ಪುರಸಭೆ ಬಡ್ತಿ ಅಧಿಕಾರಿ ಬೀಳ್ಕೊಡುಗೆ ಹಾಗೂ ಸ್ವಾಗತ ಸಮಾರಂಭ
Farewell and welcome ceremony for promoted municipal officer
ಹೂವಿನಹಡಗಲಿ 19: ಪಟ್ಟಣದ ಪುರಸಭೆ ಯಲ್ಲಿ ಪಟ್ಟಣಕ್ಕೆ ಆಗಮಿಸಿದ ನೂತನ ಅಧಿಕಾರಿಗಳ ಸ್ವಾಗತ ಹಾಗೂ ಪದೋನ್ನತಿಯೊಂದಿಗೆ ಇಲ್ಲಿಂದ ವರ್ಗಾವಣೆಗೊಂಡ ಇಮಾಮ್ ಸಾಬ್ ಅವರಿಗೆ ಪುರಸಭೆ ಇಲಾಖೆ ಸಿಬ್ಬಂದಿ ಯಿಂದ ಹೃದಯಸ್ಪರ್ಶಿ ಸಮಾರಂಭ ಸೋಮವಾರ ನಡೆಯಿತು. ಕಳೆದ 20 ವರ್ಷದಿಂದ ಪುರಸಭೆ ಯಲ್ಲಿ ವ್ಯವಸ್ಥಾಪಕರಾಗಿ, ಮುಖ್ಯಾಧಿಕಾರಿ ಯಾಗಿ ಸುದೀರ್ಘ ಸೇವೆ ಸಲ್ಲಿಸಿದ ಇಮಾಮ್ ಸಾಬ್ ಪೌರಾಡಳಿತ ಅವರು ಪದೋನ್ನತಿಯೊಂದಿಗೆ ವರ್ಗಾವಣೆಗೊಂಡಿದ್ದು, ಇದೇ ವೇಳೆ ನೂತನ ಮುಖ್ಯಾಧಿಕಾರಿ ಜಿ.ಹನುಮಂತಪ್ಪ ಆಗಮಿಸಿದ
ಅವರನ್ನು ಸನ್ಮಾನಿಸಲಾಯಿತು.ಪುರಸಭೆ ಆಡಳಿತಾಧಿಕಾರಿ ಸುರೇಶ ಕುಮಾರ , ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅದ್ಯಕ್ಷ ಎ.ಕೊಟ್ರಗೌಡ, ಪತ್ರಕರ್ತ ಎಸ್. ನಿಂಗರಾಜ ಮಾತನಾಡಿ ಇಮಾಮ್ ಸಾಬ್ , ದಕ್ಷತೆ, ಪ್ರಾಣಿಕತೆ ಮತ್ತು ನಿಷ್ಠೆಯಿಂದ ಕೆಲಸ ಮಾಡಿದ ಪರಿಣಾಮವಾಗಿ ಅವರು ಇಂದು ಪದೋನ್ನತಿಯೊಂದಿಗೆ ವರ್ಗಾವಣೆಗೊಂಡಿರುವುದು ಸಂತಸದ ಸಂಗತಿ ಎಂದರು. ಪದೋನ್ನತಿಯೊಂದಿಗೆ ವರ್ಗಾವಣೆ ಗೊಂಡ ಇಮಾಮ್ ಸಾಬ್ ಸನ್ಮಾನ ಸ್ವೀಕರಿಸಿ ಮಾತನಾಡಿ ಜನತೆಯ ಪ್ರೀತಿ, ವಿಶ್ವಾಸ ತೀರಿಸಲಾಗದ ಋಣ ಎಂದ ಅವರು ಮೂಲಸೌಕರ್ಯ ಕಲ್ಪಿಸಲು ನೀಡಿದ ಸಹಕಾರ ಮರೆಯಲಾಗದು ಎಂದರು. ಇದೇ ವೇಳೆ ಪುರಸಭೆ ಮಾಜಿ ಅದ್ಯಕ್ಷೆ ಮತ್ತು ಸದಸ್ಯರು. ಸಿಬ್ಬಂದಿ ವರ್ಗದವರು ಹೃದಯ ಸ್ಪರ್ಶಿ ಸಮಾರಂಭ ಜರುಗಿತು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 