ಪರಿಸರ ಸಂರಕ್ಷಣೆಗೆ ಒತ್ತು ಚೇತನಾ ಕಾಲೋನಿಯಲ್ಲಿ ಸಸಿ ನೆಡುವ ಕಾರ್ಯಕ್ರಮ

ಪರಿಸರ ಸಂರಕ್ಷಣೆಗೆ ಒತ್ತು ಚೇತನಾ ಕಾಲೋನಿಯಲ್ಲಿ ಸಸಿ ನೆಡುವ ಕಾರ್ಯಕ್ರಮ Emphasis on environmental conservation: Tree-planting program in Chetana Colony

ಸವದತ್ತಿ   02: ನಗರದ ಚೇತನಾ ಕಾಲೋನಿಯಲ್ಲಿ ಬುಧವಾರದಂದು ಜೈಂಟ್ಸ್‌ ಗ್ರೂಪ್ ಆಫ್ ಸವದತ್ತಿ ಮತ್ತು ವೃಕ್ಷಕ್ರಾಂತಿ ಸಂಸ್ಥೆಯ ಸಹಯೋಗದಲ್ಲಿ ಸಸಿ ನೆಡುವ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.ಪರಿಸರ ಸಮತೋಲನವನ್ನು ಕಾಪಾಡುವ ಉದ್ದೇಶದಿಂದ ಹಮ್ಮಿಕೊಂಡಿದ್ದ ಈ ಕಾರ್ಯಕ್ರಮದಲ್ಲಿ, ಪಂಚವಟಿಯ ಸಂಕೇತಗಳಾದ ಬಿಲ್ವಪತ್ರಿ, ಬನ್ನಿ, ಅರಳಿ, ಅಶ್ವತ್ಥ ಮತ್ತು ಅತ್ತಿ ಸಸಿಗಳ ಜೊತೆಗೆ ಬೇವಿನ ಸಸಿಗಳನ್ನು ನೆಡಲಾಯಿತು.ಕಾರ್ಯಕ್ರಮದಲ್ಲಿ ನಗರಸಭೆಯ ಪೌರಾಯುಕ್ತ ಸಂಗನಬಸಯ್ಯ ಗದಗಿನಮಠ, ಮಾತನಾಡಿದ ಅವರು ಗಿಡ-ಮರಗಳನ್ನು ನೆಟ್ಟು ಪೋಷಿಸುವುದು ಇಂದಿನ ತುರ್ತು ಅಗತ್ಯವಾಗಿದೆ. 

 ಮರಗಳ ಸಂಖ್ಯೆ ಹೆಚ್ಚಾದಷ್ಟೂ ಮಳೆಯ ಪ್ರಮಾಣ ವೃದ್ಧಿಸುತ್ತದೆ ಮತ್ತು ಬೇಸಿಗೆಯಲ್ಲಿ ಇವುಗಳು ನಮಗೆ ನೆರಳು ನೀಡುತ್ತವೆ. ಪರಿಸರ ಕಾಳಜಿಯ ಇಂತಹ ಮಹತ್ವದ ಕಾರ್ಯಕ್ಕೆ ನಗರಸಭೆಯು ಸಂಪೂರ್ಣ ಬೆಂಬಲ ನೀಡಲಿದೆ. ನೆಟ್ಟಿರುವ ಈ ಸಸಿಗಳಿಗೆ ಅಗತ್ಯವಿರುವ ನೀರಿನ ವ್ಯವಸ್ಥೆಯನ್ನು ನಗರಸಭೆ ವತಿಯಿಂದಲೇ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.ಈ ಸಂದರ್ಭದಲ್ಲಿ  ಬಿ.ಎಚ್‌.ಆನಿ, ಶಂಕರ ಇಜಂತಕರ, ಜಾವೇದ್ ಪಟಾದ, ರಾಜಶೇಖರ ನಿಡವಣಿ, ಎಮ್‌. ಎಮ್‌. ಯಲಿಗಾರ, ಉಮೇಶ್ ಸರದಾರ, ಗೀರೀಶ್ ಮುನವಳ್ಳಿ, ಉಮೇಶ್ ಗೌಡರ ಸೇರಿದಂತೆ ಅನೇಕ ಗಣ್ಯರು, ಸಂಸ್ಥೆಯ ಸದಸ್ಯರು ಹಾಗೂ ಸ್ಥಳೀಯ ನಿವಾಸಿಗಳು ಉಪಸ್ಥಿತರಿದ್ದು, ಸಸಿ ನೆಡುವ ಅಭಿಯಾನಕ್ಕೆ ಕೈಜೋಡಿಸಿದರು.