ಪಲಾನುಭವಿಗಳಿಗೆ ದಿನ ಬಳಕೆಯ ವಾತ್ಸಲ್ಯ ಕಿಟ್ಟ ವಿತರಣೆ
Distribution of daily use love kits to the beneficiaries
ಉಗರಗೋಳ 08: ಗ್ರಾಮಗಳಲ್ಲಿ ಕಡು ಬಡವರನ್ನು ಗುರುತಿಸಿ, ವಾತ್ಸಲ್ಯ ಯೋಜನೆಯಡಿಯಲ್ಲಿ. ಶೌಚಾಲಯ, ತಿಂಗಳ ಮಾಶಾಸನ, ಸೂರಿನ ವ್ಯವಸ್ಥೆಯನ್ನು ಕಲ್ಪಿಸಿಕೊಡಲಾಗುತ್ತಿದ್ದು, ಎಲ್ಲವರ್ಗದ ಜನರು ಸಮಾಜದಲ್ಲಿ ನೆಮ್ಮದಿಯ ಜೀವನ ನಡೆಸುವಂತಾಗಬೇಕೆಂದು ತಾಲೂಕಾ ಯೋಜನಾಧಿಕಾರಿ ಸುಭ್ರಾಯ್ ನಾಯ್ಕ ಹೇಳಿದರು.
ಸವದತ್ತಿ ತಾಲೂಕಿನ ಉಗರಗೋಳ ಗ್ರಾಮದಲ್ಲಿ ಶನಿವಾರ ಗ್ರಾಮಾಭಿವೃದ್ದಿ ಯೋಜನೆಯ ಅಡಿಯಲಿ, 23 ಅಶಕ್ತ ಕುಟುಂಭಕ್ಕೆ ವಾತ್ಸಲ್ಯ ಕಿಟ್ಟ, 23 ಕುಟುಂಬಕ್ಕೆ ನಿತ್ಯ ಬಳಿಕೆಯ ಪಾತ್ರೆ ಬಟ್ಟೆಗಳ ಕಿಟ್ ಹಾಗೂ ಜೀವನ ನಿರ್ವಹಣೆಗೆ ಪರಿತಪಿಸುತ್ತಿರುವ 98 ಅಶಕ್ತ ಕುಟುಂಬಕ್ಕೆ ಧರ್ಮಸ್ಥಳ ಗ್ರಾಮಾಭಿವೃದ್ದಿ ಜ್ಞಾನವಿಕಾಸ ಯೋಜನೆಯಡಿ ತಿಂಗಳು 1000 ರೂ ಮಾಶಾಸನವನ್ನು ವಿತರಿಸಿ ಮಾತನಾಡಿದ ಅವರು ಡಾ,ವಿರೇಂದ್ರ ಹೆಗಡೆ ಅವರು ಗ್ರಾಮಾಭಿವೃದ್ದಿ ಸಂಸ್ಥೆಯ ಮೂಲಕ ಕರ್ನಾಟಕ ರಾಜ್ಯಾಧ್ಯಂತ ಹಲವಾರು ಸಮಾಜಮುಖಿ ಕೆಲಸ ಕಾರ್ಯವನ್ನು ಮಾಡುತ್ತಿದ್ದಾರೆ ಎಂದರು.
ಒಕ್ಕೂಟದ ಅಧ್ಯಕ್ಷೆ ನಿಂಗಮ್ಮ ಹಳ್ಳಿ, ಗ್ರಾಪಂ ಸದಸ್ಯರಾದ ಶಂಕ್ರಮ್ಮ ಮುದ್ರಗಣಿ, ಅಪ್ಪು ಕಾಳಪ್ಪನವರ, ಬಸವರಾಜ ಗೊವಪ್ಪನವರ, ಯಲ್ಲಪ್ಪ ಮೀಯಪ್ಪನವರ, ಮೇಲ್ವಿಚಾರಕಿ ಮಮತಾ ವೈಧ್ಯ, ಶಾಂತಮ್ಮ ಮಡಿವಾಳ, ನೀಲಮ್ಮ ಕರೀಕಟ್ಟಿ, ಗಂಗಮ್ಮ ಮಡಿವಾಳರ, ರೇಣಪ್ಪ ರೊಟ್ಟಿ, ವಿಜಯಕುಮಾರ ಹಾಗೂ ಗ್ರಾಮಸ್ಥರು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 