ಕನ್ನೊಳ್ಳಿ ್ಳ ಗ್ರಾಮದ ರೈತರೊಬ್ಬರ ಹೊಲದಲ್ಲಿ ವಿದ್ಯುತ್ ಟಿಸಿ ಸುಟ್ಟಿರುವ ರೈತರು ಪ್ರತಿಭಟನೆ
Farmers protest after electric TC was burnt in a farmer's field in Kannolli village
ಜಮಖಂಡಿ 21: ತಾಲ್ಲೂಕಿನ ಕನ್ನೊಳ್ಳಿ ಗ್ರಾಮದ ರೈತರೊಬ್ಬರ ಹೊಲದಲ್ಲಿ ವಿದ್ಯುತ್ ಟಿಸಿ ಸುಟ್ಟಿರುವ ಹಿನ್ನೆಲೆಯಲ್ಲಿ ಹೊಸ ಟಿಸಿ ಅಳವಡಿಸಿದೆ ಇರುವ ಕಾರಣ ಕೆ,ಇ,ಬಿ ಕಚೇರಿಗೆ ಬೀಗವನ್ನು ಜಡಿದ್ದು ರೈತರು ಪ್ರತಿಭಟನೆಯನ್ನು ನಡೆಸಿದರು.
ನಗರದ ಕೆಇಬಿ ವಿದ್ಯುತ್ ಇಲಾಖೆಯ ಮುಖ್ಯ ದ್ವಾರಬಾಗಿಲಿಗೆ ಬೀಗವನ್ನು ಜಡಿದ ಪ್ರತಿಭಟನೆಯನ್ನು ನಡೆಸಿದ ರೈತರು, ಕನ್ನೊಳ್ಳಿ ಗ್ರಾಮದ ರೈತ ಸುಭಾಸ ಶಿಂಧೆ ಅವರ ಹೊಲದಲ್ಲಿ ಇರುವ ವಿದ್ಯುತ್ ಟಿಸಿ ಸುಟ್ಟು ಒಂದು ವಾರ ಗತ್ತಿಸಿದ್ದರು ಸಹ ಜಮಖಂಡಿ ಕೆಇಬಿ ಇಲಾಖೆಯ ಅಧಿಕಾರಿಗಳು ಹೊಸ ಟಿಸಿ ಅಳವಡಿಸದೆ ಹಾರಿಕೆ ಉತ್ತರ ನೀಡುತ್ತಾ ಇದ್ದಾರೆ. ಇಲ್ಲಿನ ಕೆಲವಂದಿಷ್ಟು ಅಧಿಕಾರಿಗಳು ಹಣವನ್ನು ಯಾರು ಕೊಡುತ್ತಾರೆ ಅವರ ಕೆಲಸವನ್ನು ಬೇಗನೆ ಮಾಡುತ್ತಾರೆ ಹೀಗಾಗಿ ಲಂಚದ ಬೇಡಿಕೆಯನ್ನು ಇಡುತ್ತಾರೆ ಎಂದು ಆರೋಪಿಸಿದರು.
ಇಲ್ಲಿನ ಅಧಿಕಾರಿಗಳು ಕನ್ನೋಳ್ಳಿ ಗ್ರಾಮದ ಹೊಲದಲ್ಲಿ ಹೊಸ ಟಿಸಿಯನ್ನು ಅಳವಡಿಸಿದೆ ಇದ್ದರೆ. ಕೆಇಬಿ ಇಲಾಖೆಯಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಸಮೇತ ಬೀಗ್ ಜಡಿದ್ದು ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆಯನ್ನು ನೀಡಿದರು.
ಇದೇ ಸಂದರ್ಭದಲ್ಲಿ ರೈತ ಮುಖಂಡರಾದ ಮುತ್ತಪ್ಪ ಕೋಮಾರ, ಈರ್ಪ ಹಂಚಿನಾಳ, ಶ್ರೀಶೈಲ ಭೂಮಾರ, ಹನುಮಂತ ಮಗದುಮ, ಸುಭಾಸ ಶಿಂಧೆ, ರಾಜು ನಧಾಪ, ಧರೇಪ್ಪ ದಾನಗೌಡ, ಕರೇಪ್ಪ ಜೀರಗಾಳ, ಕಲ್ಲಪ್ಪ ಬಿರಾದಾರ, ಬಸವರಾಜ ನ್ಯಾಮಗೌಡ, ಯಲ್ಲಪ್ಪ ಬಿರಾದರ, ಸಿದ್ದಪ್ಪ ಬನಜ್ಜನ್ನವರ, ಗುರುನಾಥ ಕೋರಿ ಸೇರಿದಂತೆ ಅನೇಕ ರೈತರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.
]
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 