ದಲೈ ಲಾಮಾ ದರ್ಶನ ಪಡೆದ ಶಿಕ್ಷಣ ಸಚಿವ ಮಧು ಬಂಗಾರ​‍್ಪ

ದಲೈ ಲಾಮಾ ದರ್ಶನ ಪಡೆದ ಶಿಕ್ಷಣ ಸಚಿವ ಮಧು ಬಂಗಾರ​‍್ಪ  Education Minister Madhu Bangarpa meets Dalai Lama


ಮುಂಡಗೋಡ 27: ತಾಲೂಕಿನ ಟಿಬೆಟ್ ಕ್ಯಾಂಪಿನ ಡ್ರೀಪುಂಗ್ ತಾಶಿ ಗೋಮಾಂಗ ಬೌದ್ಧ ಮಠಕ್ಕೆ ಕರ್ನಾಟಕ ಸರ್ಕಾರದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರ​‍್ಪ ಅವರು ಭೇಟಿ ನೀಡಿ, ಟಿಬೆಟಿಯನ್ನರ ಪರಮೋಚ್ಚ ಧರ್ಮಗುರು ಹಾಗೂ ನೊಬೆಲ್ ಶಾಂತಿ ಪುರಸ್ಕೃತ ಪೂಜ್ಯ ದಲೈ ಲಾಮ ಅವರ ದರ್ಶನ ಪಡೆದು ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಶಿರಸಿ ಉಪವಿಭಾಗಾಧಿಕಾರಿ ಕಾವ್ಯ ರಾಣಿ, ತಹಶೀಲ್ದಾರ ಶಂಕರ್ ಗೌಡಿ, ಸಿಪಿಐ ರಂಗನಾಥ ನಿಲಮ್ಮನವರ, ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಎಚ್‌.ಎಂ. ನಾಯ್ಕ, ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಹಿರೇಹಳ್ಳಿ ಸೇರಿದಂತೆ ಇತರ ಗಣ್ಯರು ಉಪಸ್ಥಿತರಿದ್ದರು.