ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ

ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ  Farewell ceremony for SSLC students

ಲೋಕದರ್ಶನ ವರದಿ  

ಮುಂಡಗೋಡ  07: ಪಟ್ಟಣದ ಆದಿ ಜಾಂಬವ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ 2025ಹಿ26್ಫೂ ಸಾಲಿನ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭವನ್ನು ಆಯೋಜಿಸಲಾಯಿತು. ಕಾರ್ಯಕ್ರಮವನ್ನು ಸರಸ್ವತಿ ಪೂಜೆಯೊಂದಿಗೆ ಆರಂಭಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷರಾದ ಎಸ್‌. ಫಕೀರ​‍್ಪ ಅವರು ಮಾತನಾಡಿ, ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ಸಮಾಜದಲ್ಲಿ ಒಳ್ಳೆಯ ವ್ಯಕ್ತಿಗಳಾಗಿ ಬೆಳೆಬೇಕು ಹಾಗೂ ಶಿಕ್ಷಕರಿಗೆ ಗೌರವ ನೀಡಬೇಕು ಎಂದು ಹೇಳಿದರು.

ನಾಗೇಂದ್ರ ಪಿ. ಅವರು ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ತಂದು ಶಾಲೆಗೆ ಕೀರ್ತಿ ತಂದುಕೊಡಬೇಕು ಎಂದು ತಿಳಿಸಿದರು. ಮುಖ್ಯ ಶಿಕ್ಷಕರಾದ ಎಸ್‌.ಡಿ. ಮುಡೆಣ್ಣವರ ಅವರು ವಿದ್ಯಾರ್ಥಿಗಳ ಉತ್ತಮ ಫಲಿತಾಂಶಕ್ಕಾಗಿ ವಿಶೇಷ ತರಗತಿಗಳನ್ನು ನಡೆಸಲಾಗುತ್ತಿದೆ ಎಂದರು. ಶಾಲೆಯ ಮುಖ್ಯ ಶಿಕ್ಷಕರಾದ ಎಸ್‌.ಡಿ. ಮುಡೆಣ್ಣವರ ಪ್ರಸ್ತಾವಿಕವಾಗಿ ಮಾತನಾಡಿ, ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ವಿಶೇಷ ತರಗತಿಗಳು ಹಾಗೂ ವಿವಿಧ ಯೋಜನೆಗಳ ಮೂಲಕ ಉತ್ತಮ ಫಲಿತಾಂಶ ತರಲು ಶಿಕ್ಷಕರು ಶ್ರಮಿಸುತ್ತಿದ್ದಾರೆ.

ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ರಾತ್ರಿ ವೇಳೆಯಲ್ಲೂ ಶಾಲೆಯಲ್ಲಿ ಪಾಠ ಹೇಳುವ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಗೋಪಾಲ ನಡಕಿನಮನಿ, ಹನಮಂತ ಕಟ್ಟಿಮನಿ, ಸಂತೋಷ ಕಟ್ಟಿಮನಿ, ಮಂಜುನಾಥ ಎನ್‌.ಎಚ್‌., ಪರಶುರಾಮ ಮಾದರ, ಆರಿ​‍್ಬ. ಚವ್ಹಾಣ, ಎಂ.ಎಸ್‌. ಪಾಟೀಲ, ಎಸ್‌.ಸಿ. ಪಾಟೀಲ, ಎಸ್‌.ಎಸ್‌. ಭದ್ರಶೆಟ್ಟಿ, ಪಿ.ಸಿ. ಐನಪುರ, ಎಂ.ಕೆ. ಕೊಂಡೋಜಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

2025ಹಿ26್ಫೂ ಸಾಲಿನ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಲ್ಲಿ ಮೋಹನ ಬಡಿಗ ಹಾಗೂ ಸುಕನ್ಯಾ ಜಂಬಗಿಮಠ ಅವರನ್ನು ಆದರ್ಶ ವಿದ್ಯಾರ್ಥಿಗಳಾಗಿ ಆಯ್ಕೆ ಮಾಡಿ ಪ್ರಮಾಣಪತ್ರ ನೀಡಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ 10ನೇ ತರಗತಿ ವರ್ಗ ಶಿಕ್ಷಕರಾದ ಆರ್‌. ಚವ್ಹಾಣ, 9ನೇ ತರಗತಿ ಶಿಕ್ಷಕರಾದ ಆರ್‌.ಎಸ್‌. ಅಕ್ಕಿವಳ್ಳಿ, ಹಾಗೂ 8ನೇ ತರಗತಿ ಶಿಕ್ಷಕರಾದ ಎಂ.ಎಸ್‌. ಪಾಟೀಲ ಅವರನ್ನು ಸನ್ಮಾನಿಸಲಾಯಿತು.ಕಾರ್ಯಕ್ರಮವನ್ನು ಸುಕನ್ಯಾ ನಿರೂಪಿಸಿದ್ದು, ವಂದನೆಯನ್ನು ಅಶ್ವಿನಿ ದೇವರಮನಿ ಸಲ್ಲಿಸಿದರು.