ಗಾಂಧಿ ಅಂಬೇಡ್ಕರ್ ಆದರ್ಶ ಅನುಸರಿಸಿ

ಗಾಂಧಿ ಅಂಬೇಡ್ಕರ್ ಆದರ್ಶ ಅನುಸರಿಸಿ  Follow the ideals of Gandhi and Ambedkar


ಹೂವಿನ ಹಡಗಲಿ: 14- ಗಾಂಧೀಜಿ ಅಂಬೇಡ್ಕರ್ ಆದರ್ಶ ಅನುಸರಿಸಿ ಎಂದು ಸಾಹಿತಿ ಇಸ್ಮಾಯಿಲ್ ಯಲಿಗಾರ್ ಹೇಳಿದರು.ಪಟ್ಟಣದ ತುಂಗಭದ್ರಾ ಪ್ರೌಢಶಾಲೆಯಲ್ಲಿ ಬುಧವಾರ ಡಾ ಬಿ ಆರ್ ಅಂಬೇಡ್ಕರ್ ಮತದಾರರ ಸಾಕ್ಷರತಾ ಸಂಘದಿಂದ ನಡೆದ ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆಮಾರ್ಗದರ್ಶನ ನೀಡಿ ಮಾತನಾಡಿದರು.ನೆಲ್ಸನ್ ಮಂಡೇಲಾ,ಸ್ವಾಮಿ ವಿವೇಕಾನಂದ, ಸುಭಾಷ್ ಚಂದ್ರ ಬೋಸ್ ನಾಯಕರ  ನಿಸ್ವಾರ್ಥ ಸೇವೆ ಸಮಾಜಕ್ಕೆ ದಾರೀದೀಪ ಎಂದು ಹೇಳಿದರು.ಮುಖ್ಯ ಗುರು ಸುರೇಶ ಅಂಗಡಿ ಚಿತ್ರಕಲಾ ಶಿಕ್ಷಕರಾದ ಎಸ್ ದ್ವಾರಕೀಶ್ ರೆಡ್ಡಿ, ಆನಂದ್ , ಜಿ ಗೀತಾ , ಪಿ ಎಂ ಪ್ರತಿಮಾ ಎನ್ ಲಂಬಾಣಿ ಗಿಡ್ಡಾನಾಯ್ಕ್‌ ಸಂಗಮೇಶ ಸುಂಕದ ಪ್ರಸಾದ್  ಇದ್ದರು.ಇಸ್ಮಾಯಿಲ್ ಯಲಿಗಾರ್ ರವರಿಗೆ ಲಡಾಯಿ ಪ್ರಕಾಶನದ 2026 ದಿನಚರಿ ಕ್ಯಾಲೆಂಡರ್ ನೀಡಿ ಗೌರವಿಸಲಾಯಿತು.ಶಾಲೆಯ ಎಸ್ಸೆಸ್ಸೆಲ್ಸಿ ಮಕ್ಕಳು ಇದರ ಸದುಪಯೋಗ ಪಡೆದುಕೊಂಡರು.