತಾ ಕಾಮತ್ ನಿರೂಪಿಸಿದರು.   ಉಪನ್ಯಾಸದಲ್ಲಿ ಮಹಾವಿದ್ಯಾಲಯದ ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳಿಗೆ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.