ಸಂಗೀತ ನುಡಿದರೆ ಮೇಘರಾಜಾನು ಕೂಡ ಧರೆಗಿಳಿದು ಬರುತ್ತಾನೆ: ಗುಡದೂರ
Even Megharaja comes down to earth when music is played: Guddoora
ಸಂಗೀತ ನುಡಿದರೆ ಮೇಘರಾಜಾನು ಕೂಡ ಧರೆಗಿಳಿದು ಬರುತ್ತಾನೆ: ಗುಡದೂರ
ಭಾಗ್ಯನಗರ 04: ಸಂಗೀತ ನುಡಿದರೆ ಮೇಘರಾಜಾನು ಕೂಡ ಧರೆಗಿಳಿದು ಬರುತ್ತಾನೆ, ಸಂಗೀತ ಎಲ್ಲರಲ್ಲು ಇದೆ ಮಗುವಿನ ಅಳುವಿನೊಂದಿಗೆ ಶುರುವಾದ ಸಂಗೀತ ನಮ್ಮ ಕೊನೆಯುಸಿರು ಇರುವವವರೆಗೂ ಸಂಗೀತದ ಜೊತೆ ಎಲ್ಲರೂ ಬದುಕುತ್ತಾರೆ ಎಂದು ಉಪನ್ಯಾಸಕ ಎಸ್ ಎಸ್ ಗುಡದೂರರವರು ಹೇಳಿದರು.
ಅವರು ಗುರುಕುಲ ಸಂಗೀತ ಕಲಾ ಸಂಸ್ಥೆಯ ವತಿಯಿಂದ ಆಯೋಜಿಸಿದ ತಾವರೆಗೆರೆಯ ಶಿಕ್ಷಕರ ತರಬೇತಿ ಕೇಂದ್ರದಲ್ಲಿ ಗುರು ಗಾನ ಲಹರಿ ಎಂಬ ಕಾರ್ಯಕ್ರಮವನ. ಉದ್ಘಾಟಿಸಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಆರ್ ಜಿ ಅಂಬಿಗೇರ ಮಾತನಾಡಿ ಸಂಗೀತದಿಂದ ಮನಸ್ಸಿಗೆ ತಟ್ಟುವಂತಿರಬೇಕು ಕೇಳುವ ಮನಸ್ಸುಗಳು ಅದರ ಆಳವನ್ನು ಅರಿತಾಗ ಮಾತ್ರ ಅದರ ಮಹತ್ವ ಅದರ ರಸಾನುಭವವಾಗುತ್ತದೆ ಎಂದರು.
ಮುಖ್ಯ ಅತಿಥಿಗಳಾಗಿ ಉಪನ್ಯಾಸಕರಾದ ಶ್ಯಾಮಣ್ಣ ಹಾಗೂ ಪ್ರಕಾಶ ಜಿ, ಹಾಗೂ ಸಂಗೀತ ಶಿಕ್ಷಕ ಮಾರುತಿ ದೊಡ್ಡಮನಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಲತಾ ಮೇಟಿಯವರಿಂದ ಜನಪದ ಸಂಗೀತ, ನಾಗರಾಜ ಶ್ಯಾವಿಯವರಿಂದ ಬಾನ್ಸೂರಿ ವಾದನ, ವಿಜಯಲಕ್ಷ್ಮೀಯವರಿಂದ ಭಾವಗೀತೆಗಳು, ಅಲ್ಲಾಭಕ್ಷಿ ಭೀಮನೂರರಿಂದ ದಾಸವಾಣಿ, ಮಾರುತಿ ದೊಡ್ಡಮನಿಯವರಿಂದ ತಬಲಾ ಸೋಲೋ ಕಾರ್ಯಕ್ರಮಗಳು ವಿದ್ಯಾರ್ಥಿಗಳ ಮನಸೊರೆಗೊಂಡವು. ವಾದ್ಯವೃಂದದ ಕೀಬೋರ್ಡನಲ್ಲಿ ರಾಮಚಂದ್ರ್ಪ ಉಪ್ಪಾರ, ಕೊಳಲಿನಲ್ಲಿ ನಾಗರಾಜ ಶ್ಯಾವಿ, ತಬಲದಲ್ಲಿ ಮಾರುತಿ ದೊಡ್ಡಮನಿ, ರಿಧಮ್ ಪ್ಯಾಡನಲ್ಲಿ ಸಂಜನ್ ಬೆಲ್ಲದ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸುಜಾತ ಹಿರೇಮಠರವರು ನಿರೂಪಿಸಿ ವಂದಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 