ರೈತರಿಗೆ ಭಿತ್ತನೆ ಬೀಜ ವಿತರಣೆ
Distribution of millet seeds to farmers
ಲೋಕದರ್ಶನ ವರದಿ
ತಾಂಬಾ: ಮುಂಗಾರು ಪರ್ವ ಆರಂಭಗೊಂಡಿದೆ ಆದರೆ ಈ ಬಾರಿ ಇಲ್ಲಿಯವರೆಗೆ ಈ ಭಾಗದಲ್ಲಿ ಮಳೆಯ ಕೊರತೆ ಎದ್ದು ಕಾಣುತ್ತಿದೆ ತೇವಾಂಶ ನೋಡಿ ಬಿತ್ತಲು ರೈತರು ಪ್ರಾರಂಭ ಮಾಡಬೇಕೆಂದು ಸಾನಿಧ್ಯ ವಹಿಸಿದ ಮಲ್ಲಯ್ಯ ಸಾರಂಗಮಠ ರೈತರಿಗೆ ಸಲಹೆ ನೀಡಿದರು.
ಗ್ರಾಮದ ಕೃಷಿ ಕೇಂದ್ರದಲ್ಲಿ ಬೀಜವನ್ನು ರೈತರಿಗೆ ವಿತರಣೆ ಮಾಡಿ ಮಾತನಾಡಿದ ಅವರು ಅಧಿಕಾರಿಗಳ ಸಲಹೆ ಮೇರೆಗೆ ಬೀಜೋಪಚಾರ ಮಾಡಿ ಬಿತ್ತನೆ ಮಾಡಬೇಕು ಸರಕಾರದ ರಿಯಾಯಿತಿ ದರದಲ್ಲಿ ರೈತರಿಗೆ ಕೊಡುವ ಬೀಜಗಳನ್ನು ಖರೀದಿಸಿ ಬಿತ್ತಬೇಕು ಎಂದರು.
ಗ್ರಾಪಂ ಮಾಜಿ ಅಧ್ಯಕ್ಷರಾದ ರಾಚಪ್ಪ ಗಳೇದ, ಪತ್ರಕರ್ತ ಲಕ್ಷ್ಮಣ ಹಿರೇಕುರಬರ, ರೈತ ಮುಖಂಡ ಮಾದೇವ ಮೂಲಿಮನಿ, ಚಂದ್ರಮ ಮೂಲಿಮನಿ, ಎಸ್.ಎಮ್.ಹೂಗಾರ, ಸಂಜೀವ ಮಂಗಳೂರ, ಮಾದೇವ ಮುಂಜಿ, ಮಾಳಪ್ಪ ಜಿಡ್ಡಿಮನಿ, ಸಿದ್ದು ಪೂಜಾರಿ, ದಾವೂಲ್ಸಾಬ ಕಸಾಬ, ಗಜಾನಂದ ಭರಮಣ ಸೇರಿದಂತೆ ಮತ್ತಿತರರು ಇದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 