ಡಾ. ಅಂಬೇಡ್ಕರರು ಭಾರತೀಯರ ಮನದಲ್ಲಿ ಸದಾ ಸ್ಮರಣೀಯರು: ಶಿರಗಾಂವೆ

ಡಾ. ಅಂಬೇಡ್ಕರರು ಭಾರತೀಯರ ಮನದಲ್ಲಿ ಸದಾ ಸ್ಮರಣೀಯರು: ಶಿರಗಾಂವೆ Dr. Ambedkar will always be remembered in the hearts of Indians: Shirgaonve

ರಾಯಬಾಗ, 06: ದೇಶಕ್ಕೆ ಅಮೂಲ್ಯವಾದ ಸಂವಿಧಾನ ನೀಡಿರುವ ಡಾ.ಬಿ.ಆರ್‌.ಅಂಬೇಡ್ಕರರವರು ಭಾರತೀಯರ ಮನದಲ್ಲಿ ಸದಾ ಸ್ಮರಣೀಯವಾಗಿದ್ದಾರೆ ಎಂದು ಹಿರಿಯ ವಕೀಲ ಆರ್‌.ಎಸ್‌. ಶಿರಗಾಂವೆ ಹೇಳಿದರು.  

ಶನಿವಾರ ಪಟ್ಟಣದ ಡಾ.ಬಿ.ಆರ್‌.ಅಂಬೇಡ್ಕರ ವೃತ್ತದಲ್ಲಿ ವಕೀಲರ ಸಂಘದಿಂದ ಅಂಬೇಡ್ಕರರವರ 69ನೇ ಮಹಾಪರಿನಿರ್ವಾಣ ದಿನದ ಪ್ರಯುಕ್ತ ಡಾ.ಬಿ.ಆರ್‌.ಅಂಬೇಡ್ಕರ ರವರ ಪುತ್ಥಳಿಗೆ ಮಾಲಾರೆ​‍್ಣ ಮಾಡಿ,  ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ಅಂಬೇಡ್ಕರ ಅವರ ಆದರ್ಶಗಳು ನಮಗೆ ದಾರೀದೀಪವಾಗಬೇಕು ಎಂದರು. 

ಹಿರಿಯ ವಕೀಲರಾದ ಎಲ್‌.ಬಿ. ಚೌಗುಲೆ, ಬಿ.ಎನ್‌. ಬಂಡಗರ, ಎಮ್‌.ಜಿ. ಉಗಾರೆ, ಆರ್‌.ಎಲ್‌. ಅಸೋದೆ, ಆರಿ​‍್ಬ. ಕೊರವಿ, ಎಸ್‌.ಎಮ್‌.ಕಳ್ಳೆ, ಎಸ್‌.ಆರ್‌. ಮಾಂಗ, ವಿ.ಎಚ್‌. ಕಮಾಲ, ಎಸ್‌.ಪಿ. ಕಾಂಬಳೆ, ಎಮ್‌.ಎಮ್‌. ಪಾಟೀಲ, ಗಣೇಶ ಕಾಂಬಳೆ, ಎಲ್‌.ಎಚ್‌. ನಾಗರಮುನ್ನೋಳ್ಳಿ, ಕೆ.ಎಲ್‌. ಕೆರೂರೆ, ಬಿ.ಎಲ್‌. ಕೋಳಿಗುಡ್ಡೆ, ಸಾಗರ ಝಂಡೇನ್ನವರ, ಮೇಘರಾಜ ಮಾಳಗೆ, ಅಣ್ಣಾಸಾಹೇಬ ಅಸೋದೆ ಸೇರಿ ಹಿರಿಯ ಮತ್ತು ಕಿರಿಯ ವಕೀಲರು ಇದ್ದರು.