ಕನ್ನೊಳ್ಳಿ ್ಳ ಗ್ರಾಮದ ರೈತರೊಬ್ಬರ ಹೊಲದಲ್ಲಿ ವಿದ್ಯುತ್ ಟಿಸಿ ಸುಟ್ಟಿರುವ ರೈತರು ಪ್ರತಿಭಟನೆ
Farmers protest after electric TC was burnt in a farmer's field in Kannolli village
ಜಮಖಂಡಿ 21: ತಾಲ್ಲೂಕಿನ ಕನ್ನೊಳ್ಳಿ ಗ್ರಾಮದ ರೈತರೊಬ್ಬರ ಹೊಲದಲ್ಲಿ ವಿದ್ಯುತ್ ಟಿಸಿ ಸುಟ್ಟಿರುವ ಹಿನ್ನೆಲೆಯಲ್ಲಿ ಹೊಸ ಟಿಸಿ ಅಳವಡಿಸಿದೆ ಇರುವ ಕಾರಣ ಕೆ,ಇ,ಬಿ ಕಚೇರಿಗೆ ಬೀಗವನ್ನು ಜಡಿದ್ದು ರೈತರು ಪ್ರತಿಭಟನೆಯನ್ನು ನಡೆಸಿದರು.
ನಗರದ ಕೆಇಬಿ ವಿದ್ಯುತ್ ಇಲಾಖೆಯ ಮುಖ್ಯ ದ್ವಾರಬಾಗಿಲಿಗೆ ಬೀಗವನ್ನು ಜಡಿದ ಪ್ರತಿಭಟನೆಯನ್ನು ನಡೆಸಿದ ರೈತರು, ಕನ್ನೊಳ್ಳಿ ಗ್ರಾಮದ ರೈತ ಸುಭಾಸ ಶಿಂಧೆ ಅವರ ಹೊಲದಲ್ಲಿ ಇರುವ ವಿದ್ಯುತ್ ಟಿಸಿ ಸುಟ್ಟು ಒಂದು ವಾರ ಗತ್ತಿಸಿದ್ದರು ಸಹ ಜಮಖಂಡಿ ಕೆಇಬಿ ಇಲಾಖೆಯ ಅಧಿಕಾರಿಗಳು ಹೊಸ ಟಿಸಿ ಅಳವಡಿಸದೆ ಹಾರಿಕೆ ಉತ್ತರ ನೀಡುತ್ತಾ ಇದ್ದಾರೆ. ಇಲ್ಲಿನ ಕೆಲವಂದಿಷ್ಟು ಅಧಿಕಾರಿಗಳು ಹಣವನ್ನು ಯಾರು ಕೊಡುತ್ತಾರೆ ಅವರ ಕೆಲಸವನ್ನು ಬೇಗನೆ ಮಾಡುತ್ತಾರೆ ಹೀಗಾಗಿ ಲಂಚದ ಬೇಡಿಕೆಯನ್ನು ಇಡುತ್ತಾರೆ ಎಂದು ಆರೋಪಿಸಿದರು.
ಇಲ್ಲಿನ ಅಧಿಕಾರಿಗಳು ಕನ್ನೋಳ್ಳಿ ಗ್ರಾಮದ ಹೊಲದಲ್ಲಿ ಹೊಸ ಟಿಸಿಯನ್ನು ಅಳವಡಿಸಿದೆ ಇದ್ದರೆ. ಕೆಇಬಿ ಇಲಾಖೆಯಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಸಮೇತ ಬೀಗ್ ಜಡಿದ್ದು ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆಯನ್ನು ನೀಡಿದರು.
ಇದೇ ಸಂದರ್ಭದಲ್ಲಿ ರೈತ ಮುಖಂಡರಾದ ಮುತ್ತಪ್ಪ ಕೋಮಾರ, ಈರ್ಪ ಹಂಚಿನಾಳ, ಶ್ರೀಶೈಲ ಭೂಮಾರ, ಹನುಮಂತ ಮಗದುಮ, ಸುಭಾಸ ಶಿಂಧೆ, ರಾಜು ನಧಾಪ, ಧರೇಪ್ಪ ದಾನಗೌಡ, ಕರೇಪ್ಪ ಜೀರಗಾಳ, ಕಲ್ಲಪ್ಪ ಬಿರಾದಾರ, ಬಸವರಾಜ ನ್ಯಾಮಗೌಡ, ಯಲ್ಲಪ್ಪ ಬಿರಾದರ, ಸಿದ್ದಪ್ಪ ಬನಜ್ಜನ್ನವರ, ಗುರುನಾಥ ಕೋರಿ ಸೇರಿದಂತೆ ಅನೇಕ ರೈತರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.
]
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 