ಸೈಕಲ್ ಜಾಥಾ ಮೂಲಕ ಪರಿಸರ ಜಾಗೃತಿ: ಗೋನಾಳ ರಿಂದ ಮೆಚ್ಚುಗೆ
Environmental awareness through cycle march: Appreciation from Gonal
ಸೈಕಲ್ ಜಾಥಾ ಮೂಲಕ ಪರಿಸರ ಜಾಗೃತಿ: ಗೋನಾಳ ರಿಂದ ಮೆಚ್ಚುಗೆ
ಕೊಪ್ಪಳ 18: ಪರಿಸರ ಉಳಿಸಿ ಬೆಳೆಸಿ ಎಂಬ ಸೈಕಲ್ ಜಾಥಾ ಮೂಲಕ ರಾಜ್ಯದ್ಯಂತ ಪ್ರವಾಸ ಕೈಗೊಂಡಿರುವ ತುಮಕೂರಿನ ಯುವಕ ಮಾಲಿಂಗ ರವರು ಹಮ್ಮಿಕೊಂಡಿರುವ ಸೈಕಲ್ ಜಾಥಾ ರವಿವಾರದಂದು ಕೊಪ್ಪಳಕ್ಕೆ ಆಗಮಿಸಿದ ಸಂದರ್ಭದಲ್ಲಿ ಸಿರಿಗನ್ನಡ ವೇದಿಕೆಯ ರಾಜ್ಯ ಅಧ್ಯಕ್ಷರಾದ ಕೊಪ್ಪಳದ ಹಿರಿಯ ಸಾಹಿತಿ ಜಿಎಸ್ ಗೋನಾಳ ರವರು ಆತ್ಮೀಯವಾಗಿ ಸ್ವಾಗತಿಸಿ ಅಭಿನಂದಿಸಿ ಜನರಲ್ಲಿ ಪರಿಸರದ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಈ ಸೈಕಲ್ ಜಾಥಾ ಯುವಕ ಮಾಲಿಂಗ ರವರ ಕಾರ್ಯಕ್ಕೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದಿಸಿ ಶುಭ ಕೋರಿ ಕೊಪ್ಪಳದಿಂದ ಬೀಳ್ಕೊಡಲಾಯಿತು.ಪರಿಸರ ಉಳಿಸಿ ನಾಡು ಬೆಳೆಸಿ, ಎಲ್ಲಾ ರೋಗಗಳ ಮೂಲ ಆಸ್ವಚ್ಚತೆಯಾಗಿದ್ದು ಪ್ರತಿಯೊಬ್ಬರು ತಮ್ಮ ತಮ್ಮ ಮನೆಯ ಮುಂದಿನ ಪರಿಸರವನ್ನು ಸ್ವಚ್ಛವಾಗಿಡಬೇಕು ಮನೆಗೊಂದು ಮರ ಬೆಳೆಸಿ ನಗರವನ್ನು ನಂದನವನ ವನ್ನಾಗಿ ಮಾಡಿ ಎಂದು ಕೊಪ್ಪಳ ಜಿಲ್ಲೆಯ ಜನತೆಗೆ ಜಿಎಸ್ ಗೋನಾಳ್ ಮನವಿ ಮಾಡಿಕೊಂಡರು, ಇಂತಹ ಜಾಥಾ ಕೈಗೊಂಡಿರುವ ತುಮಕೂರು ಯುವಕನ ಕಾರ್ಯ ಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಅವರು ಇದೆ ವೇಳೆ ಸಲಹೆ ನೀಡಿದರು, ಈ ಸಂದರ್ಭದಲ್ಲಿ ಕಾರ್ಯಕರ್ತರು ಮತ್ತು ಅಭಿಮಾನಿಗಳು ಪಾಲ್ಗೊಂಡಿದ್ದರು
ಈಜಲು ಹೊಂಡಕ್ಕೆ ಹೋದ ಇಬ್ಬರು ಅಪ್ರಾಪ್ತ ಬಾಲಕರು ನೀರುಪಾಲು : ಬೆಳಗಾವಿಯಲ್ಲಿ ಘೋರ ಘಟನೆ
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್ 