ಇ-ಕೆವೈಸಿ ನಿಯಮಗಳನ್ನು ಸರಳಗೊಳಿಸಿದೆ : ಶರತಬಾಬು
E-KYC rules have been simplified: Sharat Babu
ಲೋಕದರ್ಶನ ವರದಿ
ಶಿಗ್ಗಾವಿ 18 : ಇ-ಕೆವೈಸಿ ನಿಯಮಗಳನ್ನು ಸರಳಗೊಳಿಸಿ ಬ್ಯಾಂಕ್ ವಹಿವಾಟು ಮತ್ತು ಖಾತೆ ತೆರೆಯುವ ಪ್ರಕ್ರಿಯೆ ಸುಲಭವಾಗಿ ಬಳಕೆಗೆ ಅವಕಾಶ ನೀಡಲಾಗಿದೆ ಎಂದು ಹಾವೇರಿ ಕೆನರಾ ಬ್ಯಾಂಕ್ ಪ್ರಾದೇಶಿಕ ಕಚೇರಿಯ ಅಧಿಕಾರಿ ಶರತ್ ಬಾಬು ಹೇಳಿದರು. ತಾಲೂಕಿನ ಮುಗಳಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಹಾವೇರಿ ಕೆನರಾ ಬ್ಯಾಂಕಿನ ಪ್ರಾದೇಶಿಕ ಕಚೇರಿ ವತಿಯಿಂದ ಹಮ್ಮಿಕೊಂಡ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ' ಮತ್ತು ಆರ್ಥಿಕ ಸಾಕ್ಷರತೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಭಾರತದ ಸೈಬರ್ಸ್ಪೇಸ್ ಹಿಂದೆಂದಿಗಿಂತಲೂ ಹೆಚ್ಚು ಚಟುವಟಿಕೆಯಿಂದ ಕೂಡಿದ್ದು, ಪ್ರತಿದಿನ ಕೋಟ್ಯಂತರ ವ್ಯವಹಾರ ಮತ್ತು ಸಂವಹನಗಳನ್ನು ನಿರ್ವಹಿಸುತ್ತಿದೆ. ಸೈಬರ್ ವಂಚನೆಗಳು ಎಂದರೆ ಅನಧಿಕೃತ ಪ್ರವೇಶ, ದತ್ತಾಂಶ ಕಳ್ಳತನ ಅಥವಾ ಆನ್ಲೈನ್ ವಂಚನೆಗಳಂತಹ ಡಿಜಿಟಲ್ ವೇದಿಕೆಗಳ ಮೂಲಕ ನಡೆಸಲಾಗುವ ವಂಚನೆ ಚಟುವಟಿಕೆಗಳು.
ಇವು ಸಾಮಾನ್ಯವಾಗಿ ಸಂತ್ರಸ್ಥರಿಗೆ ಆರ್ಥಿಕ ನಷ್ಟ ಉಂಟು ಮಾಡುವ ಉದ್ದೇಶ ಹೊಂದಿರುತ್ತದೆ ಎಂದರು. ಕೆನರಾ ಬ್ಯಾಂಕಿನ ಶಾಖಾಧಿಕಾರಿ ಲಲಿತಾ ಅವರು ಮಾತನಾಡಿ ಬ್ಯಾಂಕಿನ ಮಹಿಳೆಯರ ಸಂಬಂಧಪಟ್ಟಂತ ಕೆನರಾ ಎಂಜಿಲ್ ಅಕೌಂಟ್, ಆರ್ಡಿ ಖಾತೆ, ವಿದ್ಯಾರ್ಥಿಗಳ ಕಾಲರ್ ಶಿಪ್ ಖಾತೆಗಳ ಕುರಿತು ಹಾಗೂ ಇತ್ತೀಚಿನ ಡಿಜಿಟಲ್ ಪೇಂಟಿನ ಬಗ್ಗೆ ಪ್ರಾತ್ಯೇಕ್ಷಿಕ ಮಾಹಿತಿ ನೀಡಿದರು. ಸಂಪನ್ಮೂಲ ವ್ಯಕ್ತಿ ಎನ್.ಎನ್. ಸಕ್ರಿಯವರು ಮಹಿಳಾ ಸಬಲೀಕರಣ ವಿಷಯ ಕುರಿತು ಮಾತನಾಡಿದರು. ಸೊಸೈಟಿ ಕಾರ್ಯದರ್ಶಿ ಸುಮಾ ಬೆಂಗೇರಿ ಅಧ್ಯಕ್ಷತೆ ವಹಿಸಿದ್ದರು. ಅಮೂಲ್ಯ ಸಾಕ್ಷರತಾ ಕೇಂದ್ರದ ಅಧಿಕಾರಿ ರಾಜು ಕೆಂಭಾವಿ, ಈರಮ್ಮ ಮತ್ತೂರುಮಠ, ಮಹದೇವಕ್ಕ ಬದ್ರಶೆಟ್ಟಿ, ವಿಜಯಲಕ್ಷ್ಮೀ ಅರಳಿಕಟ್ಟಿ ಸೇರಿದಂತೆ ಇತರರು ಇದ್ದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 