ಜನತಾ ಬಜಾರ್ ಅಧ್ಯಕ್ಷರ ರಾಜಿನಾಮೆಗೆ ಒತ್ತಾಯ
Demand for resignation of Janata Bazaar President
ಬಳ್ಳಾರಿ 27: ನಗರದಲ್ಲಿನ ಜನತಾ ಬಜಾರ್ ನ ಅಧ್ಯಕ್ಷರಾಗಿರುವ ಕೆ.ಎ.ವೇಮಣ್ಣ ಅವರನ್ನು ರಾಜೀನಾಮೆ ನೀಡುವಂತೆ ಜನತಾ ಬಜಾರ್ ಮಾಜಿ ಅಧ್ಯಕ್ಷ ಜಿ.ನೀಲಕಂಠಪ್ಪ ಆಗ್ರಹಿಸಿದ್ದಾರೆ.ಅವರು ಈ ಕುರಿತು ಪತ್ರಿಕಾ ಹೇಳಿಕೆ ನೀಡಿ, ನಾಳೆ ಕಾರ್ಯಕಾರಿ ಸಭೆ ನಡೆಯಲಿದ್ದು, ನೀವು ಜ. 30 ದಿನಾಂಕ ನಮೂದಿಸಿ ಸಭೆಯು ನಡೆಯುವ ಮುನ್ನವೇ ಅಧ್ಯಕ್ಷ ಸ್ಥಾನದ ರಾಜಿನಾಮೆ ಪತ್ರಕ್ಕೆ ಸಹಿ ಮಾಡಿಕೊಡಬೇಕು ಎಂದು ವೇಮಣ್ಣ ಅವರಿಗೆ ಕೋರಿದ್ದಾರೆ.ಇಲ್ಲದಿದ್ದ ಪಕ್ಷದಲ್ಲಿ ಸಭೆಗೆ ಕೋರಂನ ಕೊರತೆ ಆಗುವ ಸಂಭವವಿದೆ. ಅಧ್ಯಕ್ಷರ ಆಕಾಂಕ್ಷಿಗಳು 4 ಸದಸ್ಯರಿದ್ದಾರೆ. ಮುಂಬರುವ ದಿನಗಳಿಗೆ ಇದರಲ್ಲಿ ಕೊನೆ ಪಕ್ಷ ಇಬ್ಬರಾದರೂ ಅಧ್ಯಕ್ಷರಾಗಲಿ ಮತ್ತು ಇಬ್ಬರು ಉಪಾಧ್ಯಕ್ಷರಾಗಲಿ ನನ್ನ ಮತ್ತು ಕೆಲವು ನಿರ್ದೇಶಕರ ಅಭಿಪ್ರಾಯವಾಗಿದೆ.ತಮ್ಮ ಅಧ್ಯಕ್ಷರ ಅಧಿಕಾರವಧಿ ಒಂದು ವರ್ಷವೆಂದು ಈ ಹಿಂದೆ ಮಾತಾಗಿದ್ದು, ಜನವರಿ ತಿಂಗಳಿಗೆ ತಮ್ಮ ಅಧಿಕಾರಾವಧಿ ಮುಕ್ತಾಯವಾಗುತ್ತಿದೆ.
ಆದರೆ, ತಾವುಗಳು ಬರುವ ಮಾರ್ಚ್ ತಿಂಗಳಲ್ಲಿ ರಾಜಿನಾಮೆ ಕೊಡುತ್ತೀರೆಂದು ನಮಗೆ ತಿಳಿದು ಬಂದಿದ್ದು, ಇದಕ್ಕೆ ನನ್ನ ಮತ್ತು ಕೆಲವು ನಿರ್ದೇಶಕರ ಒಪ್ಪಿಗೆ ಇರುವುದಿಲ್ಲ.ನೀವು ತಕ್ಷಣ ರಾಜೀನಾಮೆ ನೀಡದಿದ್ದರೆ ನಮ್ಮ ದಾರಿ ನಮಗೆ, ನಿಮ್ಮ ದಾರಿ ನಿಮಗೆ ಎಂದಿದ್ದಾರೆ.ಜನತಾ ಬಜಾರ್ ನ ಹಾಲಿ ಆಡಳಿತ ಮಂಡಳಿಯ ಅವಧಿ ಬರುವ 2027 ರ ಮಾರ್ಚ್ ವರೆಗೆ ಮಾತ್ರ ಇದೆ. ಈ ಹಿಂದೆ ನಿಮಗೆ ಒಂದು ವರ್ಷ ನಿಗಧಿಯಾಗಿತ್ತು ಮಾತಿಗೆ ಬದ್ಧರಾಗಿರಿ ಎಂದಿದ್ದಾರೆ.ಮುಂದಿನ 13 ತಿಂಗಳ ಅವಧಿಯಲ್ಲಿ ಆರು, ತಿಂಗಳಿಗೆ ಒಬ್ಬರಂತೆ ಅಧ್ಯಕ್ಷ ಉಪಾಧ್ಯಕ್ಷರಾಗಲು ನಿರ್ದೇಶಕರುಗಳಾದ, ಪಲ್ಲೇದ ಮೈತ್ರಿ, ಕೇದಾರ್, ವೆಂಕಟೇಶ್ ಹೆಗಡೆ ಹಾಗು ಹಲಕುಂದಿ ಮಲ್ಲಿಕಾರ್ಜುನಗೌಡ ಸಿದ್ದರಾಗಿ ಈಗಾಗಲೇ ನಿರ್ದೇಶಕರುಗಳಿಗೆ ಪಾರ್ಟಿ ಕೊಟ್ಡು ತಮ್ಮ ಬೆಂಬಲ ಪಡೆಯುವ ಕಾರ್ಯದಲ್ಲಿ ಮಗ್ನರಾಗಿದ್ದಾರೆ. ಆದರೂ ನಗರದ ಮಾಜಿ ಶಾಸಕ ಸೋಮಶೇಖರ ರೆಡ್ಡಿ, ಶ್ರೀನಿವಾಸ್ ಮೋತ್ಕರ್ರ ಅವರು ಬೆಂಬಲವೂ ಆಕಾಂಕ್ಷಿಗಳಿಗೆ ಬೇಕಾಗಿದೆ ಎಂದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 