ಡಾ. ಎಸ್‌. ಎಸ್‌. ಹಿರೇಮಠ ಇವರಿಗೆ ಇಂಡಿಯನ್ ಐಕಾನ್‌- ಕೃಷಿ ಪ್ರಶಸ್ತಿ

ಡಾ. ಎಸ್‌. ಎಸ್‌. ಹಿರೇಮಠ ಇವರಿಗೆ ಇಂಡಿಯನ್ ಐಕಾನ್‌- ಕೃಷಿ ಪ್ರಶಸ್ತಿ Dr. S. S. Hiremath to be conferred with Indian Icon - Agriculture Award

ಬೆಳಗಾವಿ 02: 77 ನೇ ಗಣರಾಜ್ಯೋತ್ಸವದ ಅಂಗವಾಗಿ ಕನ್ನಡ ಸಾಹಿತ್ಯ ಪರಿಷತ್, ಕೃಷ್ಣರಾಜ ಪರಿಷತ್ ಮಂದಿರ, ಪಂಪ ಮಹಾಕವಿ ರಸ್ತೆ, ಚಾಮರಾಜಪೇಟ ಬೆಂಗಳೂರಿನಲ್ಲಿ ಹಮ್ಮಿಕೊಂಡ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಐಸಿಎಆರ್‌-ಕೆಎಲ್‌ಇ ಕೃಷಿ ವಿಜ್ಞಾನಕೇಂದ್ರ, ಮತ್ತಿಕೊಪ್ಪದ ಸಸ್ಯ ಸಂರಕ್ಷಣೆ ವಿಜ್ಞಾನಿ ಡಾ. ಎಸ್‌. ಎಸ್‌. ಹಿರೇಮಠ ಇವರ ಸೇವೆಯನ್ನು ಗಮನಿಸಿ ಸ್ವರ್ಣ ಭಾರತ್ ಫೌಂಡೆಷನ್ ಇವರು ದಿನಾಂಕ 31.01.2026 ರಂದು ಇಂಡಿಯನ್ ಐಕಾನ್‌- ಕೃಷಿ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ. ಐಸಿಎಆರ್‌-ಕೆಎಲ್‌ಇ ಕೃಷಿ ವಿಜ್ಞಾನ ಕೇಂದ್ರದ ಕಾರ್ಯಾಧ್ಯಕ್ಷ ಹಾಗೂ ಕೆಎಲ್‌ಇ ಸಂಸ್ಥೆಯ ಆಡಳಿತ ಮಂಡಳಿಯ ನಿರ್ದೇಶಕ ಬಿ.ಆರ್‌.ಪಾಟೀಲ, ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥ ಡಾ. ಮಂಜುನಾಥ ಚೌರಡ್ಡಿ ಮತ್ತು ಎಲ್ಲ ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.