ವರುಣಗೌಡ್ರ ಅಭಿಮಾನಿ ಬಳಗದಿಂದ ನೋಟ್ ಪುಸ್ತಕ ಪೆನ್ನು ವಿತರಣೆ
Distribution of notebooks and pens by Varuna Gowda's fan club
ವರುಣಗೌಡ್ರ ಅಭಿಮಾನಿ ಬಳಗದಿಂದ ನೋಟ್ ಪುಸ್ತಕ ಪೆನ್ನು ವಿತರಣೆ
ಶಿಗ್ಗಾವಿ 20: ಸದಾ ಬಡವರ ಪರವಾಗಿ ದೀನ ದಲಿತರ ಪರವಾಗಿ ಮಿಡಿಯುವ ಹೃದಯ ವರುಣಗೌಡ ಪಾಟೀಲ ಅವರದು ಎಂದು ವಿನಯ್ ಹೊನ್ನಣ್ಣವರ ಹೇಳಿದರು. ತಾಲೂಕಿನ ಶ್ಯಾಡಂಬಿ ಕುನ್ನೂರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ ಹಾಗೂ ಹಿರೇಬೆಂಡಿಗೇರಿ ಗ್ರಾಮದ ಕಾನ್ವೆಂಟ್ ಶಾಲೆಗೆ ವರುಣಗೌಡ ಪಾಟೀಲ ಅವರ ಜನ್ಮ ದಿನದ ನಿಮಿತ್ತ ಬಡ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ್ ಪೆನ್ನು ಪೆನ್ಸಿಲ್ ವಿತರಣೆ ಮಾಡಿ ಮಾತನಾಡಿದ ಅವರು ವರುಣಗೌಡ ಪಾಟೀಲ ಅವರ ಜನ್ಮ ದಿನದ ಅಂಗವಾಗಿ ಅವರ ಸಮಾಜ ಸೇವೆಗೆ ಪ್ರೇರಿತರಾಗಿ ಇಂದು ಶಾಲಾ ವಿದ್ಯಾರ್ಥಿಗಳಿಗೆ ಅಧ್ಯಯನ ಸಾಮಗ್ರಿಗಳನ್ನು ನೀಡಿರುವದು ಸಂತೋಷ ತಂದಿದೆ ಅವರಿಗೆ ಇನ್ನೂ ಹೆಚ್ಚಿನ ಸಮಾಜ ಸೇವೆ ಮಾಡುವ ಶಕ್ತಿ ಭಗವಂತ ನೀಡಲಿ ಎಂದರು. ಜಾನಪದ ಕಲಾವಿದ ಶರೀಫ್ ಮಾಕಪ್ಪನವರ ಅವರು ಮಾತನಾಡಿ ವರುಣಗೌಡ ಪಾಟೀಲ ಅವರು ಜನ್ಮದಿನಾಚರಣೆ ವಿಶೇಷವಾದ ಸಾಮಾಜಿಕ ಕಾರ್ಯಕ್ರಮಗಳನ್ನು ಮಾಡುವದರ ಮೂಲಕ ಆಚರಣೆ ಮಾಡುತ್ತ ಬಂದಿದ್ದಾರೆ ಈ ಭಾರಿಯ ಜನ್ಮ ದಿನವನ್ನು ವರುಣ ಪಾಟೀಲ ಅಭಿಮಾನಿ ಬಳಗದ ವತಿಯಿಂದ ಶಿಗ್ಗಾವಿ ತಾಲೂಕಿನ ಸರ್ಕಾರಿ ಶಾಲೆಯ ಐದನೂರು ಬಡ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ್ ಪೆನ್ನು ಪೆನ್ಸಿಲ್ ವಿತರಣೆ ಹಾಗೂ ತಾಲೂಕಿನ ಬಿಸನಳ್ಳಿ ಗ್ರಾಮದಲ್ಲಿನ ವೇದ ಪಾಠ ಶಾಲಾವಿದ್ಯಾರ್ಥಿಗಳಿಗೆ ಮದ್ಯಾಹ್ನ ಅನ್ನ ಸಂತರೆ್ಣ ಮಾಡುವ ಮೂಲಕ ಜನ್ಮ ದಿನ ಆಚರಣೆ ಮಾಡಲಾಗಿದೆ.ಇವೆಲ್ಲವೂ ಅವರ ಸಾಮಾಜಿಕ ಕೆಲಸಗಳಿಂದ ಪ್ರೇರಣೆಯಾಗಿದೆ ಎಂದರು. ಈ ಸಂದರ್ಭದಲ್ಲಿ ವರುಣ ಪಾಟೀಲ ಅಭಿಮಾನಿ ಬಳಗದ ನಾಗರಾಜ್ ಕ್ಯಾಬಳ್ಳಿ, ಮಂಜುನಾಥ ಮಾಕಪ್ಪನವರ, ಮೈಲಾರಿ ಅಗಸರ, ಕೃಷ್ಣ ಭೀಮನವರ, ಸುರೇಶ ಸಂಜೀವಣ್ಣವರ, ಮಂಜು ಚವಾಣ, ಅಜ್ಜಪ್ಪ ಸಂಜೀವಣ್ಣವರ, ಗಣೇಶ ಭೀಮನವರ, ಸಂಜೀವ್ ಓಲೇಕಾರ ಹಾಗೂ ಇತರರು ಹಾಜರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 