ಬಸವೋತ್ಸವದಲ್ಲಿ ಡೋಣೂರಮಠಗೆ ಸನ್ಮಾನ

ಬಸವೋತ್ಸವದಲ್ಲಿ ಡೋಣೂರಮಠಗೆ ಸನ್ಮಾನ Donur Math honored during Basavotsava

         ದೇವರಹಿಪ್ಪರಗಿ 19: ಬೆಂಗಳೂರಿನ ವಿಜಯನಗರ ಹಂಪಿ ಕ್ರೀಡಾಂಗಣದಲ್ಲಿ ಅಥಣಿ ಶಿವಬಸವ ಶ್ರೀಗಳ ನೇತೃತ್ವದಲ್ಲಿ ಜರುಗಿದ ಬಸವೋತ್ಸವ ಹಾಗೂ ಅಥಣಿ ಮುರುಘೇಂದ್ರ ಶಿವಯೋಗಿಗಳ ಜಯಂತ್ಯೋತ್ಸವದಲ್ಲಿ ತಾಲೂಕಿನ ಸಾತಿಹಾಳ ಗ್ರಾಮದ ಸಮಾಜ ಸೇವಕ ಪ್ರಕಾಶ ಡೋಣೂರಮಠ ರ ಸಮಾಜ ಸೇವೆಯನ್ನು ಗುರುತಿಸಿ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.  

         ಮೈಸೂರು ಸುತ್ತೂರು ಮಠದ ಜಗದ್ಗುರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಭೋವಿ ಗುರಪೀಠದ ಜಗದ್ಗುರು ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ, ಮಾದಾರ ಚನ್ನೆಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನೆಯ್ಯ ಸ್ವಾಮೀಜಿ, ಮಡಿವಾಳ ಗುರುಪೀಠದ ಬಸವ ಮಾಚೀದೇವ ಸ್ವಾಮೀಜಿ ಸೇರಿದಂತೆ ರಾಜಕೀಯ ಮುಖಂಡರು, ಸ್ವಾಮೀಜಿಗಳು, ಪ್ರಮುಖರು, ಗಣ್ಯರು ಹಾಗೂ ಭಕ್ತರು ಉಪಸ್ಥಿತರಿದ್ದರು.