ದುಗರ್ಾದೇವಿ ಜಾತ್ರೆಗೆ ಅದ್ದೂರಿ ಚಾಲನೆ
ಲೋಕದರ್ಶನ ವರದಿ
ಹಾವೇರಿ28: ತಾಲೂಕಿನ ಹನುಮನಹಳ್ಳಿ ಗ್ರಾಮದ ದುಗರ್ಾದೇವಿ ಜಾತ್ರೆಗೆ ಅದ್ಧೂರಿಯಾಗಿ ಚಾಲನೆ ನೀಡಲಾಯಿತು. ಶುಕ್ರವಾರ ಸಂಜೆ 8.00ಕ್ಕೆ ಅಲಂಕಾರಗೊಂಡ ವಾಹನದಲ್ಲಿ ದೇವಿಯನ್ನು ಶೃಂಗರಿಸಿಕೊಂಡು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೇರವಣಿಗೆ ಮುಖಾಂತರ ಸಾಗಿ ನಂತರ ದುಗರ್ಾದೇವಿ ದೇವಸ್ಥಾನ ತಲುಪಿ ದೇವಿಯನ್ನು ಪ್ರತಿಷ್ಠಾಪಿಸಿ ಊಡಿ ತುಂಬುವ ಕಾರ್ಯಕ್ರಮ ಜರುಗಿತು.
ಮರುದಿನ ಶನಿವಾರ ದಿವಸ ಸಾಯಂಕಾಲದವರೆಗೆ ದೇವಸ್ಥಾನದಲ್ಲಿ ಭಕ್ತರಿಗೆ ದರ್ಶನ ನೀಡುವ ತಾಯಿಗೆ ಊರಿನ ಗ್ರಾಮಸ್ಥರು ಪೂಜಾ ಕೈಂಕರ್ಯ ಕೈಗೊಂಡು ದೇವಿಗೆ ನೈವೇದ್ಯವನ್ನು ಅಪರ್ಿಸಿದರು.
ಮನ ಸಳೆದ ಸಿಡಿಮದ್ದಿನ ಪ್ರದರ್ಶನ: ಮೇರವಣಿಗೆಯಲ್ಲಿ ತಮಷಾ ಮದ್ದಿನ ಆರ್ಭಟ ನೋಡುಗರ ಮನ ಸೆಳೆಯಿತು ಜೊತೆಗೆ ರಾಣೇಬೆನ್ನೂರಿನ ಶಾರದಾ ಆಕರ್ೆಸ್ಟ್ರಾ ಸೌಂಡ್ ಸಿಸ್ಟಮ್ ಆಯೋಜಿಸಿದ ಸಂಗೀತ ಕಾರ್ಯಕ್ರಮದ ಹಾಡುಗಳಿಗೆ ಕುಣಿದು ಕುಪ್ಪಳಿಸಿ ಯುವ ಸಮೂಹ ಸಂಭ್ರಮಿಸಿತು.
ಜಾತ್ರೆಯ ಮೆರವಣಿಗೆಯಲ್ಲಿ ಗ್ರಾಮದ ಮುಖಂಡರಾದ ಶಿವನಗೌಡ ಲೆಕ್ಕನಗೌಡ್ರ, ಬಸವರಾಜ ರಿತ್ತಿ, ಕನಕಪ್ಪ ದಾಸಣ್ಣನವರ, ಸುನೀಲ್ ಬಂಕಾಪುರ, ಶ್ರೀಕಾಂತ ಹನುಮಗೌಡ್ರ ಸೇರಿದಂತೆ ಗುರು- ಹಿರಿಯರು, ಗ್ರಾಮಸ್ಥರು ಉಪಸ್ಥಿತರಿದ್ದರು
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 