ನಾಳೆ ಗದಗದಲ್ಲಿ ಜ್ಞಾನೇಶ್ವರಿ ಪೀಠದ ಉಭಯ ಶ್ರೀಗಳ ದೈವಜ್ಞ ದರ್ಶನ ಕಾರ್ಯಕ್ರಮ
Divine darshan program of the two saints of the Jnaneshwari Peetha in Gadag tomorrow
ಗದಗ 14:- ಶ್ರೀಮದ್ ಜಗದ್ಗುರು ಶಂಕರಾಚಾರ್ಯರು 'ಸಂಸ್ಥಾನ ದೈವಜ್ಞ ಬ್ರಾಹ್ಮಣ ಮಠಾದೀಶರಾದ ಪರಮ ಪೂಜ್ಯ ಸಚ್ಚಿದಾನಾಂದ ಜ್ಞಾನೇಶ್ವರ ಭಾರತೀ ಮಹಾಸ್ವಾಮಿಗಳವರ ಹಾಗೂ ಪರಮ ಪೂಜ್ಯ ಸುಜ್ಞಾನೇಶ್ವರ ಭಾರತೀ ಸ್ವಾಮಿಜಿಗಳವರ ದೈವಜ್ಞ ದರ್ಶನ ಕಾರ್ಯಕ್ರಮವನ್ನು ದೈವಜ್ಞ ಸಮಾಜೋನ್ನತಿ ಸಂಘ (ರಿ) ಗದಗ-ಬೆಟಗೇರಿ, ದೈವಜ್ಞ ಮಹಿಳಾ ಮಂಡಳಿ ಗದಗ-ಬೆಟಗೇರಿ, ಗೈವಜ್ಞ ಯುವಕ ಮಂಡಳಿ ಗದಗ-ಬೆಟಗೇರಿ ಇವರ ಸಂಯುಕ್ತಾಶ್ರಯದಲ್ಲಿ ಇದೇ ದಿನಾಂಕ 16-12-2025 ರ ಮಂಗಳವಾರ ದಂದು ಸಾಯಂಕಾಲ 4 ಘಂಟೆಗೆ ಗದಗ ಶಹರದ ಹುಬ್ಬಳ್ಳಿ ರಸ್ತೆ ಮುಳಗುಂದ ನಾಕಾದಲ್ಲಿರುವ ವಿಠ್ಠಲಾರೋಢ ಸಮುದಾಯ ಭವನದಲ್ಲಿ ದೈವಜ್ಞ ಬ್ರಾಹ್ಮಣ ಉಭಯ ಶ್ರೀಗಳಿಂದ ದೈವಜ್ಞ ದರ್ಶನ ಕಾರ್ಯಕ್ರಮವನ್ನು ಆಯೋಜಿಸಲಾಗಿರುತ್ತದೆ.
ಸಮಸ್ತ ಗದಗ ಬೆಟಗೇರಿ ಅವಳಿ ನಗರದ ದೈವಜ್ಞ ಬ್ರಾಹ್ಮಣ ಸಮಾಜ ಭಾಂದವರು ಉಭಯ ಶ್ರೀಗಳ ದೈವಜ್ಞ ದರ್ಶನ ಕಾರ್ಯಕ್ರಮದಲ್ಲಿ ಪುರುಷರು ಬಿಳಿ ಶರ್ಟು ಮತ್ತು ಬಿಳಿ ಲುಂಗಿ ಕೇಸರಿ ಶಲ್ಯ. ಯುವಕ ಮಂಡಳಿಯವರಿಗೆ ಬಿಳಿ ಜುಬ್ಬಾ ಮತ್ತು ಕೇಸರಿ ಶಲ್ಯ. ಧರಿಸಿಕೊಂಡು ಕಾರ್ಯಕ್ರಮದಲ್ಲಿ ಭಾಗವಹಿಸಿ ಜ್ಞಾನೇಶ್ವರಿ ದೇವಿಯ ಹಾಗೂ ಉಭಯ ಶ್ರೀಗಳ ಕೃಪಾಶಿರ್ವಾದಕ್ಕೆ ಪಾತ್ರರಾಗಲು ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ದೈವಜ್ಞ ದರ್ಶನ ಉತ್ಸವ ಸಮಿತಿ, ದೈವಜ್ಞ ಸಮಾಜೊನ್ನತಿ ಸಂಘ(ರಿ), ದೈವಜ್ಞ ಮಹಿಳಾ ಮಂಡಳಿ, ದೈವಜ್ಞ ಯುವಕ ಮಂಡಳಿಯ ವತಿಯಿಂದ ಸಮಸ್ತ ಸಮಾಜ ಭಾಂಧವರಲ್ಲಿ ವಿನಂತಿಸಲಾಗಿರುತ್ತದೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 