ಡಿಜಿಟಲೀಕರಣ-ತಂತ್ರಜ್ಞಾನದ ಪ್ರಭಾವದಿಂದ ಮುಂಚೂಣಿಯತ್ತ ಇ-ಕಾಮರ್ಸ ಕ್ಷೇತ್ರ

Digitization – E-commerce sector at the forefront due to impact of technology

ಡಿಜಿಟಲೀಕರಣ-ತಂತ್ರಜ್ಞಾನದ ಪ್ರಭಾವದಿಂದ ಮುಂಚೂಣಿಯತ್ತ ಇ-ಕಾಮರ್ಸ ಕ್ಷೇತ್ರ  

ವಿಜಯಪುರ 02: ಇಂದು ಇ-ಕಾಮರ್ಸ ವಿಶ್ವದ್ಯಾದಂತ ಪ್ರಥಮ ದಜೆಯ ವಿತರಣಾ ಚಾನೆಲ್ ಆಗಿ ಮಾರ​‍್ಪಟಟಿದೆ. ದೇಶದಲ್ಲಿ ಹೆಚ್ಚುತ್ತಿರುವ ತಂತ್ರಜ್ಞಾನ, ಡಿಜಿಟಲೀಕರಣ, ಇಂಟರ್‌ನೆಟ್ ಮತ್ತು ಸ್ಮಾರ್ಟಪೋನಗಳಿಂದ ಜನರು ಇ-ಕಾಮರ್ಸ, ಆನಲೈನ್ ಮತ್ತು ನೆಟವರ್ಕ ಮಾರ್ಕೆಟಿಂಗ್ ಪ್ಲಾಟ್‌ಫಾರಂಗಳ ಮೂಲಕ ಸರಕು ಮತ್ತು ಸೇವೆಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಇತ್ತೀಚಿನ ವರದಿ ಪ್ರಕಾರ, ಒಟ್ಟು ಖರೀದಿ ಮತ್ತು ಮಾರಾಟ ವ್ಯವಹಾರಗಳ ಪ್ರಮಾಣದಲ್ಲಿ ಶೇ25ಅ ರಷ್ಟು ಸಂಘಟಿತ ಚಿಲ್ಲರೆ ಮಾರುಕಟ್ಟೆಯಲ್ಲಿ ಇ-ಕಾಮರ್ಸ ಮೂಲಕ ವ್ಯವಹರಿಸಲ್ಪಡುತ್ತಿವೆ. 2030 ರ ವೇಳೆಗೆ ಇದರ ವ್ಯವಹಾರಗಳಲ್ಲಿ ಶೇ.37ಅ ರಷ್ಟು ಬೆಳವಣಿಗೆಯಾಗಲಿದೆ ಹಾಗೂ 2040 ರ ವೇಳೆಗೆ ಅಮೇರಿಕಾ ದೇಶವನ್ನು ಹಿಂದಿಕ್ಕಿ ಜಗತ್ತಿನಲ್ಲಿಯೇ ಎರಡನೇಯ ದೊಡ್ಡ ರಾಷ್ಟ್ರವಾಗಲಿದೆ ಎಂಬ ಅಂಶ ಕಂಡುಬಂದಿದೆ. ವಿಶೇಷವಾಗಿ ಜಾಗತಿಕವಾಗಿ ಬೆಳೆಯುತ್ತಿರುವ ತಂತ್ರಜ್ಞಾನ ಮತ್ತು ಡಿಜಿಟಲೀಕರಣ ವ್ಯವಸ್ಥೆಯಿಂದ ಮಾರುಕಟ್ಟೆಯಲ್ಲಿ ಅಮೂಲಾಗ್ರವಾದ ಸುಧಾರಣೆಗಳನ್ನು ತಂದು ತನ್ಮೂಲಕ ನೇರವಾಗಿ ಗ್ರಾಹಕರಿಗೆ ಅಗ್ಗದ ದರದಲ್ಲಿ ಉತ್ಕೃಷ್ಟದ ಗುಣಮಟ್ಟ ವಸ್ತು, ಉತ್ತಮ ವಿತರಣಾ ವ್ಯವಸ್ಥೆ ಮತ್ತು ಗ್ರಾಹಕ ಸಂತೃಪ್ತಿಯೊಂದಿಗೆ ಮಾರಾಟ ಮಾಡಲು ಇ-ಕಾಮರ್ಸ ಪ್ರಯೋಜನಕಾರಿಯಾಗಿದೆ ಎಂದು ವಿಜಯಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯಶಾಸ್ತ್ರ ಪ್ರಾಧ್ಯಾಪಕ ಪ್ರೊ. ಎಂ.ಎಸ್‌.ಖೊದ್ನಾಪೂರ ಅವರು ಅಭಿಪ್ರಾಯಪಟ್ಟರು.  

 ಅವರು ಮಹರಾಷ್ಟ್ರದ ಪುಣೆ ಜಿಲ್ಲೆಯ ನಾರಾಯಣಗಾಂವ ಎ.ಸಿ.ಎಸ್‌. ಕಾಲೇಜಿನಲ್ಲಿ ದಿನಾಂಕ: 31-01-2025 ರಂದು ಜರುಗಿದ “ಇಂಪ್ಯಾಕ್ಟ್‌ ಆಫ್ ಡಿಜಿಟಲ್ ಟ್ರಾನ್ಸ್‌ಫಾರೇ​‍್ಮಷನ್ ಆನ್ ಕಾಮರ್ಸ ್ಘ ಮ್ಯಾನೇಜಮೆಂಟ್‌” ವಿಷಯ ಕುರಿತು ಆಯೋಜಿಸಿದ್ದ ಅಂತರಾಷ್ಟ್ರೀಯ ವಿಚಾರ ಸಂಕೀರಣದಲ್ಲಿ ವಿಷಯ ಸಂಪನ್ಮೂಲ ವ್ಯಕ್ತಿಯಾಗಿ ಸಂಶೋಧನಾ ಪ್ರಬಂಧ ಮಂಡಿಸಿ, ಮಾತನಾಡುತ್ತಿದ್ದರು.  

ಅವರು ತಮ್ಮ ಸಂಶೋಧನಾ ಪ್ರಬಂಧ ಮಂಡಿಸುತ್ತಾ, ಇಂದಿನ ಸ್ಪರ್ಧಾತ್ಮಕ ಪರಿಪೂರ್ಣ ಪೈಪೋಟಿ ಮಾರುಕಟ್ಟೆಯಲ್ಲಿ ಇ-ಕಾಮರ್ಸ ಕ್ಷೇತ್ರವು ಬಹುಬಗೆಯ ಬ್ರ್ಯಾಂಡೆಂಡ್ ವಸ್ತಗಳನ್ನು ಗ್ರಾಹಕರಿಗೆ ಅವರ ಆಸಕ್ತಿ, ಅಭಿರುಚಿ, ಆಶೋತ್ತರ ಮತ್ತು ಬೇಡಿಕೆ ಮತ್ತು ಕೊಳ್ಳುವ ಸಾಮರ್ಥ್ಯಗನುಗುಣವಾಗಿ ಸರಕುಗಳನ್ನು ಕೊಂಡುಕೊಳ್ಳಲು ಪೂರಕವಾದ ಮಾರುಕಟ್ಟೆಯನ್ನು ಒದಗಿಸುತ್ತದೆ. ಸ್ಮಾರ್ಟಫೋನ್‌ಗಳ ಬಳಕೆಯಿಂದ ಇಡೀ ಜಗತ್ತು ಇಂದು ಬೆರಳ ತುದಿಯ ಮೇಲೆ ನಿಂತಿದೆ. ಇದು ವಿವಿಧ ಮಾಧ್ಯಮಗಳ ಮೂಲಕ ಡಿಜಿಟಲ್ ಜಾಹೀರಾತು, ಸಾಮಾಜಿಕ ಮಾಧ್ಯಮಗಳು, ವೈಯಕ್ತಿಕ ಮಾರ್ಕೆಟಿಂಗ್, ಸೃಜನಾತ್ಮಕ ತಂತ್ರಗಳು, ಶ್ರವಣ ಮತ್ತು ದೃಶ್ಯ ಜಾಹೀರಾತು ಮಾಧ್ಯಮಗಳನ್ನು ಬಳಸಿಕೊಂಡು ಗ್ರಾಹಕರಿಗೆ 24*7 ನಿರಂತರ ಸೇವೆಗಳನ್ನು ನೀಡುತ್ತಿದೆ. ನವೀನ ತಂತ್ರಜ್ಞಾನ, ಸಂಶೋಧನೆ, ಕೃತಕ ಬುದ್ಧಿಮತ್ತೆ ಮತ್ತು ಇಂಟರನೆಟ್ ಆಫ್ ಥಿಂಗ್ಸ್‌ ಮತ್ತು ದೊಡ್ಡ ಡೇಟಾ ವಿಶ್ಲೇಷಣೆಯಂತಹ ಅತ್ಯಾಧುನಿಕ ತಂತ್ರಜ್ಞಾನದಿಂದ ಇಡೀ ಮಾರುಕಟ್ಟೆಯ ಚಿತ್ರಣವೇ ಬದಲಾಗಿದೆ. ಡಿಜಿಟಲೀಕರಣದ ಪ್ರಭಾವದಿಂದಾಗಿ 2040 ರ ವೇಳೆಗೆ ಭಾರತದಲ್ಲಿ ಇ-ಕಾಮರ್ಸ ಸಂಸ್ಥೆಗಳ ಒಟ್ಟಾರೆ ವ್ಯವಹಾರದ ಪ್ರಮಾಣವು ಚಿಲ್ಲರೆ ಮಾರುಕಟ್ಟೆಯಲ್ಲಿ ಶೇ 95ಅ ರಷ್ಟು ಆನಲೈನ್‌ನಲ್ಲಿ ಗ್ರಾಹಕರು ತಮಗಿಷ್ಟವಾದ ವಸ್ತುಗಳನ್ನು ಕೊಂಡುಕೊಳ್ಳಲಿದ್ದಾರೆ ಎಂದು ಅಂದಾಜಿಸಲಾಗಿದೆ. ಆದರೆ ತಂತ್ರಜ್ಞಾನದಲ್ಲಿರುವ ನ್ಯೂನ್ಯತೆಗಳಿಂದ ಹಣ ಪಾವತಿಯ ಸಂದರ್ಭದಲ್ಲಿ ಸೈಬರ್ ಸುರಕ್ಷತೆಯ ಯಕ್ಷ ಪ್ರಶ್ನೆ ಗ್ರಾಹಕರನ್ನು ಕಾಡುತ್ತಿದೆ. ಇದರಿಂದ ಗ್ರಾಹಕರಲ್ಲಿ ಹಣ ಕಳೆದುಕೊಳ್ಳುವ ಭೀತಿಯಿಂದ ಗ್ರಾಹಕರು ವ್ಯವಹಾರಗಳನ್ನು ಮಾಡಲು ಹಿಂದೇಟು ಹಾಕುತ್ತಿದ್ದಾರೆ ಎನ್ನುವ ಅಂಶ ತಿಳಿದುಬಂದಿದೆ.   

ವಿಚಾರಸಂಕೀರಣದ ಎರಡನೇಯ ಗೋಷ್ಠಿಯಲ್ಲಿ ಥೈಲ್ಯಾಂಡ್‌ನ ಫರನ್‌ಕಾನ್ ರಾಜಭಟ್ ವಿಶ್ವವಿದ್ಯಾಲಯದ ಡಾ. ಸೋಮನೀಕ್ ಚೂಸುವಾನ್, ಡಾ. ಚೈವತ್ ಫೂಕ್‌ಹಾಂಗ್ ಹಾಗೂ ಹಿಮಾಲಯನ್ ವಿಶ್ವವಿದ್ಯಾಲಯದ ಪ್ರೊ. ವೈಸ್ ಚಾನಲ್ಸರ್ ಡಾ. ಪ್ರಕಾಶ ದಿವಾಕರನ್ ಇನ್ನಿತರರು ವೇದಿಕೆಯ ಮೇಲಿದ್ದರು.  

ಈ ಅಂತರಾಷ್ಟ್ರೀಯ ವಿಚಾರಸಂಕೀರಣವು ಇಂಟರನ್ಯಾುಶನಲ್ ಕೌನ್ಸಿಲ್ ಆಫ್ ಜೂರಿಸ್ಟ್‌-್ಸ, ಲಂಡನ, ಫರನ್‌ಕಾನ್ ರಾಜಭಟ್ ವಿಶ್ವವಿದ್ಯಾಲಯ, ಬ್ಯಾಂಕಾಕ್ ಹಾಗೂ ಎ.ಸಿ.ಎಸ್‌. ಕಾಲೇಜು ನಾರಾಯಣಗಾಂವ ಪುಣೆ ಇವುಗಳ ಸಹಯೋಗದಡಿಯಲ್ಲಿ ಆಯೋಜಿಸಲಾಗಿತ್ತು. ಈ ವಿಚಾರಸಂಕೀರಣದಲ್ಲಿ ಸುಮಾರು 350 ಕ್ಕೂ ಹೆಚ್ಚು ದೇಶ-ವಿದೇಶಗಳ ವಿವಿಧ ಪ್ರಾಧ್ಯಾಪಕರು, ಉದ್ಯಮಿದಾರರು, ಸಂಶೋಧನಾರ್ಥಿಗಳು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.