ಭಾರತದೆಲ್ಲೆಡೆ ಹಣಕಾಸು ಸಾಕ್ಷರತಾ ವಾರ ಕಾರ್ಯಕ್ರಮ

ಭಾರತದೆಲ್ಲೆಡೆ ಹಣಕಾಸು ಸಾಕ್ಷರತಾ ವಾರ ಕಾರ್ಯಕ್ರಮ Financial Literacy Week program across India


ಗದಗ  12:  ಭಾರತೀಯ ರಿಸರ್ವ್‌ ಬ್ಯಾಂಕ್ ವತಿಯಿಂದ ದೇಶವ್ಯಾಪಿಯಾಗಿ  ಫೆಬ್ರವರಿ  9 ರಿಂದ  ಫೆಬ್ರವರಿ 13 ರವರೆಗೆ ಹಣಕಾಸು ಸಾಕ್ಷರತಾ ವಾರ  (ಈಐಘ) ಕಾರ್ಯಕ್ರಮವನ್ನು ಆಚರಿಸಲಾಗುತ್ತಿದೆ. ಗದಗ ಜಿಲ್ಲೆಯ  ಜಿಲ್ಲಾಧಿಕಾರಿ   ಸಿ.ಎನ್‌. ಶ್ರೀಧರ ಅವರು  ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ  ಈ ಕಾರ್ಯಕ್ರಮವನ್ನು ಉದ್ಘಾಟಿಸಿದರು. 

ಈ ಕಾರ್ಯಕ್ರಮದಲ್ಲಿ  ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಸಿ.ಆರ್‌. ಮುಂಡರಗಿ, ಲೀಡ್  ಬ್ಯಾಂಕ್ ಡಿಸ್ಟ್ರಿಕ್ಟ್‌ ಮ್ಯಾನೇಜರ್ ಸಂತೋಷ್ ಎಂ.ವಿ ಹಾಗೂ ವಿವಿಧ ಬ್ಯಾಂಕುಗಳ ಅಧಿಕಾರಿಗಳು ಉಪಸ್ಥಿತರಿದ್ದರು.  ಈ ಸಂದರ್ಭದಲ್ಲಿ ಜಾಗೃತಿ ಪೋಸ್ಟರ್ಗಳನ್ನು ಬಿಡುಗಡೆ ಮಾಡಲಾಯಿತು. 

ಹಣಕಾಸು ಸಾಕ್ಷರತಾ ವಾರದ ಅವಧಿಯಲ್ಲಿ ಭಾಗವಹಿಸುವವರಿಗೆ ಏಙಅ, ಅಏಙಅ, ಮನಿ ಮ್ಯೂಲ್ ಖಾತೆಗಳು, ಸೈಬರ್ ಮೋಸಗಳು ಹಾಗೂ ಸುರಕ್ಷಿತ ಬ್ಯಾಂಕಿಂಗ್ ಕ್ರಮಗಳ ಕುರಿತು ಮಾರ್ಗದರ್ಶನ ನೀಡಲಾಗುತ್ತದೆ. 


Bank Officials Awareness Posters Cyber Frauds Safe Banking Practices